Thursday, December 14, 2023

ಬದಲಾದ ಕಾಲವೂ ...   ಬದಲಾದ ಆದ್ಯತೆಯೂ ... 
 
 ಜೊತೆಗೆ ಬದಲೇ ಆಗದ ಮನಸತ್ವವೂ ....

 
 


ಆಕೆ..  ಮದುವೆಯ ಹೊಸ ಅದ್ಯಾಯದ ಮುಂಬಾಗಿಲಿಗೆ ಬಂದು ನಿಂತಿದ್ದಾಳೆ ..,  ಎನವಳ ಇಚ್ಛೆ .. ಎನವಳ  ನೀರಿಕ್ಷೆ..,  ಎನವಳ ಆದ್ಯತೆ..,  ತನ್ನವನೊಂದಿಗೆ..,
 
 ಒಂದು ಹೆಣ್ಣು ಒಂದು  ಗಂಡಿನ  ಆಸರೆಗಾಗಿ  ಆಶ್ರಯಕ್ಕಾಗಿ.. ಆಶ್ರಯಿಸುವ ಕಾಲಘಟ್ಟವನ್ನು  ದಾಟಿ ಬಂದದ್ದಾಗಿದೆ..., ಸಾಕಗಲಿಕ್ಕಿಲ್ಲ ಅವಳಿಗೆ ಬರೀ ತನ್ನೆಸರಿನ ಮುಂದೊಂದು ಅವನ ಹೆಸರು..,  ಸಾಕಗಲ್ಲಿಕ್ಕಿಲ್ಲ ಅವಳಿಗೆ ಹೊಟ್ಟೆ.., ಬಟ್ಟೆ.., ಅದಕ್ಕೂ ಇದಕ್ಕೂ ಕೊರತೆ ಎನಿಸದ ಬದುಕು.., ಬೇಕು ಅವಳಿಗೂ ಆಯ್ಕೆಯ ಅವಕಾಶ.., ಆತನ ಮನ್ನಣೆ ತನ್ನ ಅಭಿಪ್ರಾಯಗಳಿಗೆ.., ತನ್ನ ಆತ್ಮಾಭಿಮಾನಕ್ಕೆ  ಧಕ್ಕೆ ತರದಂತವನು ,  ಬೇಕು ಅವಳಿಗೂ..  ಭಾವನೆಗಳಿಗೆ ಸ್ಪಂದಿಸುವವನು ..,  ಹಿಡಿ ಗೌರವಿಸುವವನು ...,
 
  ನಿಜವೇ ಅಲ್ಲವೆ.. ಹೆಣ್ಣಿನ ಆದ್ಯತೆಗಳು ಇಂದು ಬದಲಾಗಿವೆ..,  ಜೊತೆಗೆ ಗಂಡಿನದ್ದೂ ..! ವಿದ್ಯೆ, ಓದು, ಉದ್ಯೋಗ ವೃತ್ತದೊಳಗೆ  ಗಂಡು ಹೆಣ್ಣು ಭೇದವಿಲ್ಲದಂತೆ ಸ್ನೇಹಿತರ ಗುಂಪುಕೂಡಿಕೊಂಡಿರುವಾತನಿಗೆ  ಹೆಂಡತಿಯಲ್ಲೂ ಒಂದು ಸ್ನೇಹಿತೆಯನ್ನು ಆತ ಕಂಡುಕೊಳ್ಳುತ್ತಾನೆ.., ಭಾವನೆಗಳನ್ನು ಗೌರವಿಸುತ್ತಾನೆ, ಅರ್ಥೈಸಿಕೊಳ್ಳುತ್ತಾನೆ,  ಹೆಚ್ಚು ಹೆಚ್ಚು ಪ್ರಪಂಚ ನೋಡುವ ಆತ  'ತನ್ನನ್ನು ಮನೆಯನ್ನು ಮಕ್ಕಳನ್ನು ನೋಡಿಕೊಂಡಿರಲಿ ' ಎನ್ನುವಂತಹ ಚೌಕ್ಕಟ್ಟಿನಾಚೆ  ತನ್ನ ಹೆಜ್ಜೆಯನ್ನು ಯಾವತ್ತಿಗೋ ಇರಿಸಿದ್ದಾನೆ..,  ಉದ್ಯೋಗಸ್ತ ಪತ್ನಿಯನ್ನು  ಗೌರವಿಸುತ್ತಾನೆ..  ಸಮಾಜದಲ್ಲಿ,, ಸ್ನೇಹಿತರ ನಡುವೆ ಹೆಂಡತಿಯಾದವಳು ಉದ್ಯೋಗಿಯಾಗಿದ್ದಲ್ಲಿ.., ಉದ್ಯಮಿಯಗಿದ್ದಲ್ಲಿ.., ಯಾವುದೇ ರಂಗದಲ್ಲಿ ಪರಿಣಿತಿ ಹೊಂದಿದ್ದಲ್ಲಿ ... ಗೌರವದ ಪಾಲು ಆತನಿಗೂ..., ಉದ್ಯೋಗದಲ್ಲಿ ಇಲ್ಲದಿದ್ದಾಗಿಯೂ ವಿದ್ಯಾವಂತ  ಪತ್ನಿಯನ್ನು ಬಯಸುತ್ತಾನೆ, ಉನ್ನತ ಕನಸುಳ್ಳವನಿಗೆ  ಉಪ್ಪಿಟ್ಟಿಗೆ ರವೆ ತರಲಿಲ್ಲ , ಹಬ್ಬಕ್ಕೆ ಸೀರೆ ಕೊಡಿಸಿಲ್ಲ  ಎನ್ನುವಂತಹದಕ್ಕೆ ಸೀಮಿತವೆನಿಸುವ ಧೋರಣೆಗಳು ಅಡಿಗೆ ಮನೆಯ ಚೌಕಟ್ಟಿನಾಚೆ  ಬದುಕು ನೋಡದವಳ ಜೊತೆ ಆತನ ಬದುಕಿಗೆ ಶ್ರುತಿ ಸ್ವರ ಸೇರಲಿಕ್ಕಿಲ್ಲ.   ಬದಲಿಗೆ ಅರ್ಥಿಕವಾಗಿ  ಆಲೋಚಿಸುವ , ತನ್ನ ಭಾವನೆಗಳಿಗೆ ಸ್ಪಂದಿಸುವ , ತನ್ನೆಲ್ಲ ಅಭಿಪ್ರಾಯ, ನಿರ್ಧಾರಗಳನ್ನು  ಸಮಾಲೋಚಿಸುವ ಕಾಲಮಾನಕ್ಕೆ ತಕ್ಕಂತಿರುವ , ಮಕ್ಕಳಿಗೆ ಅತ್ಯನ್ನುತ ಭವಿಷ್ಯವನ್ನು ಕಲ್ಪಿಸಿಕೊಡಬಲ್ಲ, ಜವಭ್ದಾರಿಯುತ ಹೆಂಡತಿ ಆತನಿಗೂ ಬೇಕು. 
 
ಸಂತೋಷವಾಗಲೇ ಬೇಕಾದ್ದು .. ಬದಲಾದ  ಹಿರಿಯರ, ಪೋಷಕರ ಆಲೋಚನೆಗಳಿಗೆ.. ನಡುವಳಿಕೆಗೆ.., 'ಮಗನಾ ..?' 'ಮಗಳಾ ?' ಎಂದೂ ಯೋಚಿಸದೆ ವಿದ್ಯಾಭ್ಯಾಸಕ್ಕೆ  ಅವರ ಉದ್ಯೋಗಕ್ಕೆ ಕೊಡುತ್ತಿರುವ ಪ್ರಾಮುಖ್ಯತೆ.., ಸಾಕ್ಷಿ ಸಾವಿರದಷ್ಟಿದೆ.., ಮಗಳನ್ನು   ವಿದ್ಯಾಭ್ಯಾಸಕ್ಕಾಗಿ ಉದ್ಯೋಗ್ಕಾಗಿ  ದೂರದೂರದೂರಿಗೂ ಕಳಿಸಿಕೊಡಲು ಹೆಜ್ಜೆ ಹಿಂದಿಕ್ಕುತ್ತಿಲ್ಲ.., ಪೋಷಕರೇ ಮಗಳಿಗೆ ಬೆಂಗಾವಲಾಗಿದ್ದಾರೆ..., ಇನ್ನೂ ಅಂದರೆ ವಿದ್ಯಾವಂತೆಯಾಗಿರುವ  ಉದ್ಯೋಗದಲ್ಲಿರುವ ಸೊಸೆಯನ್ನೇ  ಬಯಸುತ್ತಾರೆ .., ಅದರಲ್ಲೊಂದು ಹೆಮ್ಮೆ ಕಂಡುಕೊಂಡಿದ್ದಾರೆ.  
 
ಒಂದೆಡೆ ಎಲ್ಲವೂ  .. ಚಂದ ಚಂದ ... ಆದರೆ ಅಷ್ಟು ಸರಾಗವಲ್ಲ ... ಉದ್ಯೋಗಸ್ತ ಮಹಿಳೆಗೆ,  ತನ್ನ ಕ್ಷೇತ್ರದಲ್ಲಿ ತಾನು ತೊಡಗಿಸಿಕೊಂಡ ಮಹಿಳೆಗೆ ವಾಸ್ತವದಲ್ಲಿ ಹಲಾವಾರು ಸವಾಲುಗಳು ಎದುರಿಸಬೇಕಿದೆ. 
 
ಹೊರಗಡೆ ಕಾಲಿಟ್ಟು ದುಡಿಯುವ ಮಹಿಳೆ .., ಮನೆಯ ಒಳಗೆ ಎಲ್ಲವನ್ನೂ ತಾನೊಬ್ಬಳೆ ಸಂಬಾಳಿಸಬೇಕು .. ಗಂಡನಾದವನು ತನ್ನ ಉದ್ಯೋಗಿ  ಹೆಂಡತಿಯನ್ನು ಇಷ್ಟಪಡಬಲ್ಲವನೆ ಹೊರತು ಮನೆಯ ಜವಭ್ದಾರಿಯಲ್ಲಿ  ಆತ  ಪಾಲುದಾರನಾಗಲಾರ .., ಆತನ ತಪ್ಪಿಲ್ಲ .., ಸಮಾಜದಿಂದ ಕುಟುಂಬದಿಂದ ಆತನಿಗೆ ಬೋದಿಸದೆ ಬೋದನೆಯಾಗಿರುತ್ತದೆ .., '  ಮಕ್ಕಳ ಜವಾಭ್ದಾರಿ ಅವನು ತೆಗೆದುಕೊಳ್ಳಲಾರ .. 'ಹೆಣ್ಣಿಗೆ ಮಾತ್ರವೇ ಸಹನೆ ಇರುವುದು .. ಇರತಕ್ಕದು .., ಗಂಡಿನಲ್ಲಿ ಅದಿರದು .. ಇರಬೇಕಾಗಿದ್ದಿಲ್ಲ ' ಎನ್ನುವಂತಹ ಭಾವನೆಗಳು  ಆತನಲ್ಲಿ ಅಂತರ್ಗತವಾಗಿರುತ್ತದೆ ..., ಇನ್ನು ಹೊರ ಜಗತ್ತಿನಲ್ಲಿ ಕೂಡ ಆಕೆ  ಆತನಿಗೆ ಹೊರತಾಗಿರುವ  ಪುರುಷನ ದೌರ್ಜನ್ಯ, ರಕ್ಷಣೆ, ಸುರಕ್ಷತೆ  ತರಹೇವಾರಿ  ಸವಾಲುಗಳು ಆಕೆಯ ಬಗಲಲ್ಲಿ ಕುಳಿತಿರುತ್ತದೆ .  
 ,
ವಾಸ್ತವದಲ್ಲಿ  ಹೀಗಿದ್ದರೆ.. ಇನ್ನು  'ಮೆನೆ ಕೆಲಸ', 'ಗಂಡ' , 'ಜವಭ್ದಾರಿ ' ತಲೆಬರಹದಡಿ  ಮನಸಿಗೊಂದಿಷ್ಟು ಕಷ್ಟವನ್ನು .. ತಪ್ಪಿತಸ್ತ ಭಾವನೆಯನ್ನು ಆಕೆಗೆ  ಬಲವಂತವಾಗಿ ಉಣಿಸುತ್ತವೆ  ಒಂದು ಭಾಗದ ಸಮಾಜ .. ಒಂದಷ್ಟು   ಮನಸತ್ವ... ,
 
ಇಲ್ಲವೇ ಎಂದಿಲ್ಲ .., " ' ಮಗಳಿಗೆ ಓದಿಸಿದರೆ.. ಮದುವೆಯಾಗುವವಳು  ಸುಮ್ಮನೆ ಹಣ ಖರ್ಚು', 'ಸೊಸೆಯಾದವಳು  ತಗ್ಗಿ ಬಗ್ಗಿ ನಡೆದು ಅತ್ತೆ ಮಾವ ಗಂಡ ಮಕ್ಕಳನ್ನು ಮನೆ ಕೆಲಸವನ್ನು ನೋಡಿಕೊಂಡಿರಬೇಕು' , ಹೆಂಡತಿಯಾದವಳು ಯಾವತ್ತೂ ತನಗಿಂತ  ಒಂದು ಸ್ತರ ಕೆಳಗಿದ್ದು ತನ್ನ ಅಹಂ ಅನ್ನು ತೃಪ್ತಿ ಪಡಿಸುತ್ತಿರಬೇಕು ', ಅಕ್ಕನೋ ತಂಗಿಯೋ ಆದವಳು ಒಗ್ಗರಣೆಯಾಚೆ, ಚುಕ್ಕಿ ರಂಗೊಲಿಯಾಚೆ ತನ್ನ ಬದುಕನ್ನು ತೆರೆದುಕೊಳ್ಳಬಾರದು ' " ಎನ್ನುವಂತಹ    ಮನಸತ್ವಗಳು .. , ದುಃಖದ ಮೊತ್ತ ಹೆಚ್ಚಿದ್ದರೂ ಅಂತವರ ಸಂಖ್ಯ ನಮ್ಮ ನಡುವೆ ಕಡಿಮೆ  ಎಂಬುವಲ್ಲಿ ಸಣ್ಣ ಸಂತೋಷವನ್ನು  ತಂದಿಟ್ಟುಕೊಳ್ಳೋಣ. 
 
 
ಬದಲಾವಣೆಯೊಂದೇ ಶಾಶ್ವತವಾಗಿರುವಾಗ ... ಮುಂದಿನ ದಿನಗಳಲ್ಲಿ ಮಹಿಳೆಗೆ   ಇನ್ನೂ  ಒಳ್ಳೆಯ ನಾಳೆಗಳಿರಲಿ ... , ಅಂತಹ ನಾಳೆಗಳನ್ನು  ಒದಗಿಸಿಕೊಡುವ  ಮನಸತ್ವ ಜವಭ್ದಾರಿ ಆತನಿಗೆ  ಕುಟುಂಬಕ್ಕೆ,  ಸಮಾಜಕ್ಕಿರಲಿ.  
 
 
ಹಾಂ... ಮೊನ್ನೆಯಷ್ಟೇ ೩೪೦ ದಿನಗಳ ಕಾಲ ಅಂತರಿಕ್ಷ ವಾಸವನ್ನು ಕಾರ್ಲೆ ಅವರೊಂದಿಗೆ ಯಶಸ್ವಿಯಾಗಿ ಪೂರೈಸಿಬಂದ ಮೈಖೇಲ್ ಕೊರಿಯೆಂಕೊ,  'ಮಹಿಳಾ ದಿನಾಚಾರಣೆ ' ಗೆ ಇನ್ನೂ ಹೆಚ್ಚಿನ ಮೊತ್ತವನ್ನು ಸೇರಿಸಿದ್ದಾರೆ. ಅತ್ಯಂತ ಹೆಮ್ಮೆ ನಮ್ಮೆಲ್ಲರಗಿದೆ.  ಹೆಮ್ಮೆ ಇದ್ದರಷ್ಟೇ ಸಾಲದು   ಅಲ್ಲವೇ ..?
 
ಚೈತ್ರಾ  ಬಿ.ಜಿ.
 

  

      

Friday, December 4, 2020

ಬಹುಶಃ  ಎಲ್ಲಾ ಪಾಲಕರನ್ನು ಬಹುವಾಗಿ ಚಿಂತೆಗೀಡುಮಾಡುವ ಒಂದು ಸಮಸ್ಯೆ ಎಂದರೆ ಅದು ಮಕ್ಕಳು ಮೊಬೈಲು ಟ್ಯಾಬ್ ಲ್ಯಾಪ್ಟಾಪ್ ಗಳಲ್ಲಿ ಮುಳುಗಿ ಹೋಗುತ್ತಿರುವುದು. ಅದರಿಂದ ಆಗಬಹುದಾದ  ಕಣ್ಣು ಮತ್ತು ಆರೋಗ್ಯಕ್ಕೆ ಸಂಭಂದಿಸಿದ ಸಮಸ್ಯೆಗಳು ಒಂದು ಕಡೆಯಾದರೆ ಇನ್ನೊಂದು ಕಡೆಯಿಂದ ಅವರ ದೈಹಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇತರ ಮಕ್ಕಳೊಂದಿಗೆ ಬೆರೆತು ಆಡುವುದರಿಂದ ಸಿಗಬಹುದಾದ ವಾಸ್ತವತೆಯ ಅನುಭವದಿಂದ ವಂಚಿತರಾಗುತ್ತಾರೆ. ಇದ್ದಿರಬಹುದಾದ ಬೆಳೆಸಿಕೊಳ್ಳಬಹುದಾದ  ಕಲೆ ಕೌಶಲ್ಯ ಗಳ ಸಾಧ್ಯತೆಗಳಿಂದ ಹೊರತಾಗುತ್ತಾರೆ. ಮನೋರಂಜನೆ ಮಿತಿ ಮೀರಿ ಬಾಲ್ಯದ ಹದವನ್ನು  ತಪ್ಪಿಸುತ್ತಿದೆಯಾ ಎನ್ನುವ ದಿಗಿಲಾಗುತ್ತದೆ ಒಮ್ಮೊಮ್ಮೆ  ಪಾಲಕರಿಗೆ.

ಮಕ್ಕಳು ಮೊಬೈಲನ್ನು ಅತಿಯಾಗಿ ನೋಡುತ್ತಾರೆ, ಯಾವಾಗಲೂ ಬರಿಯ ಗೇಮನ್ನೇ ಆಡುತ್ತಾ ಇರುತ್ತಾರೆ, ಯೂಟ್ಯೂಬಿನಲ್ಲಿ ಬೇಕಾದ್ದು ಬೇಡವಾದ್ದು ಎಲ್ಲವನ್ನೂ ನೋಡುತ್ತಾರೆ ಎನ್ನುವ ದೂರು, ಆತಂಕ ಎಲ್ಲಾ ಪಾಲಕರದ್ದೂ ಇರಬಹುದು. ಹೇಳಿದರೆ ಅಷ್ಟು ಸುಲಭಕ್ಕೆ ಮಕ್ಕಳು ಕೇಳುವುದಿಲ್ಲ. ಸ್ವಲ್ಪ ಚಿಕ್ಕ ಮಕ್ಕಳು ಅತ್ತು ಕರೆದು ರಂಪ ಮಾಡಿದರೆ ಹದಿ ಹರೆಯಕ್ಕೆ ತಲುಪಿದ ಮಕ್ಕಳ ಬಳಿ ಮಾತಾಡುವುದೇ ದುಸ್ತರ, ಒಂದು ಮಾತಿಗೆ ಎರಡು ಮಾತು ಆ ಕಡೆಯಿಂದ ಕಿವಿಗೆ ಅಪ್ಪಳಿಸುತ್ತದೆ. ಪಾಲಕರೂ ಒಮ್ಮೊಮ್ಮೆ ಬೇಸತ್ತು ಈ ರಗಳೆಗಳಿಗೆಲ್ಲ ಅಂಜಿ ಎದುರಿಸಲಾರದೆ ಏನಾದರೂ ಮಾಡಿಕೋ ಎನ್ನುತ್ತಾ ಮೊಬೈಲು ಕೈಗಿಟ್ಟು  ಮಾಡಲು ಬೇಕಾದಷ್ಟು ಕೆಲಸವಿರುವಾಗ ಅದರೊಳಗೆ ತೂರಿ ಕೊಳ್ಳುತ್ತಾರೆ. ಮತ್ತದೇ ಬೇಸರ ಶುರುವಿಟ್ಟುಕೊಳ್ಳುತ್ತದೆ, ಮಗು ಯಾವಾಗಲೂ ಮೊಬೈಲ್ ನೋಡುತ್ತದೆ ಎನ್ನುವುದು. 

ಯಾಕೆ ಹೀಗೆ ಆಗುತ್ತದೆ?

ಪಾಲಕರ ಉದ್ದೇಶ ಸರಿ ಇದ್ದರೂ ಕೂಡ ಅವರು ಅನುಸರಿಸುವ ಮಾರ್ಗ ಅಷ್ಟು ಸಮಂಜಸ ಆಗಿರುವುದಿಲ್ಲ, ಸಾಮಾನ್ಯವಾಗಿ ಪಾಲಕರು ಏನು ಮಾಡುತ್ತಾರೆ?  ಮಗುವಿನ ಮುಂದೆ 'ಬೇಡಿಕೆ' ಇಡಬಹುದು, ಆಸಕ್ತಿಯ ತುತ್ತ ತುದಿಯಲ್ಲಿ ಮುಳುಗಿದ ಮಗು ಕಿವಿಗೆ ಹಾಕಿ ಕೊಳ್ಳುವುದಿಲ್ಲ.  ಗದರುವಿಕೆ ಕಿರುಚುವುದು, ಬೈಯುವಿಕೆಯಿಂದ ಪ್ರಯೋಜನವಿಲ್ಲ ನಮ್ಮ ಅಸಹಾಯಕತೆ ಮತ್ತು ಬಲಹೀನತೆಯನ್ನು  ಸೂಚಿಸುತ್ತದೆ. ಮಗುವಿನಲ್ಲಿ ಆಕ್ರೋಶ ಭಾವವನ್ನು ಹುಟ್ಟು ಹಾಕುತ್ತದೆ.  ಮತ್ತು ಕೆಲವೊಮ್ಮೆ ಮಗುವು ತಾನಾಗಿಯೇ ತಿಳಿದುಕೊಳ್ಳಬೇಕು ಎಂದು ಪಾಲಕರು ಅಂದುಕೊಳ್ಳುತ್ತಾರೆ ಇಲ್ಲ ಇದು ವರ್ಕ್ ಔಟ್ ಆಗದು ಸಾಮಾನ್ಯವಾಗಿ ಯಾವ ಅಭ್ಯಾಸಗಳಿಗೂ ಇದು ಯಶಸ್ವಿಯಾಗದು. 


ಮೊಬೈಲು ಟ್ಯಾಬ್ಗಳನ್ನು ಮಕ್ಕಳಿಗೆ ಕೊಡಲೇ ಬಾರದೆ?

ಎಲ್ಲವಕ್ಕೂ ತಂತ್ರಜ್ಞಾನವನ್ನೇ ಬಳಸಿಕೊಳ್ಳುವ  ಅಳವಡಿಸಿಕೊಂಡಿರುವ ನಾವು ಮಕ್ಕಳನ್ನು ಮಾತ್ರ ಅದರಿಂದ ಹೊರತುಪಡಿಸಲು ಸಾಧ್ಯವೇ!? ಸಾಧುವೇ!?  ಕಾಲಕ್ಕೆ  ಪರಿಸ್ಥಿತಿಗೆ ತಕ್ಕಂತೆ   ಮಕ್ಕಳಿಗೂ ಅವೆಲ್ಲದರ ಜ್ಞಾನ ಅತ್ಯವಶ್ಯಕ. ಬಳಸಲೇ ಬಾರದು ಎನ್ನುವ ಕಟ್ಟು ನಿಟ್ಟು ಸಲ್ಲ. ಅದರಲ್ಲೂ ಈಗ ಮಕ್ಕಳಿಗೆ ಅದರಲ್ಲಿಯೇ ತರಗತಿಗಳು ನಡೆಯುತ್ತಿವೆಯಾದ್ದರಿಂದ  ಎಲ್ಲರ ಅಂಗೈಯಲ್ಲೂ ಫೋನೋ ಟ್ಯಾಬೋ ಲ್ಯಾಪ್ಟಾಪ್ ಗಳು ಲಭ್ಯವಿದ್ದೇ ಇರುತ್ತದೆ. ಇನ್ನೂ ಮುಖ್ಯ ಎಂದರೆ ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಗೊತ್ತಿದ್ದರೆ ಇವುಗಳು ಪೂರಕವೇ. ಆದರೆ ಸಮಸ್ಯೆ ಇರುವುದು ಅದರ ಮಿತಿಮೀರಿದ ಬಳಕೆಯಲ್ಲಿ.  ಹುಟ್ಟಿ ಆರು ತಿಂಗಳು ಕಳೆದಿರದ ಮಗುವೂ ಮೊಬೈಲಿನ ಎಡೆಗೆ  ಆಕರ್ಷಿತವಾಗುತ್ತದೆ. ಎರಡು ವರ್ಷದ ಮಗುವಿಗೆ ಮೊಬೈಲಿದ್ದರೆ ಮಾತ್ರ ಊಟ ಸೇರುತ್ತದೆ. ನಾಲ್ಕು ವರ್ಷದ ಮಗುವಿಗೆ ಮೊಬೈಲಿನಲ್ಲಿ ಅದರಿಷ್ಟದ ರೈಮ್ಸ್ ಹಾಕಿಕೊಡಲೇ ಬೇಕು. ಅದರ ಮೇಲ್ಪಟ್ಟ ಮಕ್ಕಳು ಗೇಮ್ಸ್,  ಯೂಟ್ಯೂಬ್ ಮತ್ತೊಂದು ಇನ್ನೊಂದು ಅಂತ ನೋಡುತ್ತಲೇ ಇರುತ್ತವೆ. ಮೊನ್ನೆ  ಒಂದು ಮದುವೆ ಮನೆಯಲ್ಲಿ ಕಂಡ ದೃಶ್ಯ ಎಂದರೆ ಹೆಚ್ಚು ಕಡಿಮೆ ವಯಸ್ಸಿನ  ಒಂದು ಎಂಟು ಹತ್ತು ಮಕ್ಕಳು ಪಕ್ಕ ಪಕ್ಕದಲ್ಲಿ ಕುಳಿತು ತಮ್ಮ ಕೈಯಲ್ಲಿದ್ದ ಮೊಬೈಲು ಟ್ಯಾಬಿನಲ್ಲಿ ಮುಳುಗಿ ಹೋಗಿದ್ದರು. ಮೊಬೈಲು ಬೇಕು ನಿಜ ಆದರೆ ಅದರ ಬಳಕೆ ಹೆಚ್ಚಾದರೆ?  ಅನೇಕ ರೀತಿಯ ಅಡ್ಡ ಪರಿಣಾಮಗಳು ಆಗುತ್ತಲೇ ಹೋಗಿಬಿಡುತ್ತದೆ.



ಹಾಗಾದರೆ ಮತ್ತೆ ಏನು ಮಾಡಬೇಕು? ಹೇಗೆ ಮಕ್ಕಳನ್ನು ಸ್ಕ್ರೀನ್ ಟೈಮನ್ನು ಮ್ಯಾನೇಜ್ ಮಾಡಬೇಕು? ಕೆಲವಷ್ಟಿದೆ ಸರಳ ಸುಲಭ ವಿದಾನಗಳು. ಪ್ರತಿ ಮಗುವು ಭಿನ್ನ ಅಳವಡಿಸಿಕೊಳ್ಳುವಾಗ ಮಗುವಿನ ವಯಸ್ಸು, ತಿಳುವಳಿಕೆಯನ್ನು ಗಮನದಲ್ಲಿರಿಸಿಕೊಳ್ಳಬೇಕು.


1. ನಿಗದಿತ ಸಮಯ

ಮಕ್ಕಳಿಗೆ ಮೊಬೈಲನ್ನು ನೋಡಲು  ವಯಸ್ಸಿಗೆ ಅನುಗುಣವಾಗಿ ಇಂತಿಷ್ಟೇ ಸಮಯ ಅಂತ ಮೀಸಲಿಡಬೇಕು. ಎಷ್ಟು ಸಮಯ? ಇಂತಿಷ್ಟೇ ಅಂತ ಸಾರಸಾಗಟವಾಗಿ  ಹೇಳುವುದು ಕಷ್ಟ. ಮಗು ಬರೀ ಯೂಟ್ಯೂಬ್ ಅದು ಇದು ನೋಡುತ್ತದೆಯಾದರೆ  45 ನಿಮಿಷ ಹೆಚ್ಚು. ಡಾಕ್ಯುಮೆಂಟರಿಯಾದರೆ 3 ಗಂಟೆ ಬೇಕಾಗುತ್ತದೆ. ಗೇಮ್ಸ್ ಆದರೆ ಇನ್ನೊಂದು ತರಹ. ಹಾಗೆಯೇ ಅವರವರೇ ಎಷ್ಟು  ಎನ್ನುವುದನ್ನು ನಿರ್ಧರಿಸಬೇಕಾಗುತ್ತದೆ. ಯಾವ ಸಮಯ? ಮಕ್ಕಳು ದೊಡ್ಡವರಿದ್ದರೆ ಅದನ್ನು ಅವರೊಂದಿಗೆ  ಚರ್ಚಿಸಿ ನಿರ್ಧರಿಸಬಹುದು. ಉದಾಹರಣೆಗೆ ಮಗು 12 ವರ್ಷ ಮೇಲ್ಪಟ್ಟಿದ್ದರೆ, ಹೀಗೆ ಹೇಳಬಹುದು, ' ನಿನ್ನ ಸಮಯ ಇಂತಿಷ್ಟು ನಿನಗೆ ಯಾ ಆ ಸಮಯ ಅನೂಕೂಲ? ಅಥವಾ ಇದನ್ನು ವಿಭಾಗಿಸಿಕೊಳ್ಳ ಅಹುದು" ಮಗುವಿಗೆ ಆಲೋಚನೆ ಬದಲಾಗುತ್ತದೆ ತನಗೆ ಕೊಟ್ಟ ಸ್ವಾತಂತ್ರ್ಯ ಖುಷಿ ಪಡು ತ್ತದೆ. ತಾ ಈ ಆಯ್ದುಕೊಂಡ ಸಮಯವಾದದರಿಂದ ಮಗುವಿನಲ್ಲೋ ದು ಭಾಧ್ಯತೆ ಬೆಳೆಯುತ್ತ ದೇ. ಮಗು ಚಿಕ್ಕದಿದ್ದರೆ ನಾವೇ ಒಂದು ಸಮಯವನ್ನು ನಿರ್ಧರಿಸಬೇಕಾಗುತ್ತದೆ. 


2. ಖಂಡಿತ ಪಾಲಿಸಬೇಕು

ಸಮಯ ನಿಗದಿ ಮಾಡಿಕೊಳ್ಳುವುದು ಸುಲಭ  ಆದರೆ ಪಾಲಿಸುವುದಿದೆಯಲ್ಲ ಅಲ್ಲೇ ಪಾಲಕರು ಎಡವುವುದು.  ಯಾವ ಕಾರಣಕ್ಕೂ ನಿರ್ಧಾರದಿಂದ ಹಿಂದೆ ಸರಿಯಬಾರದು. ಎಷ್ಟು ಸಮಯವೋ ಅಷ್ಟೇ ಕೊಡಬೇಕು. ಪಾಲಕರ ಜಾಣ್ಮೆ ಹಾಗೂ ತಾಳ್ಮೆ ಇಲ್ಲಿ ಬಹಳ ಮುಖ್ಯ. ಮಗು ಸಮಯವನ್ನು  ವಿಸ್ತರಿಸಲು ತಪ್ಪಿಸಲು ಸಾವಿರ ನೆಪಗಳನ್ನು ಹುಡುಕುತ್ತದೆ. ಅವಕ್ಕೆಲ್ಲಾ ಬಗ್ಗುಬಾರದು ನಿರ್ದಾರದಿಂದ ಹಿಂದೆ ಸರಿಯಬಾರದು. ಉದಾಹರಣೆಗೆ, ಮಗು " ಅಮ್ಮ ಪ್ಲೀಸ್ ಅರ್ಧ ಆಗಿದೆ ಪೂರ್ತಿ ನೋಡಿಕೊಳ್ಳಲಾ ?" ಎನ್ನುತ್ತದೆ ಎಂದುಕೊಳ್ಳಿ ಅದು ನಿಜವೂ ಇರಬಹುದು.  ಹೂ ಎಂದರೆ ಅದನ್ನೇ ಮಗು ಅಭ್ಯಾಸ ಮಾಡಿಕೊಳ್ಳುತ್ತದೆ, ಉಹೂಂ ಎಂದರೆ ನಿಜವಾಗಿಯೂ ಮಗುವು ಆಸಕ್ತಜಿದಾಯಕವಾಗಿ ನೋಡುತ್ತಿದ್ದರೆ ಅದಕ್ಕೆ ನೋಡಿದ ತೃಪ್ತಿ ಸಿಗದೆ ಇರಬಹುದು. ಆಗ ಮಗೂ ಇವತ್ತು ಎಷ್ಟು ಸಮಯ ಹೆಚ್ಚು ನೋಡುತ್ತೀಯೋ ಅಷ್ಟು ಸಮಯ ನಾಳೆ ಕಡಿಮೆ ಮಾಡಿಕೋ ಎಂದು ಮೃದುವಾಗಿ ಆದರೆ ದೃಢವಾಗಿ ಹೇಳಬೇಕು. ನೀವು ಕೇಳಬಹುದು ಇಷ್ಟೆಲ್ಲಾ ಬೇಕೇ ಮಗುವಿಗೆ ಕೊಟ್ಟರೆ ಆಗದೆ? ಇಲ್ಲ ಎಂದೇ ಹೇಳಬೇಕು. ಯಾವುದೇ ನಿಯಮವಿರಲಿ ಅದನ್ನು ಪಾಲಿಸದಿದ್ದರೆ ಅದು ವ್ಯರ್ಥ ಮಗು ಅದನ್ನು ಹಗುರಾವಾಗಿ  ಪರಿಗಣಿಸುತ್ತದೆ. ಮುಂದೆ ಯಾವುದೇ ನಿಯಮಕ್ಕೆ ಮಗು ಜಗ್ಗುವುದೂ ಇಲ್ಲ ಬಗ್ಗುವುದೂ ಇಲ್ಲ.


3. ಅರ್ಥೈಸಬೇಕು

ಮಗುವಿಗೆ ಹಾಗೆ ಮಾಡು ಹೀಗೆ ಮಾಡು ಎನ್ನುವುದಕ್ಕಿಂತ ಅದು ಯಾಕೆ ಎನ್ನುವುದನ್ನು ಸದಾ ಹೇಳಬೇಕು.  ಮಗು ಅದಿಲ್ಲವಾದರೂ ಮಗು ಒಂದು ಒಳ್ಳೆಯ  ಕಾರಣಕ್ಕೆ ಎನ್ನುವುದು ಅರ್ಥ ಮಾಡಿಕೊಳ್ಳುತ್ತದೆ. ಹೇಗೂ ಮಗು ನೋಡಿಕೊಳ್ಳುತ್ತದೆ ಆದಷ್ಟು ಮಗುವಿನ  ಆಸಕ್ತಿಗೆ ಅನುಗುಣವಾಗಿ  ಉಪಯುಕ್ತ ಮತ್ತು ಅವಶ್ಯಕವಾದದ್ದನ್ನು ಪರಿಚಯಿಸುತ್ತಾ ಹೋಗಬೇಕು.

4.  ಬದಲು ಕೊಡಬೇಕು

ಮಕ್ಕಳಿಗೆ ದೈಹಿಕ ಚಟುವಟಿಕೆ  ಅತ್ಯಂತ ಅವಶ್ಯಕ. ಮಗು ತನ್ನೆಲ್ಲಾ ಚಟುವಟಿಕೆಗಳಿಂದ ಹೊರತಾಗಿ ಸ್ಕ್ರೀನ್ ನೋಡುವುದನ್ನು ಯಾವುದೇ ಕಾರಣಕ್ಕೂ ಪ್ರೇರೇಪಿಸಬಾರದು. ದೈಹಿಕ ಚಟುವಟಿಕೆ ಜೊತೆ ಜೊತೆಗೆ ಸ್ಕ್ರೀನ್ ನೋಡುತ್ತಿದೆಯಾದರೆ ಹೆಚ್ಚು ಚಿಂತಿಸಬೇಕಾಗಿಲ್ಲ. 


ಇಷ್ಟೆಲ್ಲಾ ಮಾಡಬೇಕಾ ? 




ಮಾಜಿ


ಮಕ್ಕಳು ಮೊಬೈಲು ಇತ್ಯಾದಿಗಳನ್ನು ನೋಡಬಾರದೆ?

ಇದು ಸಾದ್ಯವೂ ಇಲ್ಲ ಸಾಧುವೂ ಅಲ್ಲ. ಪ್ರತಿಯೊಂದಕ್ಕೂ ಟೆಕ್ನಾಲೊಜಿ ಯನ್ನು ಉಪಯೋಗಿಸುವ ನಾವು ಮಕ್ಕಳನ್ನು ಅದರಿಂದ ದೂರ ಇಡಬೇಕು ಎಂದರೆ ಹೇಗೆ ಸಾಧ್ಯ?

1. 


Friday, January 23, 2015

ಲೈಫ್ ಇಸ್ ಬ್ಯೂಟಿಫುಲ್ ...!!!!!

  




            ಮೊನ್ನೆ  ಪಾರ್ಲರ್ ಗೆ  ಹೋದಾಗ  ವರುಷಗಳಿಂದ ಪರಿಚಯವಿದ್ದ ಆಕೆ ಹೇಳಿದರು, 'Meternity Period ಲ್ಲಿ ಇದ್ದ್ರಿ ಅಲ್ಲ್ವ? ನಿಮ್ಮ ಮುಖ ತುಂಬಾ ಟ್ಯಾನ್ಆ ಗಿದೆ  facial  ಮಾಡಿಸಿಕೊಳ್ಳಿ'  ಅಂತ ,  'ಎಷ್ಟು ಟೈಮ್ ಆಗತ್ತೆ? '  ಅಂದೆ,  ಅವರಂದಿದ್ದು ಒಂದು ಘಂಟೆ.   ನನ್ನ ಬಳಿಯಲ್ಲಿ ಅಷ್ಟು ಸಮಯವಿರಲ್ಲಿಲ್ಲ. ನಾನಂದೆ, 'ಅರ್ಧಘಂಟೆಗೆ ಏನಿದಿಯೋ ಅದನ್ನು ಮಾಡಿ', ಅವರು ನಕ್ಕರು ಮತ್ತು ನಾನೂ ಅದರಲ್ಲಿ ಪಾಲುದಾರಳಾದೆ. 'ಟ್ಯಾನ್ ತಾನೇ? ಕ್ಲೀನ್ ಅಪ್ ಮಾಡಿಬಿಡಿ ಅರ್ಧ ಘಂಟೆ ಸಾಕಗತ್ತೆ'   ಅಂತ ನಾನೇ ಅಂದೇ, ಇಬ್ಬರೂ ಮತ್ತೆ ನಗುವನ್ನು ಶೇರ್ ಮಾಡಿಕೊಂಡೆವು. 

           ನನ್ನನ್ನು ಒಂದು ಈಸೀ  ಚೇರ್ ತರದ್ದರಲ್ಲಿ ಕೂರಿಸಿದರು,  ಎಲ್ಲದಕ್ಕೂ ಇದೇನು ಅದೇನು ಮತ್ತು ಯಾಕೆ ಅಂತ ಕೇಳುತ್ತಿದ್ದೆ.   ಮೊದಲು ಸ್ಕ್ರಬ್ ಅಂತೆ, ಮಸಾಜ್ ಅಂತೆ, ಸ್ಟೀಮ್ ಅಂತೆ ಏನೋ ಪ್ಯಾಕ್ ಹಾಕಿ ಕೂರಿಸಿದರು, ಮತ್ತೆ ಯೋಚಿಸುತ್ತ ಕುಳಿತೆ. ಓಹ್ ಚಂದವಾಗಿ ಕಾಣಿಸಬೇಕೆಂದರೆ ಇಷ್ಟೆಲ್ಲಾ ಮಾಡಬೇಕಾ?  ಸುಮ್ಮನೆ ಮೇಲಿಂದ ಓದಿಷ್ಟು ಕ್ರೀಂ ಪೌಡರ್ ಲೇಪಿಸಿಕೊಂಡರೆ  ಸಾಕಗಲಿಕ್ಕಿಲ್ಲ, ಮುಖ ಒಳಗಿನಿಂದ ಚೆಂದವಾಗಬೇಕಲ್ಲಾ!

         ಹಾಗೆ  ಮುಂದುವರಿಯಿತು ಯೋಚನೆ, ನಾವು  ಮುಖವನ್ನಷ್ಟೇ  ಚೆಂದವಾಗಿಸಿಕೊಂಡರೆ ಸಾಕಾದೀತ? ಆರೋಗ್ಯಕ್ಕೂ ಸೌಂದರ್ಯಕ್ಕೂ ತೀರ ಹತ್ತಿರದ  ಸಂಭಂದ.  ಒಳ್ಳೆಯ, ಮಿತವಾದ, ಶುದ್ದವಾದ, ಬೇಕಾದ ಮುಖ್ಯವಾಗಿ ಸಮತೋಲನ  ಆಹಾರವನ್ನೇ ಸೇವಿಸಬೇಕು.   ಒಳ್ಳೆಯ ಆಹಾರ ಒಳ್ಳೆಯ ಅರೋಗ್ಯ ಮತ್ತು  ಒಳ್ಳೆಯ ಸೌಂದರ್ಯಕೆ ಕಾರಣ.   ಮೊಳಕೆ ಕಾಳುಗಳು,  ಹಣ್ಣುಗಳು, ತಾಜಾ ತರಕಾರಿ ದೇಹದಲ್ಲಿ ಸೇರಿದಾಗ ಶಕ್ತಿಯಾಗಿ ಪರಿವರ್ತನೆಯಾಗಿ ನವ ಚೈತನ್ಯವನ್ನು ತುಂಬಿಸುತ್ತದೆ, ಮೈಕಾಂತಿ ನಳನಳಿಸುತ್ತದೆ, ಬೇಡದ ವಿಷಯುಕ್ತ ಪದಾರ್ಥ ಗಳನ್ನ ನಮ್ಮ ದೇಹ ನಿಯಮಿತವಾಗಿ ಹೊರಹಾಕಬೇಕು. ಮುಖದಿಂದ ಕೊಳೆ ತೆಗೆಯುವಂತೆ ದೇಹದಿಂದಲೂ ಕೊಳೆ ತೆಗೆಯಬೇಕು ಅದಕ್ಕೆ ಚೆನ್ನಾಗಿ  ನೀರು ಕುಡಿಯಲೇ ಬೇಕು, ಆರೋಗ್ಯವೇ ಸೌಂದರ್ಯ.

           ಅಂತನ್ನಿಸುವಷ್ಟರಲ್ಲಿ  ಮತ್ತೊಂದು ಯೋಚನೆ ನಂಗೆ, ಅರೆ! ಬರೀ ದೇಹ ಆರೋಗ್ಯವಾಗಿದ್ದರೆ ಸಾಕಾ? ರೋಗಗೃಸ್ಥ ಮನಸ್ಸಿದ್ದರೆ!? ದೇಹದ ಆರೋಗ್ಯಕ್ಕೂ ಮನಸಿನ ಆರೋಗ್ಯಕ್ಕೂ ನೇರ ಸಂಭಂದವಿದೆ.  ಉಹುಮ್ಮ್ ಮುಖ್ಯವಾಗಿ ನಮ್ಮ ಮನಸ್ಸು ಅತೀ ಆರೋಗ್ಯವಾಗಿರಬೇಕು. ಚೆಂದದ ಒಳ್ಳೆಯ ಬೇಕಾದ ಮುಖ್ಯವಾದ ವಿಷಯಗಳನ್ನ ಮನಸೊಳಗೆ ಭಾವ ಬಿತ್ತಿಯೊಳಗೆ ತುಂಬಿಸಿಕೊಳ್ಳಬೇಕು. ಎಲ್ಲದರಲ್ಲೂ ಸುಂದರವಾದದ್ದನ್ನೇ ಸಕಾರಾತ್ಮಕವಾದದ್ದನ್ನೇ ಕಾಣಬೇಕು.   ಮುಖಕ್ಕೆ ಸ್ಕ್ರಬ್ ನಂತೆ  ಸಮಸ್ಯೆಗಳೇ ಸವಾಲುಗಳು, ಸವಾಲುಗಳನ್ನೇ ಅವಕಾಶಗಳನ್ನಾಗಿ ಮಾಡಿಕೊಳ್ಳುವಷ್ಟು ಆರೋಗ್ಯ ಇರಬೇಕು ಮನಸ್ಸಿನಲ್ಲಿ.  ನಮ್ಮ ಸುತ್ತಲೂ ಒಂದು  ಸಕಾರಾತ್ಮಕ ಎನರ್ಜಿ ಸುತ್ತುತ್ತಿರಬೇಕು. ಬೇಡದ ನಿರುಪಯುಕ್ತ ವಿಷಯುಕ್ತ ನಮ್ಮ ಮನಸ್ಸಿನ ಶಕ್ತಿಯನ್ನೇ ಕಸಿದುಕೊಳ್ಳುವ ವಿಷಯಗಳನ್ನು ಮನಸಿನಿಂದ ಹೊರಗಟ್ಟಬೇಕು, ಒಂದು ಆರೋಗ್ಯ, ಸಮತೋಲನ  ಮನಸು ನಮ್ಮದಾಗಿರಬೇಕು.

            ನಂಗೆ ಯಾವತ್ತೋ ಓದಿದ stephen hawkings scintist ಬಗ್ಗೆ  ನೆನಪಾಯಿತು.  ಬ್ಲಾಕ್ ಹೋಲ್ಸ ಬಗ್ಗೆ ನಡಿಸಿದ ಇವರ ಸಂಶೋಧನೆ hawkings ರೇಡಿಯೇಶನ್ ಎಂತಲೇ ಪ್ರಸಿದ್ದಿಯಾಗಿದೆ. 'ಲೈಫ್ ಇಸ್ ಬ್ಯೂಟಿಫುಲ್ ನಾನು ತುಂಬಾ ಅದೃಷ್ಟವಂತ' ಎನ್ನುವ ಇವರಿಗೆ ಇದ್ದಿದ್ದು   Motor  Neuron ಎಂಬ ಖಾಯಿಲೆ.  ಕೈ ಕಾಲು, ದೇಹ ಯಾವುದೂ ಇವರ ಸ್ವಾದೀನದಲ್ಲಿರಲ್ಲ. ಹಾಗೆ  ದಶಕಗಟ್ಟಲೆ ಗಾಲಿ ಖುರ್ಚಿಯಲ್ಲಿ ಜೀವಿಸಿದ್ದರು.  ಮನಸಿನ ಆರೋಗ್ಯ ಹಾಗೂ ಸೌಂಧರ್ಯ ಹೊಂದಿರುವವವರು ಯಾರೇ ಆಗಿರಲಿ, ಎಲ್ಲೇ ಇರಲಿ, ಯಾವುದೇ ಪರಿಸ್ತಿತಿಯ ತೆಕ್ಕೆಯಲ್ಲಿರಲಿ,  'ಲೈಫ್ ಇಸ್ ಬ್ಯೂಟಿಫುಲ್'  ಅನ್ನಬಲ್ಲವರಾಗಿರುತ್ತಾರೆ.  ಹಾಗಂದವರ,  ಅನ್ನಿಸಿದವರ ಲೈಫ್ ಸುಂದರವಾಗಿರುತ್ತದೆ ಎಂದು ಅಲ್ಲವೇ ಅಲ್ಲ, ಆದರೆ  ಅದನ್ನು ನೋಡುವ ಅವರ ಮನಸ್ಥಿತಿ ಸುಂದರವಾಗಿರುತ್ತದೆ ಅಷ್ಟೇ.

    'ಆಗೋಯಿತು  ಮೆಡೆಮ್,   ಏನ್ ಯೋಚಿಸ್ತಾ ಇದ್ದೀರಾ'  ಎಂದರು ನನ್ನ ಸುಂದರವಾಗಿಸಲು ಇಷ್ಟಪಟ್ಟಾಕೆ . ದುಡ್ಡಿನೊಂದಿಗೆ ನಗುವನ್ನು ವಿನಿಮಯಿಸಿಕೊಂಡು  ಅಲ್ಲಿಂದ ಹೊರಟೆ.

              ಪಾರ್ಲರ್ನಲ್ಲಿ ಆದ ನನ್ನ ಜ್ನ್ಯಾನೋದಯಕ್ಕೆ ನಾನೇ ನಗುತ್ತಾ ಮೆಟ್ಟಿಲಿಳಿದೆ.  ಮುಖ ಕ್ಲೀನ್ ಮಾಡಿಸಿಕೊಂಡಾಗಿತ್ತಲ್ಲಾ?    ಸ್ಕೂಟಿಗೆ ಕೀ ಚುಚ್ಚಿಕೊಳ್ಳುತ್ತ  ಚಂದವಾಗಿದ್ದೆನೆಯೇ? ಎಂದು ಕನ್ನಡಿಯನ್ನೊಮ್ಮೆ  ನೋಡಿದೆ, ನಾನು ಮತ್ತು ಕನ್ನಡಿ ಒಂದು ಮುದ್ದಾದ ನಗುವನ್ನು ವಿನಿಮಯ ಮಾಡಿಕೊಂಡೆವು. ಸೀಟ್  ಹತ್ತಿ ಕುಳಿತು ನನ್ನ ಸ್ಚೂಟಿಗೆ, 'ಹೊರಡೋಣವಾ ..?'   ಅಂದೆ.   ಸ್ಕೂಟಿ ನಕ್ಕಂತಾಯಿತು 😊

( stephen hawkings ಬಗ್ಗೆ ಹೆಚ್ಚಿನ ಮಾಹಿತಿಗಾಗಿ
www.hawking.org) 
  


Wednesday, January 14, 2015

ಒಂದು ಮುಗುಳ್ನಗುವಿನಲ್ಲಿ ...!





         
            
ನಾಲ್ಕು ವರ್ಷಗಳ ಹಿಂದೆ ..


ಅವತ್ತು ಸಂಜೆ ಆರಕ್ಕೆಲ್ಲ ಹನಿ ಮಳೆ ಶುರುವಿಟ್ಟಿತ್ತು.  ನಾನು ಬೆಂಗಳೂರಿಂದ ನಿಟ್ಟೂರಿಗೆ ಹೊರಟಿದ್ದೆ.  ನಾನು ಹೊರಡಲಿರುವ ಬಸ್ ಶೇಷಾದ್ರಿಪುರಂ ಮತ್ತು ಬನಶಂಕರಿ ಎರಡು ಬೋರ್ಡಿಂಗ್ ಪಾಯಿಂಟ್ ಇತ್ತು.  ನಮ್ಮ ಮನೆಗೆ ಬನಶಂಕರಿ ಹತ್ತಿರ ಮತ್ತು ಒಂದೇ ಬಸ್ ಆಗಿದ್ದರಿಂದ ನಾನು ಬನಶಂಕರಿ ಸ್ಟಾಂಡನ್ನೇ ಆಯಿಕೆ ಮಾಡಿದ್ದೆ. ಆರಕ್ಕೆ ಮಾರತ್ಹಳ್ಳಿಯಲ್ಲಿ ವೋಲ್ವೋ ಬಸ್ ಹತ್ತಿದ ನನಗೆ  8.30ಕ್ಕೆ ಬನಶಂಕರಿ ತಲುಪಿದ್ದರೂ ಸಾಕಾಗಿತ್ತು.  ಒಂದು ಕೈಯಲ್ಲಿ ದೊಡ್ಡ ಬ್ಯಾಗ್  ಮತ್ತು ಇನ್ನೊಂದು ಕೈಯಲ್ಲಿ ನನ್ನ  3 ವರ್ಷದ ಪುಟ್ಟ ಮಗಳು.  ಬಸ್ಸು ಹತ್ತಿದ್ದ ಹಾಗೆಯೇ ಇದ್ದಕ್ಕಿಂದ್ದಂತೆ ಮಳೆ ತುಂಬಾ ಜೋರೆ ಆಯಿತು.  ಎಷ್ಟು ಟ್ರಾಫಿಕ್ ಅಂದ್ರೆ  ಬೆಳಂದೂರ್ ದಾಟೋದು 8 ಆಯಿತು.  ನಂಗೆ ಕ್ಷಣ ಕ್ಷಣಕ್ಕೋ ಟೆನ್ಶನ್, ಏನ್ ಮಾಡೋದು? 8.30 ರ  ಒಳಗೆ ಬನಶಂಕರಿ    ಮುಟ್ಟುವ ಯಾವ ಸಾಧ್ಯತೆಯೂ ಇರಲ್ಲಿಲ್ಲ.  ತಕ್ಷಣ ನನ್ನ ಪ್ಲಾನ್ ಚೇಂಜ್  ಮಾಡಿ ಸಿಲ್ಕ್ ಬೋರ್ಡಲ್ಲಿ ಇಳಿದು ಅಲ್ಲಿಂದ ಆಟೋ ತಗೊಂಡು ಶೇಷಾದ್ರಿಪುರಂ ಗೆ ಹೋಗೋ ಯೋಚನೆ ಮಾಡಿದೆ.
ನನ್ನ  ಟೆನ್ಶನ್, ಕೈಯಲ್ಲಿ ದೊಡ್ಡ ಬ್ಯಾಗ್, ಜೊತೆಯಲಿ ಪುಟ್ಟ ಮಗು, ಅದರ ಅಳು, ನಗು ಜೊತೆಗೆ ನೂರು ಪ್ರಶ್ನೆಗಳು.   ಅಂತೂ ನಾನು ಇನ್ನೊಂದು ಬಸ್ ಕ್ಯಾಚ್ ಮಾಡಲಿಕ್ಕಿದೆ ಎನ್ನುವ ವಿಷಯ ಕಂಡಕ್ಟರ್, ಡ್ರೈವರ್ ಮತ್ತು ಅಲ್ಲಿರುವ  3-4 ಜನಕ್ಕೆ ಗೊತ್ತಾಗಿ ಹೋಯಿತು.  ಒಬ್ಬರು ಮದ್ಯ ವಯಸ್ಸಿನ ಮಹಿಳೆ ಅವರು  ಯಾವೊದೋ IT ಕಂಪನಿಯ ಮ್ಯಾನೇಜರ್ ಇರಬಹುದು ಏನ್ನುವುದು  ನನ್ನ ಅನಿಸಿಕೆ ..., ಮೇಲಿಂದ ಮೇಲೆ ನೆರವಾದ ಪ್ರಶ್ನೆಗಳನ್ನು ಕೇಳೋದಿಕ್ಕೆ ಶುರುವಿಟ್ಟುಕೊಂಡರು ಯಾಕೆ ಒಬ್ಬಳೇ ಬಂದಿದ್ದು,  ಯಾಕೆ ಈ ದಾರಿ etc , etc ..., ಉತ್ತರಿಸುವ ಅಗತ್ಯ ತಾಳ್ಮೆ ಎರಡೂ ನನ್ನಲ್ಲಿರಲ್ಲಿಲ್ಲ.  ಏನೋ ಸ್ವಲ್ಪ ನಿರಾಸಕ್ತಿಯಿಂದ ಚುಟುಕಾಗಿ ಉತ್ತರಿಸುತ್ತಿದ್ದೆ, ಆಕೆ ಬನಶಂಕರಿಗೆ ಟಿಕೆಟ್ ಕೊಂಡಿದ್ದು ನಂಗೆ ಗೊತ್ತಿತ್ತು.
ಸಿಲ್ಕ್ ಬೋರ್ಡ್ ಬರ್ತಿದ್ದ ಹಾಗೇ  ಆಕೆ ನನ್ನ ಬ್ಯಾಗ್ ಗೆ ಥಟ್ ಅಂತ ಕೈ ಹಾಕಿದ್ದರು. ತಮ್ಮದೆನ್ನುವಂತೆ ಸುಲಭವಾಗಿ ಕಾಳಜಿಯಿಂದ ಹೆಗಲಿಗೇರಿಸಿಕೊಂಡು ಇಳಿದುಬಿಟ್ಟರು, ನಾನು ಸವಾರಿಸಿಕೊಳ್ಳುತ್ತ ಇಳಿದೆ, ಸಿಲ್ಕ್ ಬೋರ್ಡ್ ಜಂಕ್ಷನ್ ಅದು  6 ರೋಡ್ ಸೇರುವ ಜಾಗ, ನನ್ನ ಅಂಗೈಯನ್ನು ತಮ್ಮ ಬೆಚ್ಚನೆ ಅಂಗೈಯಲ್ಲಿ ಗಟ್ಟಿಯಾಗಿ ಹಿಡಿದು ರೋಡ್ ಕ್ರಾಸ್ ಮಾಡೇ ಬಿಟ್ಟರು , ಮತ್ತು ನನ್ನನ್ನು ಆಟೋ ಸ್ಟಾಂಡಿಗೆ ಬಿಟ್ಟು, ಇದು ತಮ್ಮ ಕೆಲಸವೇನೋ ಅನ್ನುವಷ್ಟು ಸಹಜವಾಗಿ ಮತ್ತೆ ಅದೇ ಓಡು ನಡಿಗೆಯಲ್ಲಿ ನಡೆದೇ ಬಿಟ್ಟರು, ನಂಗೆ ಅವರ ಹೆಸರು ಕಾಂಟ್ಯಾಕ್ಟ್ ನಂಬರ್ ಕೂಡ ತೆಗೆದುಕೊಳ್ಳಲು ಸಮಯವಿರಲ್ಲಿಲ್ಲ !
ಅವತ್ತು ಅವರಷ್ಟೇ ಅಲ್ಲ , ನನ್ನ ಪಾಲಿಗೆ ಅಲ್ಲಿಂದ ಎಲ್ಲವೂ ನೆನಪನ್ನು ಸುಂದರವಾಗಿಸುವಂತಹ ಘಟನೆಗಳೇ! ಒಂದೇ ಒಂದು ಆಟೋನೂ ಬರಲ್ಲಿಲ್ಲ, ಬಂದ ಆಟೋ ಖಾಲಿ ಇಲ್ಲ,  ಖಾಲಿ ಆಟೋ  ಶೇಷಾದ್ರಿಪುರಂಗೆ ಬರಲು ಒಪ್ಪುತ್ತಿಲ್ಲ, ಕೊನೆಗೂ ಒಂದು ಆಟೋ ನಿಲ್ಲಿಸಿದ ಖುಷಿಗೆ ಓಡಿದಾಗ ಅದು ನಿಲ್ಲಿಸಿದ್ದು ನನಗಾಗಿ ಅಲ್ಲ, ನನಗಿಂತ ಕ್ಷಣ ಮುಂಚೆ ಒಂದಿಬ್ಬರು ಭುರ್ಖ  ಹಾಕಿದ ಹೆಂಗಸರು ಜೊತೆಗೊಬ್ಬ ಗಂಡಸು,   ಓಹ್ ಈ ಆಟೋ ಸಿಗದ್ದಿದ್ದರೆ ನಾನು ಬಸ್ ತಲುಪುವುದು ಸಾದ್ಯವೆ ಇರಲಿಲ್ಲ. ತಕ್ಷಣ ಅವರಿಗೆ ವಿಷಯ ವಿವರಿಸಿದೆ, 'ನಂಗೆ ಮತ್ತೊಂದು ಬಸ್ ಕ್ಯಾಚ್ ಮಾಡಲಿಕ್ಕಿದೆ. ನಾನು ಹೊಗಲಾ ನಿಮ್ಮ ಅಭ್ಯಂತರವಿಲ್ಲದಿದ್ದರೆ?'  ಅಂದೆ, ಏನೋ ಮಾತಾಡಿಕೊಂಡು ಅವರು ಅವರು ಹಿಡಿದ ಆಟೋವನ್ನು ನನಗೆ ಬಿಟ್ಟಿದ್ದರು !! ಏನಿತ್ತೋ ಅವರ ಅವಶ್ಯಕತೆ!?  ಎಲ್ಲರಿಗೂ ಅವರವರ ಅವಶ್ಯಕತೆ ಅಷ್ಟೇ ಮುಖ್ಯ !
ಆಟೋ ಹತ್ತಿ ಕುಳಿತಾಗಿತ್ತು, ದುಡ್ಡು ಮಾತಾಡಿರಲ್ಲಿಲ್ಲ, ನನ್ನ ತೀರ ಅವಶ್ಯಕತೆ ಆಟೋವಾಲನಿಗೆ ಗೊತ್ತಾಗಿಬಿಟ್ಟಿತ್ತು, ಮಳೆ ಬೇರೆ, ರಾತ್ರಿ ಬೇರೆ, ಅವನು ಎಷ್ಟು ದುಡ್ಡು ಬೇಕಾದರೂ ಕೇಳುವ ಎಲ್ಲಾ ಸಾಧ್ಯತೆಯೂ ಇತ್ತು, ನನಗೆ ಕೊಡಲು ಕಾರಣವೂ ಇತ್ತು ಮತ್ತು ಬೇರೆ ಆಯಿಕೆ ನನ್ನಲ್ಲಿರಲಿಲ್ಲ. ಮತ್ತೆ ನನಗೆ ಟೆನ್ಶನ್, ಬಸ್ಸಿನ ಟೈಮ್ ಹೇಳಿ ತಲೋಪಾಗುತ್ತ ಅಂತ ಮದ್ಯ ಮದ್ಯ ಕೇಳುತ್ತಿದ್ದೆ , ಅವನು ತನಗೇ ಬಸ್ ತಪ್ಪಿ ಹೋಗುತ್ತೇನೋ ಅನ್ನುವಷ್ಟು ಕಾಳಜಿಯಿಂದ ನನ್ನನ್ನು ಕರೆದುಕೊಂಡು ಹೋಗಿದ್ದ .., ಫೈನಲಿ ಐ ರೀಚಡ್ ! ಅಂಡ್ ಬಸ್ ಕೂಡ ಹೊರಟಿರಲ್ಲಿಲ್ಲ, ಹೊರಡುವುದರಲ್ಲಿತ್ತು. ಏನಪ್ಪಾ ಇವನು ಎಷ್ಟು ಕೇಳುತ್ತಾನೆ ಎಂದುಕೊಂಡು  'ಎಷ್ಟಾಯಿತು ?' ಕೇಳಿದರೆ ಅವನು ಆ ಮಳೆಯಲ್ಲಿ, ಆ ರಾತ್ರಿಯಲ್ಲೂ ಮೀಟರ್ ಹಾಕಿದ್ದ, ನನಗಿದ್ದ ಟೆನ್ಷನ್ನಿಗೆ ನಾನು ಗಮನಿಸಿರಲ್ಲಿಲ್ಲ, ಮೀಟರಗಿಂತ  ಸ್ವಲ್ಪ ಜಾಸ್ತಿ ಕೊಡದೇ ಇರಲು ನನಗೆ ಸಾದ್ಯವೇ ಇರಲ್ಲಿಲ್ಲ. ಒಳ್ಳೆಯದನ್ನು ಯಾವ ರೀತಿಯಿಂದಾದರೂ ಪ್ರೋತ್ಸಾಹಿಸಬೇಕು ಮತ್ತದು ಸಾಂಕ್ರಮಿಕವಾಗುತ್ತದೆ ಎನ್ನುವ ಬಲವಾದ ನಂಬಿಕೆ ನನ್ನದು. ಆಟೋ ನಿಲ್ಲಿಸಿ,ಇಳಿದು ನನ್ನ ದೊಡ್ಡ ಬ್ಯಾಗನ್ನು ರೋಡ್ ಕ್ರಾಸ್ ಮಾಡಿಸಿ ತಂದು ಕೊಟ್ಟ. ಬಸ್ ಹತ್ತಿ ಕುಳಿತು ಹಾಗೇ ಒಮ್ಮೆ ಕಣ್ ಮುಚ್ಚಿದೆ.  ಬಸ್ ಸಿಕ್ಕಿದ ಖುಷಿಗೆ ಮುಗುಳ್ನಗುವೊಂದು ತುಟಿಯ ಮೇಲೆ ಬಂದು ಕುಳಿತಿತ್ತು.
ಬಹುಶಃ ನಂಗೆ ಅವತ್ತು ಬಸ್ ಸಿಗದಿದ್ದರೆ ಏನೂ ಆಗುತ್ತಿರಲ್ಲಿಲ್ಲ, ವಾಪಾಸ್ ಮನೆಗೆ ಬರುತ್ತಿದ್ದೆ ಅಷ್ಟೇ !! ನಂಗೆ ಅದು ಅಷ್ಟು ಮುಖ್ಯವೂ  ಅಲ್ಲ, ಅಥವ ಸೀದಾ ಬಸ್ ಸಿಕ್ಕಿದ್ದರೂ ನಾನೊಂದಿಷ್ಟು ಒಳ್ಳೆಯ ಅನುಭವಗಳನ್ನು ಕಳೆದುಕೊಳ್ಳುತ್ತಿದ್ದೆ. ಆದರೆ ಅವತ್ತಿನ ನನ್ನ ಅನುಭವ ನನ್ನನ್ನು ಮತ್ತಷ್ಟು ಶ್ರೀಮಂತವಾಗಿಸಿದೆ.
ಸಿಹಿ ಅನುಭವಗಳು ಸುಂದರವಾಗಿ ಕುಳಿತಿವೆ ಸಾಕಷ್ಟು!  ನನ್ನ ಹಿರೊಯಿನ್ನನಂತ ಸ್ಕೂಟಿಯನ್ನು ಪಾರ್ಕ್ ಮಾಡಿ ಹೋಗಿರುತ್ತೇನೆ, ಹಿಂದುರುಗಿ ಬಂದು ನೋಡಿದರೆ ಅದರ ಹಿಂದೊಂದು ಗಡವನಂತ ಬೈಕ್ ಬಂದು ನಿಂತುಕೊಂಡಿರುತ್ತದೆ, ನಾನು ಮಾಡೋದಾದರೂ ಏನು? ಎತ್ತಿಡಲೂ ಆಗದೆ ಸುಮ್ಮನಿರಲೂ ಆಗದೆ ಪೆಚಾಡುವಾಗ ಯಾರೋ ಸಹಾಯಕ್ಕಿಳಿಯುತ್ತಾರೆ. ಅಂಗಡಿಯಲ್ಲಿ ಮರೆತ ಪರ್ಸನ್ನು ಅಂಗಡಿಯಾತ ನೆನಪಿಸುತ್ತಾನೆ.  ಸೆಕ್ಯೂರಿಟಿಯ ಕರ್ತವ್ಯದಲ್ಲೂ ಮನುಷತ್ವದ ಲೇಪ ಕಾಣುತ್ತೇನೆ, ಕಾರನ್ನೋ, ಸ್ಕೂಟಿಯನ್ನೋ ಡ್ರೈವ್ ಮಾಡುವಾಗ  ಇನ್ನ್ಯಾರೋ ಸಡನ್ ಆಗಿ ನುಗ್ಗಿ ಬಂದರೆ  ಇಬ್ಬರ ಮುಗುಳ್ನಗೆಯೇ ಸ್ಸಾರಿಯಾಗುತ್ತದೆ.
ಅಂತ  ಕ್ಷಣಗಳೆಲ್ಲ ಸುಂದರವಾಗುತ್ತದೆ, ಸುಂದರವಾದ ಮುಗುಳ್ನಗು ತುಟಿಯಲ್ಲಿ ಬಂದು ಕುಳಿತಿರುತ್ತದೆ ನಾ ನಗುವ ಮೊದಲೇ. ಒಮ್ಮೆ ಅರ್ಜುನ ಮತ್ತು ಕೃಷ್ಣ  ಪ್ರಯಾಣಿಸುವ ವೇಳೆ ಒಬ್ಬ ಬಡ ರೈತ ಮುದುಕನಿಗೆ ಸಹಾಯಿಸುತ್ತಾರೆ.
ಅರ್ಜುನನೆನ್ನುತ್ತಾನೆ,  'ಶ್ರಮ್  ಕರನೇ ಸೆ ಶಕ್ತಿ ಬಡಗಯಿ ಕೃಷ್ಣ'  ಕೃಷ್ಣನೆನ್ನುತ್ತಾನೆ, 'ನಹಿ ಅರ್ಜುನ್, ಸಹಾಯತಾ ಕರನೇ ಸೆ ಶಕ್ತಿ ಬಡಗಯಿ'.
ಗೇಟ್ ಹತ್ತಿರವೇ ನಿಂತಿದ್ದೆ, ಸೊಪ್ಪು ಮಾರುತ್ತ ಒಬ್ಬ ಅಜ್ಜಿ ಬಂದರು, ರಾಶಿ ತರಕಾರಿ ಇತ್ತು ಸೊಪ್ಪು ಬೇಕಿರಲ್ಲಿಲ್ಲ. ಅಜ್ಜಿ ಬಸವಳಿದಂತೆ ಕಾಣುತ್ತಿದ್ದರು .., ನೀರು ಬೇಕಾ ಕೇಳಿದೆ. ಹುಮ್ಮ್ ಅಂದರು, ಒಳಗೆ ಹೋಗಿ ಒಂದು ಖಾಲಿ  ಬಿಸ್ಲೇರಿ ಬಾಟಲಿಯಲ್ಲಿ ನೀರು ತುಂಬಿ ಈ ಬಾಟಲಿಯನ್ನು ಇಟ್ಟುಕೊಳ್ಳಿ ಅಂತ ಕೊಟ್ಟೆ. ಅಜ್ಜಿಗೆ ತುಂಬಾ ಖುಷಿಯಾದಂತೆ ಅನಿಸಿತ್ತು. ಅಜ್ಜಿಗೆ ಬಾಯಾರಿಕೆ ತಣಿದಿರಬಹುದು, ಮತ್ತೆ ಬಯಾರಿದರೆ ಬಾಟಲಿಯಲ್ಲಿ ನೀರು ಮಿಕ್ಕಿರಬಹುದು, ನೀರನ್ನು ತುಂಬಿಸಿಕೊಳ್ಳಲು ತಿಂಗಳ ತನಕ ಆ ಬಾಟಲಿಯೂ ಲಭ್ಯವಿರಬಹುದು .., ಅದಕ್ಕಿಂತ ಹೆಚ್ಚಾಗಿ ಆ ಜೀವಕ್ಕೆ ಚಿಕ್ಕದೊಂದು ಸಿಹಿಯ ತಂಪಿನ ಭಾವ ಅಲೆ ಅಲೆಯಾಗಿ ಮನಸ್ಸನ್ನು ಆವರಿಸಿಕೊಂಡಿರಬಹುದು,  ಮನಸಿಗೆ ಒಂದಷ್ಟು  ಸ್ಪೂರ್ತಿ ಹುಮ್ಮಸ್ಸು ತಂದಿರಬಹುದು, ಮನಸ್ಸಿನ ಭಾವ ಸಿಹಿಯಾಗಿರಬಹುದು.
ಮತ್ತು ..

ಅದು ನನ್ನ ಇವತ್ತಿನ ಮುಗುಳ್ನಗುವಾಗಬಹುದು  :) ಮತ್ತದು ಸಾಂಕ್ರಮಿಕವಾಗಲೂಬಹುದು  :) :)

Thursday, October 16, 2014

ಮಗೂ .. ಕಲಿಸು ನಿನ್ನಂತಾಗಲು....




ಕಲಿಸು ಮಗುವು  ನಗಲು
ನಿಷ್ಕಲ್ಮಶವಾಗಿ ;

ಕಲಿಸು ನಿನ್ನಂತೆ ನೋಡಲು
ವಿಸ್ಮಯವಾಗಿ;

ಕಲಿಸು  ನಿನ್ನಂತೆ  ಮನಸು
ಸ್ವಚ್ಚವಾಗಿ;

ಕಲಿಸು  ನಿನ್ನಂತೆ  ಬಿಸುಪು
ಆಪ್ತವಾಗಿ ;

ಕಲಿಸು ನಿನ್ನಂತೆ  ಭಾವ
ಶುದ್ಧವಾಗಿ ;

ಕಲಿಸು ನಿನ್ನಂತೆ ಆತ್ಮ
ಪರಿಶುದ್ದವಾಗಿ ;

ಕಲಿಸು ಮಗೂ   ಅತ್ತಾಗ
ಅಳಲು ;
ಕಲಿಸು  ಮಗೂ   ನಕ್ಕಾಗ
ನಗಲು ;



ನನಗೂ ಕಲಿಸು ಮಗೂ  ನಿನ್ನಂತೆ,
ಇದ್ದು ಬಿಡಲು  ನಾನು...   ನನ್ನಂತೆ .....










    


Wednesday, June 18, 2014

ನಿನ್ನ ಪ್ರೀತಿಗೆ ಚಿಯರ್ಸ್ ಅಪ್ಪ..!

ಎಷ್ಟೋ ದಿನಗಳಿಂದ ಮನಸಿನಲ್ಲಿ ಗೂಡು ಕಟ್ಟಿಕೊಂಡ ಮಾತುಗಳಿಗೆ ಹೊರಬರಲು ಒಮ್ಮೊಮ್ಮೆ ಒಂದು  ನೆಪ ಬೇಕಿರತ್ತದೆ.
 
ಅಪ್ಪನ ಬಗ್ಗೆ ಹಂಚಿಕೊಳ್ಳಲು ಬಂದ ಫಾಥೆರ್ಸ್ ಡೇ ನಂತೆ!

ಮೂರು ವರುಷದ ನನಗೆ ಮೂರು ಗಾಲಿಯ ಸೈಕಲ್ ತಂದು ಕೊಟ್ಟ ನನ್ನ  ಅಪ್ಪ..

ಯಾವ ಹೆಣ್ಣು ಮಗುವೂ  ಸೈಕಲ್ ತುಳಿಯದ ಊರಿನಲ್ಲಿ ಪ್ರೈಮರಿಯಲ್ಲಿ ನನಗಾಗಿ ಸೈಕಲ್ ಕೊಡಿಸಿದ ನನ್ನ ಅಪ್ಪ..

ಭಾಷಣ ಸ್ಪರ್ಧೆಗೆ ಬಿಳಿ ಹಾಳೆಯಲ್ಲಿ ಭಾಷಣ ಬರೆದುಕೊಡುತ್ತಿದ್ದ  ನನ್ನ ಅಪ್ಪ..

ನಾಟಕದ ಸಂಭಾಷಣೆಯನ್ನು ಹೇಳುವ ರೀತಿಯನ್ನು ನನಗೆ ಕಲಿಸಿಕೊಡುತ್ತಿದ್ದ  ಅಪ್ಪ...

ನನ್ನ ಜೊತೆ ಕ್ಯಾರೆಮ್ , ಶಟಲ್ ಆಡುತ್ತಿದ್ದ ಅಪ್ಪ ..

ನಾನು ತುಂಬಾ ತುಂಬಾ ಓದಬೇಕೆಂದು ಕನಸು ಹೊತ್ತು ಹೈಸ್ಕೂಲ್ ಗೆ  ಬೇರೆ ಊರಿನಲ್ಲಿ ಸೇರಿಸಿದ ನನ್ನ ಅಪ್ಪ.

ನನಗೆ ಸುಜುಕಿ ಬೈಕ್ ನ ತಾನೇ ಸ್ವಂತ ನಿಂತು ಕಲಿಸಿದ  ನನ್ನ ಅಪ್ಪ.

ಜೀಪ್ ಡ್ರೈವಿಂಗ್ ಕಲಿಸಿ ಕೀ ಕೈಗೆ ಇಡುತ್ತಿದ್ದ ನನ್ನ ಅಪ್ಪ.

ನನ್ನನ್ನು    ಸ್ಕೂಟಿ ಶೋ ರೂಂ ಗೆ ಕರೆದೊಯ್ದು ಬೇಕಾದ್ದು ಆರಿಸಿಕೋ ಅಂದ ನನ್ನ ಅಪ್ಪ.

ಊರಿಗಂತ ಹೊರಟರೆ ಬೆಳಗ್ಗೆ ೫ ಕ್ಕೇ ಎದ್ದು ರೆಡಿಯಾಗಿ  ಬಸ್ಸ್ಟ್ಯಾಂಡ್ ಗೆ ೧೦ ನಿಮಿಷ ಮುಂಚೆಯೇ ಕಾರು ತಂದು ಕಾಯುವ ನನ್ನ ಅಪ್ಪ ..

ಮೊನ್ನೆ ಮೊನ್ನೆ ಬಾಣಂತನದಲ್ಲಿ  ರಚ್ಚೆ ಹಿಡಿದು ಅಳುತ್ತಿದ ನನ್ನ ಮಗುವನ್ನು ದಿನವೂ ಮಲಗಿಸಿಯೇ ತಾನು  ಮಲಗುತ್ತಿದ್ದ ನನ್ನ ಅಪ್ಪ ...

ಭಾವನೆಗಳಿಗೆ, ಯೋಚನೆಗಳಿಗೆ, ಇಷ್ಟಗಳಿಗೆ ಯಾವತ್ತೂ ಬೆಲೆ ಕೊಡುತ್ತಿದ್ದ ನನ್ನ ಅಪ್ಪ..

ಚಿಕ್ಕಂದಿನಿಂದಲೇ ಅಯೈಕೆಯ ಸ್ವಾತಂತ್ರ್ಯವನ್ನು ನನ್ನ ಕೈಗಿತ್ತ ನನ್ನ ಅಪ್ಪ.




ಹೇಳಿದಷ್ಟೂ ಮುಗಿಯದ ಮಾತುಗಳಿವೆ .... , ಆದರೆ ಹೇಳಲೇ ಬೇಕಾದ ಇನ್ನೂ  ಒಂದು ಮಾತಿದೆ...

ಗೆಲುವ ಮಕ್ಕಳನ್ನು ದೂರದಿಂದ ನಿಂತು ನೋಡುವುದು , ಅವರಿಗೆ   ಸಪ್ಪೊರ್ಟಿವ್  ಆಗಿರೋದು ಸಹಜದ ಸಂತೋಷದ ವಿಷಯ..

ಆದರೆ ಸೋತ ಮಕ್ಕಳು ...?


 ಒಂದಷ್ಟು ಕಾಲದ ಮಿತಿಯೊಳಗೆ ಸರತಿಯಲ್ಲಿ ಸೋತ ಮಗು ನಾನು,  ಸೋತ ಮಗುವಿನಲ್ಲಿ ಆತ್ಮವಿಶ್ವಾಸವನ್ನು ಸೋಲಿಸಲ್ಲಿಲ್ಲ  ಅಪ್ಪ !

 ಎಂತಹ ದೊಡ್ಡ ಸೋಲನ್ನು ಹೊರಲಾರದೆ ಹೊತ್ತುಕೊಂಡು ಬಂದು ನಿಂತಾಗಲೂ  ಆತ್ಮ ವಿಶ್ವಾಸವನ್ನು ಕುಂದಿಸಲಿಲ್ಲ.

ಹಿಂದಿರುಗಿ ನೋಡಿದರೆ ಸೋತ ಸೋಲು ಅಲ್ಲೇ ಬಿದ್ದಿದೆ!ಹಾದಿ  ತುಂಬಾ ದೂರ ನಡೆದು ಬಂದಿದೆ.

ನನಗೆ ಹೇಳಬೇಕಾದ್ದೂ ಇದೇ,  ಮಕ್ಕಳ ಚಿಕ್ಕ ಪುಟ್ಟ ಸೋಲುಗಳು ಅವರಲ್ಲಿ ಆತ್ಮ ವಿಶ್ವಾಸವನ್ನು ಕುಂದಿಸಬಾರದು,  ಧೈರ್ಯವನ್ನು ಕೆಡಿಸಬಾರದು ,  ಸ್ವಲ್ಪ ಕೈ ಚಾಚಿದರೆ ಮತ್ತೆ ಚಿಗಿತು ಎದ್ದು ಮುಂದೆ ನಡೆಯಬಲ್ಲವು ನಮ್ಮ ಮಕ್ಕಳು,   ನಾವು ಕೈ ಚಾಚಬೇಕಷ್ಟೇ !

ಹಾಗೆ ಚಾಚಿದ ಎಷ್ಟೋ ಕೈಗಳ ಅಪ್ಪಂದಿರಿಗೆ ಹ್ಯಾಪಿ ಫಾಥೆರ್ಸ್ ಡೇ .  ಅವರು ನೆಟ್ಟ ಆತ್ಮ ವಿಶ್ವಾಸದ ಬಳ್ಳಿಗೆ, ಕೊಟ್ಟ ಧೈರ್ಯಕ್ಕೆ ,  ಇಟ್ಟ ಪ್ರೀತಿಗೆ ಚೀಯರ್ಸ್ ........


Wednesday, September 11, 2013

ಹೇಳು ಪುರುಷೋತ್ತಮ ..



 ಹೆಂಡತಿಯ ಪಾವಿತ್ರ್ಯಕ್ಕೆ
 ಬೆಂಕಿಯೇ  ಬೇಕಿತ್ತಾ ?
 ಸೀತೆಯ ಸತ್ಯದ ಮೇಲೂ 
 ಶಂಕೆಯಾ  ನಿನಗೆ !?

 ಅಗಸನಂದ  ಮಾತಿಗೆ  
 ಲೋಕದ ಮೆಚ್ಚುಗೆಗೆ 
 ಸೀತೆಯ ಮಾನ ಅಭಿಮಾನ 
 ಸ್ವಾಭಿಮಾನವೇ ಅಹುತಿಯಗಾಬೇಕಿತ್ತಾ ..!?

 ಕೇಳು  ಮರ್ಯಾದ ಪುರುಷ
 ಅಗಸನಂದ  ಮಾತಿಗೆ ಬೇಸರಿಸಲಿಲ್ಲ ಅವಳು!
 ಘಾಸಿಯಾಗಿದ್ದು  ನಿನ್ನ ಪರೀಕ್ಷಗೆ
 ಅದರ ಒಳ ಸೆಳಕುಗಳ ಅರ್ಥಗಳಿಗೆ !!


ನೀನನ್ನಬಹುದು
ಸೀತೆಯ ಪಾವಿತ್ರ್ಯ ಸಾಬೀತಾಯಿತೆಂದು !
  ಹೆಣ್ಣನ್ನು ಶಂಕಿಸಬಹುದು
ಅಗ್ನಿಪರೇಕ್ಷೆಗೊಡ್ಡ ಬಹುದು  ಎಂಬುದೂ ಸಹ  !!


ಗೊತ್ತಾ ನಿನಗೆ ..?
 ಸೀತೆ ಪವಿತ್ರೆ , ಆಕೆಯ ಮಾತೆ ಸಾಕು
 ಸಾಕ್ಷಿ ಶಂಕೆಯ ಅಂಕೆ ಬೇಡವೆಂದಿದ್ದರೆ ನೀನು
 ಅದು ನಿಜದ ಆದರ್ಶವಾಗುತ್ತಿತ್ತಲ್ಲೋ  ಜಗಕೆ !







Tuesday, June 11, 2013

ಅವರ ಹೊಟ್ಟೆ ಯಾವತ್ತೂ ತಣ್ಣಗಿರಲಿ ...

     

    
     
ಮೊದಲೆಲ್ಲಾ  ನಾನೂ ಹಾಗೆ ಮಾಡುತ್ತಿದ್ದೆ,  ಮನೆ ಮುಂದೆ ಬಂದ  ತರಕಾರಿ ಮಾರುವವನ  ಗಾಡಿಯಲ್ಲಿರುವ ಟೊಮೇಟೊವನ್ನು ಮುಟ್ಟಿ  ಮುಟ್ಟಿ  ಪರಿಶೀಲಿಸಿ ತೆಗೆದುಕೊಳ್ಳುತ್ತಾ , ' ಯಾಕ್ರೀ ಅಂಗಡಿಯಲ್ಲಿ ಇಷ್ಟು ನಿಮ್ದ್ಯಾಕ್ರೀ   1  ರುಪಾಯೇ ಜಾಸ್ತಿ ? ಎನ್ನುತ್ತಿದ್ದೆ ,  ಎಳನೀರು ಹೊಟ್ಟೆ ತುಂಬಾ ಕುಡಿದು ಯಾಕೆ ಒಂದು ರುಪಾಯೀ ಜಾಸ್ತಿ ಪಕ್ಕದ ಬೀದಿಯಲ್ಲಿ ಕಡಿಮೆ ? ಎನ್ನುತ್ತಿದ್ದೆ ,  ಸಿಗ್ನಲ್ಲಿ ಪೆರೆಲೆ ಕಾಯಿಯೂ ಮಾವಿನ ಕಾಯಿಯೋ  ಬಂದರೆ 1೦ ರುಪಾಯಿಗೆ 3 ರೆನಾ? 4 ಕೊಡಿ ಎನ್ನುತ್ತಿದ್ದೆ, ಹೀಗೆ  ಚೌಕಾಸಿ ಮಾಡುವುದು  ಅದೇನೋ  ರೂಢಿಗತವಾಗಿಬಿಟ್ಟಿತ್ತು .
ಆದರೆ  ಒಮ್ಮೆ ಯೋಚಿಸಿ ನೋಡೋಣ, ತರಕಾರಿ  ತರುವವನು ಬೆಳಗ್ಗೆ 3 ಗಂಟೆಗೆ ಎದ್ದು, ಸೈಕಲ್ ತುಳಿದು, ಯಶವಂತ ಪುರ ಮಾರ್ಕೆಟ್ಗೋ, HAL ಗೋ  ಅಥವ ಇನ್ನೆಲ್ಲೋ  ಮೈಲುಗಟ್ಟಲೆ ಹೋಗಿ, ತರಕಾರಿ ತಂದು, ಮತ್ತೆ ಅದನ್ನು ಪ್ರತಿ ಮನೆ ಮನೆಗೂ ಮಾರಿ, ಅವರ ಉಲ್ಟಾ ಪಲ್ಟ ಮಾತನ್ನೂ  ಕೇಳಿಸಿಕೊಂಡು,  ಅಷ್ಟಕ್ಕೂ ಅವರಿಗೆ ಸಿಗುವ  ಲಾಭದ ಪರಿಮಾಣವಾದರೂ ಎಷ್ಟು ?   kg ಗೆ ಒಂದು ರುಪಾಯೀ? ಎರಡು ರುಪಾಯೀ ? ಬೇಡ 3 ರುಪಾಯೀ ? ಎಳನೀರಾತನಿಗೆ ಸಿಗುವ ಲಾಭವಾದರೂ ಎಷ್ಟಿದ್ದೀತು?  ಸಿಗ್ನಲ್ಲಲ್ಲಿ ಪೆರೆಲೆ ಕಾಯಿಯನ್ನೊ ಮಾವಿನಕಾಯಿಯನ್ನೋ  ಮಾರುವವರ ಲಾಭದ ಪರಿಮಾಣ ಎಷ್ಟು ಪೈಸೆ ಅಥವ ಎಷ್ಟು ರುಪಾಯೀ ಇದ್ದೀತು?

  ವಿಷಯ  ಇಷ್ಟೇ ಅಲ್ಲ ...

ನಾವುಗಳು ಮಾಲ್  ಹೊಕ್ಕರೆ   ಸಾವಿರದ ನೋಟು ಚಿಕ್ಕದೆನಿಸುತ್ತದೆ, ಹೋಟೆಲೊಳಗೆ  ಹೊಕ್ಕು ಕುಳಿತರೆ ಮಿತಿಮೀರಿದ  ಬಿಲ್  ಜೊತೆಗೆ  ಮುಲಾಜಿಗಾದರೂ ಟಿಪ್ಸ್ ಅಂತ ಬಿಟ್ಟು ಬರುತ್ತೇವೆ, ಪೆಟ್ರೋಲನ್ನು ಬಕಾಸುರನಂತೆ ಕುಡಿದು  5  ಜನರು ಓಡಾಡುವ ಕಾರಿನಲ್ಲಿ  ದಿಲ್ ಅಂತ ಒಬ್ಬರೇ ಓಡಾಡುತ್ತೇವೆ, ಸಿನೆಮಾಕ್ಕೆ ಹೋಗಿ ಕುಳಿತರೆ ಅಲ್ಲಿಯ ಪೋಪ್ಕೊನ್ರ್ನ್ ಗೆ  ದುಪ್ಪಟ್ಟು ದುಡ್ಡು   ಚೆಲ್ಲುತ್ತೇವೆ,  ಪಟ್ಟಿ ಉದ್ದಕ್ಕೆ ಬೆಳೆಯುತ್ತಲೇ  ಹೋಗುತ್ತದೆ....

ರಿಲಯನ್ಸ್ ಫ್ರೆಶ್ ನಲ್ಲಿ  ವ್ಯಾಕ್ಸ್ ಬಳಿದಿಟ್ಟ, ಸಕ್ಕರೆ ಇಂಜೆಕ್ಷನ್ ಚುಚ್ಚಿದ  ಫಳ್ಳನೆ ಹೊಳೆಯುವ  ಸೇಬುವಿಗೆ kg  ಗೆ ನೂರಿಪ್ಪತ್ತಾದರೂ ಕೊಡುತ್ತೇವೆ, ಮತ್ತೆಷ್ಟಾದರೂ ಕೊಡುತ್ತೇವೆ, ಕೊಟ್ಟು ಕವರೊಳಗೆ ತುಂಬಿಸಿಕೊಳ್ಳುತ್ತೆವೆ, ಆ ಕವರಿಗೆ ಮತ್ತೆ  ಒಂದೋ  ಎರಡೋ ರುಪಾಯೀಯನ್ನೂ  ಕೊಡುತ್ತೇವೆ, ಬಿಸಿಲಿನಲ್ಲಿ ತಲೆ ಮೇಲೆ ಹೊತ್ತ ನಮ್ಮದೇ  ನೆಲದ ಪೇರಲೆ ಹಣ್ಣಿಗೆ ಇಪ್ಪತ್ತು ರುಪಾಯೆಗೆ ನಾಲ್ಕು ಕೇಳುತ್ತವೆ, ತಯಾರಿಕೆಗೆ ಕೇವಲ ಎರಡು ರುಪಯೀ  ಖರ್ಚಾಗುವ  ಪೆಪ್ಸಿ ಗೆ   2 5  ರುಪಾಯೆಯನ್ನು ಕೊಡುವಾಗ ನಾವು ತಪ್ಪಿಯೂ ಚೌಕಾಸಿ ಮಾಡುವುದಿಲ್ಲ ,  ದುಡ್ಡು ಕೊಟ್ಟು ಆರೋಗ್ಯ ಕೆಡಿಸಿಕೊಳ್ಳುತ್ತೇವೆ.  ಇಲ್ಲೇ ಮಂಡ್ಯದವನೋ  ತಿಪಟೂರವನೋ  ಬೆಳೆದ ಎಳನೀರಿಗೆ  ಅದನ್ನ ಮಾರುವವನಿಗೆ ನಮ್ಮದು ಒಂದು ರುಪಾಯೀ ಎರಡು ರುಪಾಯಿಗೆ ಚೌಕಾಸಿ !
  
       ಅದೇನಾಯಿತೋ ..,  ಇತ್ತೀಚಿಗೆ  ಶ್ರಮ  ಪಟ್ಟು ಕೆಲಸ ಮಾಡುವ ಇಂತವರ ಜೊತೆ  ಚೌಕಾಸಿ ಮಾಡಬೇಕಿನಿಸುತ್ತಿಲ್ಲ  ಉಳಿತಾಯ ಮಾಡುವ ಮನಸಿದ್ದರೆ ಬೇಕಷ್ಟು ಮಾರ್ಗಗಳಿವೆ, ಅವರ ಶ್ರಮದ ಬೆವರು ಬೇಡ,  ಈ ತರ ಚೌಕಾಸಿ ಮಾಡಿ ಬುದ್ದಿವಂತೆ ಎನಿಸಿಕೊಳ್ಳುವುದಕ್ಕಿಂತ  ದಡ್ಡಿಯಾಗಿರಲೇ  ಇಷ್ಟ ಪಡುತ್ತೇನೆ, ಇತ್ತೀಚಿಗೆ  'ಯಾಕೆ ಒಂದು ರುಪಾಯೇ ಜಾಸ್ತಿ'  ಎನ್ನುವ ಬದಲು  ತರಕಾರಿ ಗಾಡಿಯವನ ಬಳಿ , 'ಎಲ್ಲಿಂದ ತರ್ತೀರಾರೀ?, ಎಷ್ಟು ಕೊಡ್ತೀರಾರೀ ? ', ತರಕಾರಿ ಕೊಳೆತರೆ ಏನು ಮಾಡ್ತೀರಾ?  ಕೇಳುತ್ತೇನೆ ,  ಎಳನೀರಾತನೊಂದಿಗೆ , ' ಎಲ್ಲಿಂದ  ಬರತ್ತೆ? ನಿಮಗೆ ಎಷ್ಟಕ್ಕೆ ಸಿಗತ್ತೆ , ಲಾಭ ಆಗತ್ತಾ ? ಹಾಳು ಆದರೆ ಏನು ಮಾಡ್ತೀರಾರೀ?  ಎನ್ನುತ್ತೇನೆ, ಅವಾಗಲೇ ಗೊತ್ತಾಗಿದ್ದು ನನಗೆ ಪೋಲಿಸಿನವರಿಗೂ ಪಾಲು ಕೊಡಬೇಕಂತೆ! ಕೇಳಿದಾಗಲೆಲ್ಲಾ  ಎಳನೀರೂ  ಕೊಡಬೇಕಂತೆ !
ರೆಡಿಮೇಡ್  ಫುಡ್ ಪ್ಯಾಕೆಟ್, ಪೆಪ್ಸಿ ಕೋಕಾಕೋಲ,  ಐಸ್ ಕ್ರೀಂ, ಕೇಕ್,  ಹಾಳು  ಮೂಳು ಅಂತ ದುಡ್ಡು ಚೆಲ್ಲಿ  ನಮ್ಮ ಆರೋಗ್ಯವನ್ನೂ ಕೆಡಿಸಿಕೊಂಡು ಬೇರೆ ದೇಶದವರ ಹೊಟ್ಟೆ ತುಂಬಿಸುವುದು, ಅವರನ್ನು ಶ್ರೀಮಂತಗೊಳಿಸುವುದು  ನಮ್ಮ ಯಾವತ್ತಿನ ಕೆಲಸವೇ ! ಇರಲಿ ಬಿಡಿ, ಆದರೆ ನಮ್ಮ ರಾಮನಗರದ ತಿಪ್ಪಣ್ಣ, ಚಿಕ್ಕಬಳ್ಳಾಪುರದ  ಮಂಜಣ್ಣ , ಮಂಡ್ಯದ ಸೋಮಣ್ಣ , ತಿಪಟೂರಿನ ಮತ್ಯಾವುದೋ ಅಣ್ಣ , ಅವರೂ ಸ್ವಲ್ಪ ಬೆಳೆಯಲಿ, ನಮ್ಮ ದೇಹಕ್ಕೆ ಅಗತ್ಯವಾದ  ತರಕಾರಿ, ಇನ್ನಿತರ ಆರೋಗ್ಯಕರ ಬೆಳೆ ಬೆಳೆಯುವವರ, ಮಾರುವವರ  ಹೊಟ್ಟೆ ಯಾವತ್ತೂ ತಣ್ಣಗಿರಲಿ.....

ಕೊನೆಗೆ,

ಕೊಟ್ಟ ಭಿಕ್ಷೆ ಕೂಡ ಸೋಮಾರಿತನಕ್ಕೆ ಪ್ರೋತ್ಸಾಹವಾಗಬಹುದು, ದೇವರ ಹುಂಡಿಗೆ ಬಿದ್ದ ದುಡ್ಡು ಕೂಡ ಎಲ್ಲೋ ಯಾರದ್ದೋ ಹೊಟ್ಟೆ ತುಂಬಿದವರನ್ನೇ  ಇನ್ನಷ್ಟು ತುಂಬಿಸಬಹುದು,  ಆದರೆ  ನಮ್ಮಂತವರ  ಒಂದು ಎರಡು ರುಪಾಯೀ ಲಾಭ ಅವತ್ತಿನ ಅವನ ಅನ್ನವಾಗಬಹುದು, ಅಲ್ಲವೇ....?
     


                             

Tuesday, June 4, 2013

ಲೋಕದ ಮೆಚ್ಚುಗೆಯೋ ...? ಮನದ ಒಪ್ಪಿಗೆಯೋ ... ?



ಇದ್ದ ಒಬ್ಬ ಪತ್ನಿಯ ರಕ್ಷಣೆಯಲ್ಲಿ
ಸೋತ ರಾಮ
ನೋವಿಗೆ ಇನ್ನೊಂದು ಹೆಸರನ್ನೇ ಸೀತೆಯನ್ನಾಗಿಸಿದ  !


ಕೂದಲೂ ಕೊಂಕದಂತೆ  ಕಾದವನು
ಹದಿನಾರು ಸಾವಿರ ಹೆಂಡತಿಯರಲ್ಲಿ
 ಯಾರನ್ನೂ  ನೋಯಿಸಿದ್ದಿಲ್ಲ ಕೃಷ್ಣ!


ಬೇಕಿತ್ತಾ ರಾಮನಿಗೆ ಲೋಕದ ಮೆಚ್ಚುಗೆ !?
ಸಾಕಿತ್ತಾ  ಕೃಷ್ಣನಿಗೆ ಮನದ ಒಪ್ಪಿಗೆ!? 
ಕೇಳಬೇಕಿತ್ತು .... ಪ್ರೀತಿ ಅಂದರೆ ಯಾವುದೆಂದು ... !?






   


Tuesday, February 19, 2013

ನೀನು ತರುವ ಗುಲಾಬಿ ಇಷ್ಟವಾಗುತ್ತಿಲ್ಲ ನನಗೆ .., ಜೊತೆಗೆ ನೀನು ಕೂಡ ...!






                                             

ನಾಳೆಗಳಲ್ಲಿ  ನನಗೆ  ಬಂಗಾರದ  ಅಂಚು  ಬೆಳ್ಳಿಯ ನೂಲಿನ ಸೀರೆ ತಂದುಕೊಡುವ ಬಣ್ಣದ  ಕನಸು  ನಿನಗೆ, ಇದೇ  ನಿನ್ನ ಕನಸುಗಳಲ್ಲಿ ನಾನೂ ಬದುಕಿಬಿಡುತ್ತೆನೆಂದ ನನಗೆ,  ನಿನ್ನ ನಾಳೆಯ ಕನಸುಗಳು ನನ್ನ  ಇವತ್ತಿನ ಬಣ್ಣಗೆಟ್ಟ ಸೀರೆಗೆ ಯಾವ ಬಣ್ಣವನ್ನೂ ತುಂಬುತ್ತಿಲ್ಲ!


ಅರ್ಧ ಅರ್ಧ ಮುತ್ತನ್ನೇ ಹಂಚಿಕೊಂಡು ತಿಂದರಾಯಿತು ಎಂದ ನಿನ್ನ ಮಾತುಗಳನ್ನು ಹೃದಯದಲ್ಲಿ ತುಂಬಿಕೊಂಡಿದ್ದ  ನನಗೆ, ಇಲ್ಲ ಅಡಿಗೆಗೆ ಅಕ್ಕಿ ಬೇಳೆ  ಬೇಕೇ  ಬೇಕು, ಯಾವ ಮುತ್ತೂ ಹೊಟ್ಟೆ ತುಂಬಿಸುತ್ತಿಲ್ಲ.


ನನ್ನ ಕೈಯನ್ನು  ನಿನ್ನ ಅಂಗೈಯಲ್ಲಿರಿಸಿಕೊಂಡು  "ನಿನ್ನ ನೋವು ಅರ್ಥ ಆಗತ್ತೆ ಕಣೇ " ಅನ್ನುತ್ತಿ, ಆ ಒಂದು ಮಾತಿಗಾಗಿ ಹಪಹಪಿಸುತ್ತಿದ್ದ  ನನಗೆ   ಉಹುಮ್ಮ್, ಇಲ್ಲ ಅಷ್ಟೇ ಸಾಲದು ಯಾವುದೇ ಅರ್ಥಮಾಡಿಕೊಳ್ಳುವಿಕೆಯೂ   ಮಗನ ಸ್ಕೂಲಿನ ಫೀಸನ್ನು ಕಟ್ಟಿ ಬರುತ್ತಿಲ್ಲ.



"ಎಲ್ಲ ಸರಿಯಾಗುತ್ತೆ ಬಿಡು"   ನೂರು ಭರವಸೆಯ ಭಾವಗಳನ್ನು ತಂದುಕೊಡುತ್ತಿದ್ದ  ಅದೇ ನಿನ್ನ ಮಾತುಗಳು, ಇಲ್ಲ  ಮಗಳ ಬಿಡುವಿಲ್ಲದ  ಜ್ವರಕ್ಕೆ  ಔಷಧವೇ ಬೇಕು, "ಎಲ್ಲ ಸರಿಯಾಗುತ್ತದೆ" ಎಂದ ಮಾತುಗಳಿಗೆ ಜ್ವರ ಇಳಿಯುತ್ತಿಲ್ಲ.



ಕೋಪ ಬಂದರೆ ಸಾವಿರ ಮಾತುಗಳಲ್ಲಿ  ರಮಿಸುತ್ತಿದ್ದ  ನೀನು ಮತ್ತು  ಅದರಲ್ಲೇ ಮೈ ಮರೆಯುತ್ತಿದ್ದ  ನನಗೆ,  ಇವತ್ತು  ಮನೆಯಿಂದ  ಹೊರಬಿದ್ದರೆ  ದಿಟ್ಟಿಸುವ ಸಾಲಗಾರರ  ಎದುರಿಸಲು  ಬೇಕಿರುವುದು  ದುಡಿಮೆಯೆಂಬ ನಿಯತ್ತಿನ  ತಾಕತ್ತು, ನಿನ್ನ ಬಣ್ಣದ ಮಾತುಗಳು ನನ್ನ ಮನದಾಳದ ಕೋಪವನ್ನು  ತಣಿಸುತ್ತಿಲ್ಲ.


ಬೆಟ್ಟವನ್ನು ಅಂಗೈಯಲ್ಲಿ ಎತ್ತುವ ಗುರಿಯ ಅಮಲಿನಲ್ಲಿರುವ  ನಿನಗೆ, ಅದನ್ನೇ ನಂಬಿಕೊಂಡ ನನಗೆ ಎದುರಿಗಿರುವ ಹುಲ್ಲನ್ನೂ ನೀನು  ಕೀಳಲಾರೆ  ಎನ್ನುವ ಸತ್ಯದ ಅರಿವಿಗೆ  ಕಣ್ಣು ಮುಚ್ಚಿದರೂ ನನಗೆ ನಿದ್ದೆ ಹತ್ತುತ್ತಿಲ್ಲ.


ನಾನು ದುಃಖಿಸಿದರೆ ಪ್ರೀತಿ ಪಾಠ ಹೇಳುವ ನಿನಗೆ ಗೊತ್ತಿಲ್ಲದಿರುವುದು ಏನೆಂದರೆ 
ನಾನು ದುಃಖಿಸುತ್ತಿರುವುದು  ನಿನಗೆ ಕೆಲಸ ಇಲ್ಲ ಎಂಬ ಕಾರಣಕ್ಕಲ್ಲ, ಮಾಡುವ ಮನಸ್ಸಿಲ್ಲದಿರುವಿಕೆಗಾಗಿ,  ಎಲ್ಲೂ ನೆಲೆ ನಿಲ್ಲದ ನಿನ್ನ ಅಪ್ರಭುದ್ದ ವ್ಯಕ್ತಿತ್ವಕ್ಕಾಗಿ, ಎಂದೂ  ಬದಲಾಗದ ನಿನ್ನ ಕಡು ಸೋಮಾರಿತನ , ಅತೀ ಬೇಜವಬ್ಧಾರಿತನಕ್ಕಾಗಿ ತಿಳಿಹೇಳಿದರೂ ನಿನಗದು ತಿಳಿಯುತ್ತಿಲ್ಲ.


ನಿನ್ನ ಪ್ರತಿ ಗುಲಾಬಿ ಹೂವಿಗೂ ಪ್ರತಿಯಾಗಿ  ನನ್ನಲ್ಲಿ  ಪ್ರತಿದ್ವನಿಸುತ್ತಿದ್ದ  ಪ್ರೀತಿ ಇವತ್ತು     ಅಗತ್ಯತೆಗ. ಪರಿಮಿತಿಯೊಳಗೆ    ಕುಳಿತುಬಿಟ್ಟಿದೆ ,  ನಿನ್ನ  ತುಂಟತನ,   ಬೇಜವಾಬ್ದಾರಿತನ ಅದೇ  ನೆಚ್ಚಿಕೆಯೆನಿಸುತ್ತಿದ್ದ   ನನಗೆ ಇವತ್ತು  ವಾಸ್ತವತೆಯ      ಒಂದೊಂದು  ಪುಟಗಳು ನನ್ನೆದುರು  ತೆರೆದುಕೊಳ್ಳುವಾಗಲೂ
ನನ್ನ ಪ್ರೇಮ ಸೌಧದ ಒಂದೊಂದೇ ಮಜಲು ಕುಸಿಯುತ್ತಿದೆ , ನನ್ನ ಭವಿತವ್ಯದ ಕನಸುಗಳೆಲ್ಲ ಕಲೆಯಾಗಿದೆ,  ಇಲ್ಲ ಕೊಲೆಯೇ ಆಗಿದೆ .................




Friday, January 25, 2013

ನಿಮಗೂ ಹೀಗನಿಸಿತ್ತಾ .....??





ಊಟ  ನಿದ್ದೆಗಳ  ಪರಿವೆಯಿಲ್ಲದೆ   ಅವರು  ಅಲ್ಲಿ  ದೇಶವನ್ನು  ಕಾಯುತ್ತಿದ್ದಾರೆ...,    ಇವರಿಲ್ಲಿ   ದೇಶವನ್ನು  ಕೊಳ್ಳೆ  ಹೊಡೆಯುತ್ತಿದ್ದಾರೆ.







ದೇಶದ  ಗಡಿಗಾಗಿ   ಜೀವವನ್ನು  ಪಣವಾಗಿಟ್ಟರೆ   ಅವರು ..  ಇವರು  ದೇಶದೊಳಗೆ ಗಡಿಯ  ಗಲಭೆಯೆಬ್ಬಿಸುತ್ತಿದ್ದಾರೆ.








ಅವರಲ್ಲಿ   ಹಿಮಾಲಯದ  ತಪ್ಪಲಿನಲ್ಲಿ   -10  ಡಿಗ್ರೀ  ಚಳಿಯಲ್ಲಿ   ಅನವರತ ನಡೆಯಿತ್ತಿದ್ದರೆ ......  ಇವರಿಲ್ಲಿ  AC  ರೂಮಿನಲ್ಲಿ    ಕುಳಿತು    ಭ್ರಷ್ಟಾಚಾರದ  ಕತೆಗೆ  ಮುನ್ನುಡಿ  ಬರೆಯುತ್ತಿದ್ದಾರೆ







ಹುಟ್ಟಿದ   ಹಸು  ಕಂದಮ್ಮಗಳನ್ನು  ಬಿಟ್ಟು   ಚೀರುವ  ಹೃದಯ  ಹೊತ್ತು  ಹೊರಟು  ನಿಂತಿದ್ದರೆ ..,  ಇವರಿಲ್ಲಿ  ಮಕ್ಕಳಷ್ಟೇ  ಅಲ್ಲ .., ಅವರ  ಮಕ್ಕಳು  ಮೊಮ್ಮಕಳು  ..,  ಮರಿ ಮಕ್ಕಳ  ಆಸ್ತಿಗಾಗಿ  ದೇಶವನ್ನು   ಲೂಟಿ  ಹೊಡೆಯುತ್ತಿದ್ದಾರೆ  .

                                         
     


                        


ಒಲಿದ  ಒಲುಮೆಯ  ಸಂಗಾತಿ ...,  ತುಂಬಿದ   ಕಣ್ಣುಗಳು .., ಆಕೆಯ  ಮನಸ್ಸು ಇನ್ನಿಲ್ಲದಷ್ಟು  ಭಾರ .., ಇವರ  ಮನೆಯ  ಮನೆಯೊಡತಿಗೂ  ಅಷ್ಟೇ ..  ಯಾರದ್ದೋ ಚೆಲ್ಲಿದ  ರಕ್ತದ  ಡಿಸೈನ್  ಒಡವೆ  ... ಮೈ  ತುಂಬಾ   ಭಾರೀ  ಭಾರ ..








ಯಾವುದೊ  ಆಟಗಾರ  ಗೆದ್ದಮಾತ್ರಕ್ಕೆ  ಹಲವು  ಕೋಟಿಗಳನ್ನು  ಬಹುಮಾನಿಸುವ  ಇವರು ..,  ಕೊನೆಗೆ   ಅವರಲ್ಲಿ  ದೇಶಕ್ಕಾಗಿ  ಸತ್ತರೂ  ಕೂಡ  ಅದರ  ಬೆಲೆ ಹೆಚ್ಚೆಂದರೆ  ಕೆಲವು  ಲಕ್ಷಗಳು .



'Give me your blood  I shell  give you  freedom '  ಹಾಗಂದಿದ್ದರು  ಫೌಂಡರ್   ಆಫ್ ದಿ ಆರ್ಮಿ '  ನೇತಾಜಿ  ಸುಭಾಷ್ಚಂದ್ರ  ಬೋಸ್ '. ಈ  ತಿಂಗಳ  23  ಅವರು  ಹುಟ್ಟಿದ  ದಿನ .  ಅವರ  ಹುಟ್ಟಿದ  ದಿನವನ್ನು  ಸೈನಿಕರ 
ದಿನಾಚಾರಣೆಯನ್ನಾಗಿ   ಯಾಕೆ  ಆಚರಿಸಬಾರದು ?


ದೇಶದ  ಎಲ್ಲ  ಸೈನಿಕರಿಗೂ  ಕೋಟಿ   ಕೋಟಿ   ಹೃದಯಗಳ  ನಮನ ....,  ಭೃಷ್ಟ  ರಾಜಕಾರಣಿಗಳಿಗೆ  ಅವರ  ದುಷ್ಟತನಕ್ಕೆ   ಕೋಟಿ  ಕೋಟಿ   ಹೃದಯಗಳ  ದಿಕ್ಕಾರವಿರಲಿ ...


ಮೇರ  ಭಾರತ್  ಮಹಾನ್      
ಜೈ  ಹಿಂದ್



ಚೈತ್ರ  ಬಿ .ಜಿ.


Friday, January 11, 2013

ನಾನು ತುಂಬಾ ಸುಖವಾಗಿದ್ದೇನೆ ಗೊತ್ತಾ ನಿಮಗೆ ...!



ಒಂದು ಹೆಣ್ಣಿನ ಆತ್ಮ ಸ್ವಗತ ..







 PUC  ನಲ್ಲಿ   85% ಬಂದಿದ್ದರೂ ಇಂಜಿನಿಯರಿಂಗ್    ಹೋಗದೆ  ಡಿಗ್ರಿ ಗೆ ಸೇರಿಕೊಂಡಿದ್ದು  , ಅಣ್ಣಂಗೆ 65% ಬಂದಿದ್ದರೂ ಕಷ್ಟಪಟ್ಟು ಇಂಜಿನಿಯರಿಂಗ್  ಕಾಲೆಜ್ ನಲ್ಲಿ ಸೀಟ್ ದಕ್ಕಿಸಿಕೊಟ್ಟಿದ್ದು .., ಬಿಡಿ ಎಷ್ಟಾದರೂ   ಮದುವೆಯಾಗಿ ಬೇರೆ ಮನೆ ಸೇರೋ ನನ್ನ ಮೇಲೆ ಇನ್ವೆಸ್ಟ್ ಮಾಡೋದು ವೇಸ್ಟ್  ತಾನೇ ...?  ಹಾಗೆನಿಲ್ಲಪ್ಪ  ಅಪ್ಪ ಅಮ್ಮನನ್ನು ಬಿಟ್ಟು ಅಷ್ಟು ದೂರ ಇರೋ ಸಿಟಿಗೆ ಹೋಗಿ ನಂಗೆ ಓದ್ದೊಕಾಗಲ್ಲಪ್ಪ ....



  ಬಿ.ಎಸ್ಸಿ  ಮುಗಿಸಿದ್ದರಿಂದ  ಎಮ್ ಎಸ್ಸಿ   ಮಾಡುತ್ತೆನೆಂದು  ಆಸೆ ತುಂಬಿದ ಕಂಗಳಿಂದ ಗಂಡನನ್ನು ಕೇಳಿದಾಗ , 'ಯಾಕೆ ಚಿನ್ನ ಕಷ್ಟ ಪಡ್ತೀಯ ... ಅರಾಮಗಿ ಇದ್ದುಬಿಡು'  ಎಂದವನು ಇದೆ ಫೈನಲ್ ಅಂತ ನಯವಾಗಿ ಹೇಳಿ ಹೊದಾಗ  ಹಿಂಡಿದ್ದು   ಒಗೆದ ಬಟ್ಟೆಯನ್ನು...., ನನ್ನ ಮನಸ್ಸನ್ನೇನಲ್ಲ   ಬಿಡಿ .....


 ಅರ್ಧಕ್ಕೆ ಬಿಟ್ಟ ನನ್ನ ಸಂಗೀತವನ್ನು ಮುಂದುವರಿಸಲುಹೋದಾಗ   ಮಾವ ಹೇಳಿದ್ದು   'ನಮ್ಮ ಮನೆ  ಮಹಾಲಕ್ಷೀನಮ್ಮ  ನೀನು , ನೀನು ಮಾತಾಡಿದರೆ ಸಂಗೀತದಂತೆ , ಮನೆ ಗಂಡ ಮಕ್ಕಳನ್ನು ಬಿಟ್ಟು ಯಾಕಮ್ಮ ನಿನಗೆ ಸಂಗೀತ ಗಿಂಗೀತಾ....? ಬೆಚ್ಚಗೆ ಸಂಸಾರ ನೋಡಿಕೊಂಡಿದ್ರೆ  ಬೇಕಾದಷ್ಟಾಯಿತಲ್ಲಮ್ಮ  ..' ಅಂತ ನಗೆ ಸೂಸಿದಾಗ  ಸುಟ್ಟಿದ್ದು  ನನ್ನ ದಂಡಿ ದಂಡಿ ಕನಸುಗಳನಲ್ಲ, ಅಡಿಗೆ ಮಾಡುವಾಗ ಎಲ್ಲೋ ಒಂಚೂರು ಮುಂಗೈಗೆ ಬೆಂಕಿ ತಗುಲಿತಷ್ಟೇ .....!


  ಅಮ್ಮ .. ನಂಗೆ ಇಲ್ಲೇ ನೀರು ತಂದು ಕೊಡು .., ಅಮ್ಮ ನಂಗೆ ಶೂ ಹಾಕು ,  ಅಮ್ಮ ನನ್ನ ಬ್ಯಾಗ್ ತಂದುಕೊಡು ಎಂದು ಕುಳಿತಲ್ಲಿಯೇ ಸೇವೆ ಮಾಡಿಸಿಕೊಳ್ಳುವ ನನ್ನ   ಮಗರಾಯನಿಗೆ  'ಸರದಾರ ಅವನು, ತಾನೇ ಮಾಡಿಕೊಳ್ಳಲು  ಅವನದೇನು ನಿನ್ನಂತೆ  ಹೆಣ್ಣೇ ...?'   ನನ್ನ ಅತ್ತೆ  ಸೊಲ್ಲು ನುಡಿವಾಗ ಅವಡು ಕಚ್ಚಿ ಬರುವಷ್ಟು ಕೊಪವಾದರೂ ......, ಬಿಡಿ ನಂಗೆ ಕೋಪ ಬರುವುದೇ ಇಲ್ಲ ..., ನನ್ನದು ಭಾರೀ  ಶಾಂತ ಸ್ವಭಾವ ......!


 ಕುರ್ತಾ  ಜೀನ್ಸ್  ಹಾಕಿಕೊಂಡು ಬಿಂದಾಸ್ ಆಗಿ ಓಡಾಡುತ್ತಿದ್ದ  ನನ್ನ  ನಾದಿನಿಯನ್ನು ' ಎಲ್ಲಿ ತಗೊಂಡ್ಯೇ  ಎಷ್ಟು ಚೆನ್ನಾಗಿದೆ  ! ಅಂದಿದಕ್ಕೆ  , ' ಬಿಡಿ ಅತ್ತಿಗೆ ನಿಮಗೆ ಸೀರೆ ಚೂಡಿದಾರನೇ  ಒಪ್ಪುತ್ತೆ'  ಅಂದ ಅವಳ  ಜಾಣ್ಮೆಯ  ಉತ್ತರಕ್ಕೆ  ' ನಿನ್ನ ಆನೆ ಗಾತ್ರಕ್ಕೆ  ಒಪ್ಪುತ್ತೆನಮ್ಮಾ  ..?'  ಅಂತ ನಾನೇನೂ ಕೇಳಲ್ಲ ಬಿಡಿ ..., ನಂಗೆ ಕೆಲವೊಮ್ಮೆ ಗಂಟಲ್ಲಲ್ಲಿ  ಕಲ್ಲು ಸಿಕ್ಕಿ ಹಾಕಿಕೊಂಡಿರುವುದರಿಂದ  ಎಷ್ಟೋ  ಸಲ ಮಾತಾಡುವುದರ ಬದಲು ಸುಮ್ಮನಿದ್ದುಬಿಡುತ್ತೇನೆ .....!



  'ನಿನ್ಯಾಕೆ ದುಡಿಯಬೇಕು .? ಕಷ್ಟ ಪಡಬೇಕು..?  ನನ್ನ ದುಡ್ಡು ...  ಸರ್ವಸ್ವ  ಎಲ್ಲವೂ ನಿಂದೆ ತಾನೇ  ...?'  ಎಂದವನು ಪೈಸೆ ಪೈಸೆ ಗೂ ಲೆಕ್ಕ ಕೇಳುವಾಗ  ಅವಮಾನದ ಛಡಿ ಏಟಿಗೆ  ಸ್ವಾಭಿಮಾನ ನರಳಿದರೂ...ಹೊಂದಾಣಿಕೆಯ ಹೊದಿಕೆ... ಇಲ್ಲಪ  ಹಾಗೇನೂ ಇಲ್ಲ ಗಂಡ ಹೆಂಡತಿ ಅಂದ ಮೇಲೆ  ಯಾರೋ  ಒಬ್ಬರು ಹೊಂದಿಕೊಂಡರಾಯಿತು ..., ಆದರೆ ಪ್ರತೀ ಸಲವೂ 'ಆ ಯಾರೋ ಒಬ್ಬರು'  ' ನಾನು '  ಆಗಿರಬೇಕಷ್ಟೇ ...  ತುಂಬಾ ಸುಲಭ ಅಲ್ಲವೇ !


  ನನಗೆ ಎಷ್ಟು ಆರಾಮು ಎಂದರೆ .., ಮಾವನಿಗೆ ಕೋಪ  ಬಂದೀತೆ ..? ಅತ್ತೆಗೆ ಬೇಸರವಾದೀತೇ ...?  ಮಗನಿಗೆ ಸಕಲ ಸೌಕರ್ಯ ತಯಾರಾಗಿದೆಯೇ ...?  ಗಂಡ ಸಿಟ್ಟಾದನೆ ...? ಬಂದ  ನೆಂಟರಿಗೆ ಸಮಧಾನವಾಯಿತೆ ...?  ಬರೀ 'ಇ..ಷ್ಟೇ' ನೋಡಿಕೊಂಡರಾಯಿತು ..., ಮತ್ತೆ ನನ್ನ  ಕೋಪ , ಬೇಸರ , ಸೌಕರ್ಯ , ಸಿಟ್ಟು , ಸಮಾದಾನ ..?  ಛೆ .., ಛೆ .., ನಂಗೆ ಅವೆಲ್ಲ ಏನೂ ಆಗಲ್ಲ ಬಿಡಿ ...., ಮನೆ ಮಹಾಲಕ್ಷ್ಮಿಯಲ್ಲವೇ  ನಾನು.....!



ಅಡಿಗೆ ಮನೆಯ ನನ್ನ ಹೆಡ್ ಆಫೀಸಿನಲ್ಲಿ   ನನ್ನ  ಕನಸುಗಳು ನನ್ನನ್ನು ಗೇಲಿ ಮಾಡುವಾಗ.., ನನಗೆ ನಾನೇ ಅಪರಿಚಿತವೆನಿಸುವಾಗ .. ಸುಮ್ಮನೆ ಕಣ್ಣಲ್ಲಿ  ಬಂದ  ನೀರು ....ಈರುಳ್ಳಿ ಹೆಚ್ಚಿದ್ದಕ್ಕಾಗಿ ಮಾತ್ರ .....!!

Friday, January 4, 2013

ಹಕ್ಕಿ ಹಾಡು



ಆಸೆ ನಿರಾಸೆ
ಏನಾದರೂ ಕೊಡು ನೀನು
ದೀಪವೂ ನಿನ್ನದೇ ಗಾಳಿಯೂ ನಿನ್ನದೇ.


*      *    *

ಅದಿಲ್ಲ ಇದಿಲ್ಲ
ಇರುವುದು ನಮಗೆ ಬೇಕಿಲ್ಲ
ಇರದಿದುದರ  ಕಡೆಗೆ ತುಡಿವುದೇ ಜೇವನ.

*       *      *


ಬರುವೆಯೋ ಬಾರೆಯೋ
ಒಂಟಿ ಹಕ್ಕಿ ಹಾಡು
ಕಾಂತನಿಲ್ಲದ ಮೇಲೆ ಏಕಾಂತವ್ಯಾಕೆ..

*      *      *

ಸುಖ ದುಃಖ
ಒಂದನ್ನೇ ತೆಗೆದುಕೊಳ್ಳಲಾರೆ
ಯಾರಿಗಿಂಟು ಯಾರಿಗಿಲ್ಲ ಬಾಳೆಲ್ಲ ಬೇವುಬೆಲ್ಲ.

*     *      *

ಬಿಸಿ ಬೆಳಕು
ಪ್ರತೀಕ್ಷೆಯ ಹಣತೆ ನೀನು
 ತನುವು ನಿನ್ನದು ಮನವು ನಿನ್ನದು.

 *      *      *

ಪ್ರೀತಿ ಪ್ರೇಮ
ಕಡಿಮೆಯಿಲ್ಲ  ಕೊರತೆಯಿಲ್ಲ
ಯಾಕೋ ನಿನ್ನ ನಲಿವಿನಲ್ಲಿ ಪಾಲುಗೊಳ್ಳದೆನ್ನ  ಮನಸು.

*       *      *

ಮಾತು ಮೌನ
ಎರಡೂ ಏನೋ ಎಂತೋ
ಬದುಕು ಮಾಯೆಯ ಮಾಟ ಮಾತು ನೆರೆತೆರೆಯಾಟ.

*        *        *

ಕರೆದಾಗ ಅವನು
ಹೋಗಲೇಬೇಕು  ನಾವು
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ..


 

Friday, December 21, 2012

ಪ್ರೀತಿ ಅಂದ್ರೆ ....?


ಅವಳು  : ಪ್ರೀತಿ ಅಂದ್ರೆ ಏನು  ....?

ಅವನು  : ಹಮ್ಮ...,  ಪ್ರೀತಿ ಅಂದ್ರೆ ನೀನೆ ಕಣೆ!

ಅವಳು  : ಏ ಹೋಗು, ಹೇಳು  ಪ್ರೀತಿ ಅಂದ್ರೆ ಏನು?

ಅವನು  :  ಹೋಗ್ಲಿ ನೀನೆ ಹೇಳು ಪ್ರೀತಿ ಅಂದ್ರೆ ಏನು ಅಂತ ?

ಅವಳು : ಪ್ರೀತಿ ಅಂದ್ರೆ  ನಾನು ನಿನಗೆ ಏನು ಬೇಕಾದರೂ ಮಾಡ್ತೀನಿ  ಅದೇ ಅಲ್ವ ಪ್ರೀತಿ ಅಂದ್ರೆ ?

ಅವನು : ಹಮ್ಮ... ಆಮೇಲೆ?

ಅವಳು : ಹಮ್ಮ.. ಆ ಮೇಲೆ ನಾನು ನಿಂಗೆ ಜೀವ ಬೇಕಾದರೂ ಕೊಡ್ತಿನಿ.

ಅವನು : ನಿನ್ನ ಜೀವ ತಗಂಡು ನಾನೇನು ಮಾಡಲೇ ..?  ಹೋದ ಜೀವನ ಮೈನ್ಟೈನ್ ಮಾಡೋದು ತುಂಬಾ ಕಷ್ಟ!

ಅವಳು : ಏ ಹೋಗು   ತಮಾಷೆ ಮಾಡಬೇಡ ನೀನು .., ಸೀರಿಯಸ್  ಆಗಿ ಹೇಳ್ತಾ ಇದ್ದೀನಿ, ನಾನು ನಿಂಗೆ ನನ್ನ    ಜೀವ ಬೇಕಾದರೂ  ಕೊಡ್ತಿನಿ.

ಅವನು : ನಾನೂ ಸೀರಿಯಸ್ ಆಗೇ ಹೇಳ್ತಾ ಇರೋದು ಕಣೆ,  ಅಲ್ಲಾ  ಯಾರದ್ದೂ ಜೀವ ತಗಂಡು. ಯಾರದ್ದೋ ಜೀವ ತಗೊಂಡು ಯಾರೂ ಏನೂ ಮಾಡೋದಕ್ಕೆ ಆಗಲ್ಲ ಕಣೆ!

ಅವಳು : ಜೀವ ಬೇಡ ಅಂದ್ರೆ ಬಿಡು, ಮತ್ತೆ ನಿನಗಾಗಿ ನಾನು ಏನು ಬೇಕಾದರೂ ಮಾಡ್ತೀನಿ ಗೊತ್ತಾ?

ಅವನು : ನಿನಗೊಂದು ವಿಷ್ಯ ಗೊತ್ತ? ಯಾರೂ ಯಾರಿಗೂ ತುಂಬಾ ಒಳ್ಳೇದು ಮಾಡೋಕೆ  ಸಾದ್ಯ   ಇಲ್ಲ  ಕಣೆ?!

ಅವಳು : ಹಾಗಾದ್ರೆ ನೀನು ನನ್ನ ಪ್ರೀತಿಸಲ್ವ?

ಅವನು : ತುಂಬಾ ಪ್ರೀತಿಸ್ತಿನಿ !

ಅವಳು :  ಹೇಳೋ ಪ್ರೀತಿ ಅಂದ್ರೆ ಏನು?

ಅವನು : ನೋಡೇ ಪ್ರೀತಿ ಅಂದ್ರೆ ನಿನ್ನ ಪ್ರೀತಿಸೋದು, ನಿನ್ನ ಪ್ರೀತಿಸೋದು ಅಂದ್ರೆ ನಿನ್ನ ವ್ಯಕ್ತಿತ್ವವನ್ನು  ಪ್ರೀತಿಸೋದು!

ಅವಳು:  ...!

ಅವನು : ವ್ಯಕ್ತಿತ್ವನ್ನು ಪ್ರೀತಿಸೋದು ಅಂದ್ರೆ ನಿನ್ನ ಅಭಿಪ್ರಾಯವನ್ನು ನಾನು ಒಪ್ಪದೇ ಇದ್ದಾಗಿಯೂ
 ಗೌರವಿಸೋದು.

ಅವಳು : :...!

ಅವನು  : ನೀನು ಅಂದ್ರೆ ಅದೇ ಕಣೆ, ನಿನ್ನ ಅಭಿಪ್ರಾಯ, ನಿನ್ನ ವ್ಯಕ್ತಿತ್ವ, ನಿನ್ನ ಕನಸು.

ಅವಳು :....!

ಅವನು : ನಮ್ಮ ಮದುವೆಯ ಗುರಿನೋ ಅದೇ, ನಾನೂ ಬೆಳೆದು ನಿನ್ನನ್ನೂ ಬೆಳೆಸೋದು, ನನ್ನ
 ವ್ಯಕ್ತಿತ್ವ ನಿನ್ನ  ಸಾನಿಧ್ಯದಲ್ಲಿ, ನಿನ್ನ ವ್ಯಕ್ತಿತ್ವ ನನ್ನ ಸಾನಿಧ್ಯದಲ್ಲಿ ಬೆಳಗೋದು, ಬೆಳೆಯೋದು!

ಅವಳು : ಇದು ಸಾದ್ಯನ ?


ಅವನು :  ಯಾಕಿಲ್ಲ ?  ಇನ್ನು ನೀನು ಹೇಳಿದ ಪ್ರೀತಿಯ ವಿಷ್ಯ ., ನಾನು  ನಿನಗಾಗಿ ಏನೂ ಮಾಡಬೇಕಿಲ್ಲ!
  ನೀನೂ ಕೂಡ!  ನನ್ನ  ಬೆಳಗಿನ ನಸುಕಿಗೊಂದು ನಿನ್ನ ನಗು ತುಂಬಿದ ಗುಡ್ ಮೊರ್ನಿಂಗು, ನಿನ್ನ ಹಬೆಯಾಡುವ ಕಾಫಿಗೊಂದು ನನ್ನ ಥ್ಯಾಂಕ್ಸ್,  ಹೊರಟು ನಿಂತವನಿಗೊಂದು ಸ್ನೇಹ ತುಂಬಿದ ಟಾಟಾ,  ದಣಿದು ಬಂದವನಿಗೊಂದು ನಿನ್ನ ಪ್ರೀತಿಯ ಸಾಂತ್ವಾನ, ನಿನ್ನ ಹೊಸ ಚೂಡಿದಾರಕ್ಕೊಂದು ನನ್ನ ಕಾಂಪ್ಲಿಮೆಂಟು, ನಿನ್ನ  ಉಪ್ಪಿಟ್ಟಿಗೆ ಉಪ್ಪು ಮರೆತಾಗೊಮ್ಮೆ ನನ್ನ      ಒಂದು ಹೋಗ್ಲಿ ಬಿಡು      ಮನೆಗೆ ಬೇಗ ಬರೋ ಪ್ರಾಮಿಸ್ ಮಾಡಿ ಲೇಟ್ ಆದಾಗ
 ನಿನ್ನ ಒಂದು   'ಇಟ್ಸ್ ಓಕೆ ',  ನಂಗೆ ಕೋಪ ಬಂದಾಗ ನಾನು ಪೂರ್ತಿ 420 ಅಂತ ನಿಂಗೆ ಇರೋ ನೆನಪು, ನಿಂಗೆ ಸಿಟ್ಟು ಬಂದಾಗ, ಗುಡುಗು ಸಿಡಿಲು ಆದ್ಮೇಲೆ ಪ್ರೀತಿ ಮಳೆ ಸುರಿಯುತ್ತೆ ಅನ್ನೋ  ನನ್ನ ಅರಿವು,  ಉದ್ದೇಶವೇ ಇಲ್ಲದೆ  ಆಡುವ ಹತ್ತು  ನಿಮಿಷದ ಹರಟೆ,  ಮತ್ತು ನಿನಗೆ 
ಬೇಕೆನಿಸಿದಾಗಲೆಲ್ಲ  ಸದಾ ಸಿದ್ಧವಿರುವ  ನನ್ನ ಕಿವಿ!

ಅವಳು : ಕಿವಿನ ..?

ಅವನು : ಹೌದು ಕಣೆ .., ಪಾಪ ಹೆಣ್ಣು ಜೀವಗಳು! ತಾವು ಹೇಳುವುದನ್ನು ಕೇಳಿಸಿಕೊಳ್ಳಲು 2 ಕಿವಿ ಬೇಕು ,  ಹಾಗೆ ತಾನು ಹೇಳಿದ್ದೆಲ್ಲವನ್ನು ಕೇಳಿಸಿಕೊಳ್ಳುವ ಗಂಡನ್ನನ್ನು
 ಪಡೆದ ಹೆಣ್ಣು ಜಗತ್ತಿನ ಅತ್ಯಂತ  ತೃಪ್ತಿವಂತ  ಹೆಂಡತಿ, ಹಾಗೆ ಕಿವಿ ತೆರೆದಿಟ್ಟು ಮೊಬೈಲ್ ಅಥವಾ ಲ್ಯಾಪ್ಟಾಪಿನಲ್ಲಿ  ತಲೆ ಮುಳುಗಿಸದೆ, ಕಣ್ಣಲ್ಲಿ ಕೆಟ್ಟ ನಿರ್ಲಕ್ಷ್ಯವನ್ನು  ಹೊರಗೆಡಹದೇ, ಹೇಳುವ ಮೊದಲೇ ಅದನ್ನು ಅಸಡ್ಡೆ ಎಂಬ ದೇಹ ಭಾಷೆ ತೋರಿಸದೆ, ಸ್ನೇಹ ಪೂರ್ವಕವಾಗಿ ಕೇಳಿಸಿಕೊಳ್ಳುವ ಗಂಡಸೇ ಅತ್ಯoತ ಯಶಸ್ವಿ ಗಂಡನಾಗಬಲ್ಲ!
             

ಅವಳು :  ಹಾಗಾದರೆ ಗಂಡಸಿಗೂ ಕೇಳಲು ಎರಡು ಕಿವಿ ಬೇಡ್ವ ?

ಅವನು : ಹೆಚ್ಚಿನ ಸಲ ಆತನಿಗದು ಬೇಕಾಗದು, ಆತನು ಅಷ್ಟು ಸುಲಭವಾಗಿ ತೆರೆದುಕೊಳ್ಳಲಾರ, ಮೌನದ ಚಿಪ್ಪೊಳಗೆ  ಆತನನ್ನು ಸ್ವಲ್ಪ  ಹೊತ್ತು  ಇರಗೊಟ್ಟರೆ  ಆತನಿಗೆ ಅದೇ ಸಾಂತ್ವಾನ.

ಅವಳು : ಅಷ್ಟೆನ ಪ್ರೀತಿ ಅಂದ್ರೆ ..?


ಅವನು : ಹೌದು ಕಣೆ!  ಸಂತೋಷ, ನೆಮ್ಮದಿ,  ಪ್ರೀತಿಯನ್ನು  ಇನ್ನೆಲ್ಲೋ    ಇನ್ನ್ಯಾವುದರಲ್ಲೋ ಹುಡುಕಿಕೊಂಡು   ಹೊರಟರೆ   ಅದು ಎಂದಿಗೂ ಸಿಗಲಾರದ ಮರೀಚಿಕೆ ..!    ಬದುಕಿನ  ಪ್ರತಿ ಕ್ಷಣವನ್ನು, ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸೋದೆ ಪ್ರೀತಿ .., ಅದೇ ಜೀವನ ಪ್ರೀತಿ ....

   *                               *                                *               
ಕನಸು ಉದ್ದವಾಯಿತೇನೋ   ಸ್ಟೌ ಮೇಲಿಟ್ಟಿದ್ದ ಟೀ ಉಕ್ಕಿಬಂದಿತ್ತು.

ಅವನು : ಎಷ್ಟೊತ್ತೆ  ಒಂದು ಟೀ ಮಾಡೋಕೆ..?  ಆಗಿಲ್ವೇನೆ ಇನ್ನೂ!

ಅವಳು : ಆಗೋಯ್ತು ತಂದೆ ....

ಅವನು : ಥೂ ... ಸಕ್ಕರೆ ಸಾಲ,  ದಿನ ಮಾಡ್ತಿಯ ಎಷ್ಟು ಸಕ್ಕರೆ ಹಾಕ್ಬೇಕು ಗೊತ್ತಾಗಲ್ವ ..? 

ಅವಳು :............

ಅವನು : ಎಲ್ಲೇ ನನ್ನ ಸಾಕ್ಸು ?

ಅವಳು : ಈಗ ತಂದೆ ...

ಅವನು : ಥೂ ದುಡಿದು ತಂದು ಹಾಕೋದು ಮಾತ್ರ ಕಾಣತ್ತೆ, ಈ ಮನೇಲೆ ಒಂದೂ  ಬೇಕು ಅಂದಾಗ  ಸಿಗಲ್ಲಾ  ....

ಅವಳು:  : ...........

ಅವನು : ನೋಡು ನೀನು ಆ ಪೀಟೀಲು ಕೊಯ್ತಾ ಕೂತ್ಕೊಬೇಡ ಈಗ ಜಗತ್ತು ಫಾಸ್ಟ್ ಆಗಿದೆ ,
 ಪೀಟೀಲಿಗೆ ಸ್ಕೋಪೂ ಇಲ್ಲ, ಅದರಿಂದ ಪ್ರಯೋಜನನೂ ಇಲ್ಲ ಗೊತ್ತಾಯ್ತ ?   ಅದೆಲ್ಲ ಬಿಟ್ಟು ಸರಿಯಾಗಿ ಮನೆ ನೋಡ್ಕೊಂಡು ಇರು, .ಮನೇಲಿ ನೆಮ್ಮದಿನೆ ಇಲ್ಲದ ಹಾಗಾಗ್ ಬಿಟ್ಟಿದೆ!


ಅವಳು : ......

ಅವನು : ನೋಡು ಸಂಜೆ ನನ್ನ ಫ್ರೆಂಡ್ಸ್, ಕಲೀಗ್ಸ್ ಬರ್ತಾ ಇದಾರೆ , ಅವ್ರ  ಮುಂದೆ ಈ ತರಾ ಅಳುಮುಂಜಿ ಮುಖ  ಇಟ್ಕೋಬೇಡ, ನಾನು ನಗ್ತಾ ಇರ್ತೀನಿ ಸ್ವಲ್ಪ ಕೊ ಆಪರೇಟ್ ಮಾಡು. ಹೇಳಿದ್ದು ಕೆಳಸ್ತ ?

ಅವಳು : ಹಮ್ಮ ...

ಅವನು : ಇದೆ ಅನ್ಬಿಟ್ಟು  ಹನ್ನೆರಡು  ಮೊಳ  ರೇಷ್ಮೆ ಸೀರೆ ಉಟ್ಕೊಂಡು ಕೂತ್ಕೊಬೇಡ, ಸ್ವಲ್ಪ ನೀಟ್ ಆಗಿ ಡ್ರೆಸ್ ಮಾಡ್ಕೋ ಏನು?

ಅವಳು : ಹಮ್ಮ ..

ಅವನು ತಿರುಗಿಯೂ ನೋಡದೆ ದಡಾರನೆ ಬಾಗಿಲು ಎಳೆದುಕೊಂಡು ಹೋದಾಗ ಆಕೆಯ ಮನದಲ್ಲಿ
 ಮಾರ್ದನಿಸುತ್ತಿತ್ತು 

" ಬದುಕಿನ  ಚಿಕ್ಕ ಚಿಕ್ಕ ಸಂತೋಷಗಳನ್ನು  ಅನುಭವಿಸೋದೆ ಪ್ರೀತಿ .."
 

            

Tuesday, December 11, 2012

ಚಲ್ತಿ ಕಾ ನಾಮ್ ಗಾಡಿ..? ಯಾ ಜಿಂದಗಿ ..?

      
         
         
                ಒಂದು ಚಳಿಯಾದ ಬೆಳಗಿನಲ್ಲಿ ಬೆಲ್ಲ ತುಪ್ಪದೊಂದಿಗೆ   ಗರಿ ಗರಿಯಾದ ದೋಸೆಯನ್ನು ತಿನ್ನುತ್ತ ಕುಳಿತ್ತಿದ್ದಾಗ ನಾನಂದೆ  ' ಅಪ್ಪ ನಂಗೆ ಒಂದು ಸ್ಕೂಟಿ ಬೇಕು ..!'  ಅಪ್ಪಂಗೆ ಪಕ್ಕದಲ್ಲೇ ಬಾಂಬ್ ಬಿದ್ದ ಹಾಗೆ ಆಗಿತ್ತೋ ಏನೋ .., 'ಹಮ್ಮ ..?' ಎಂದರು ತಲೆ ಎತ್ತಿ .., ನಾನಂದೆ  ' ಹುಮ್ಮ್..  ನಂಗೆ ಒಂದು ಸೆಕೆಂಡ್ ಹ್ಯಾಂಡ್ ಸ್ಕೂಟಿ ಬೇಕು ..!' , ಅಪ್ಪ  'ನೋಡನ '  ಅಂತಷ್ಟೇ ಹೇಳಿ  ದೋಸೆ ತಿನ್ನುವುದರಲ್ಲಿ ಮಗ್ನವಾದರು .

 
             
                  15     ದಿನ ಅದೇ ಯೋಚನೆಯಲ್ಲಿದ್ದೆ ,  ಅಪ್ಪ   'ನೋಡನ '  ಅಂದರೆ  ಅದು   'ok '  ಅಂತ  ನಂಗೆ  ಚೆನ್ನಾಗಿ  ಗೊತ್ತಿತ್ತು !  ಅಪ್ಪ ಸೆಕೆಂಡ್ ಹ್ಯಾಂಡ್ ಸ್ಕೂಟಿ ಯಾರ ಬಳಿ  ಇದೆ ಎಂದು ವಿಚಾರಿಸುತ್ತಿರಬಹುದು .., ಶೋ ರೂಂ ನಲ್ಲೂ ಸೆಕೆಂಡ್  ಹ್ಯಾಂಡ್  ಸಿಗುತ್ತಂತೆ ಅಂತ ಲೆಕ್ಕಾಚಾರ ಹಾಕುತ್ತಿತ್ತು ಮನಸ್ಸು , ನಾನಾಗ ಸಾಗರದ ಹಾಸ್ಟೆಲ್ನಲ್ಲಿ  ಇದ್ದುಕೊಂಡು ಓದುತ್ತಿದ್ದೆ , ಅಪ್ಪ ಸಾಗರಕ್ಕೆ ಬಂದವರೇ , 'ತಗಳದೆ ಆದ್ರೆ ಸೆಕೆಂಡ್ ಹ್ಯಾಂಡ್ ಯಾಕೆ..  , ಸ್ಕೂಟಿ ಪೆಪ್ ಅಂತ ಹೊಸುದು ಬಂದಿದ್ದು , ಕೋಟೆಷನ್  ನೋಡು 32೦೦೦ ಶೋ ರೂಮ್  ಪ್ರೈಸ್ ,  38೦೦೦  ಆನ್ ರೋಡ್  ಪ್ರೈಸ್ , ನಾನು ಶೋ ರೂಮ್  ನಲ್ಲಿ ಮಾತಡಿದ್ದಿ , ನಿಂಗೆ ಯಾವ ಕಲರ್ ಬೇಕು ಅಂತ ಸೆಲೆಕ್ಟ್ ಮಾಡು' ಅಂತ ಕೈಗೆ  ಕೋಟೆಷನ್ ಕೊಟ್ಟೆ ಬಿಡೋದಾ !  ಪಕ್ಕದಲ್ಲೇ ಬಾಂಬ್ ಬಿದ್ದ ಹಾಗಾಗುವ ಸರದಿ ನನ್ನದಾಗಿತ್ತು !. 10  ಸಾವಿರಕ್ಕೋ , 15  ಸಾವಿರಕ್ಕೋ   ಸಿಗುವ ಸೆಕೆಂಡ್  ಹ್ಯಾಂಡ್ ಸ್ಕೂಟಿ ತೆಗೆದುಕೊಳ್ಳುವ  ಯೋಚನೆಯಿತ್ತೆ ಹೊರತು  ಹೊಸ ಸ್ಕೂಟಿ ಬಗ್ಗೆ ಯೋಚಿಸಿಯೂ ಇರಲ್ಲಿಲ್ಲ ..! ಸರಿ ಶೋ ರೂಂ  ಗೆ ಹೋಗಿ  ಕಲರ್  ಎಲ್ಲ ನೋಡಿ ಕೆಂಪು ಬಣ್ಣದ್ದು ಸೆಲೆಕ್ಟ್ ಮಾಡಿ ಹಾಸ್ಟೆಲ್ ಗೆ ಬಂದರೂ ಮನಸ್ಸು ಪೂರ್ತಿಯಾಗಿ ಖುಷಿ ಪಡದೆ ಇನ್ಸ್ಟಾಲ್ ಮೆಂಟ್  ನಲ್ಲಿ ಖುಷಿಯನ್ನು ಆಸ್ವಾದಿಸುತ್ತಿತ್ತು .









   
                 ಕೊನೆಗೂ ಪ್ರೊಸೀಜರ್ ಎಲ್ಲ ಮುಗಿದು ಅದೇ ಶೋ ರೂಮ್  ನಲ್ಲಿ ಉದುಬತ್ತಿ ಹಚ್ಚಿ ಗಣಪತಿ ಪೂಜೆಯನ್ನೂ ಮಾಡಿ ಸ್ಕೂಟಿ ಕೀ  ನನ್ನ ಕೈಗೆ ಬಂದು ಸ್ಕೂಟಿ ಹತ್ತಿ ಕೂತು  ಹೋಗ್ತಾ ಇದ್ರೆ ಆಕಾಶದಲ್ಲೇ ಸ್ಕೂಟಿ ಹೊಡೆದ ಅನುಬವ !   ಆಕಾಶವೇ ಅಂಗೈಯಲ್ಲಿ  ಸಿಕ್ಕಿದಷ್ಟು ಆನಂದ ! ನನ್ನ ಸ್ಕೂಟಿ , ನನ್ನ ಹೆಸರಲ್ಲೇ ರಿಜಿಸ್ಟ್ರೇಷನ್  ! ಹಮ್ಮ .. ಅವತ್ತಿನಿಂದ ಇವತ್ತಿನವರೆಗೂ ಪ್ರತೀ ಸಲ ನನ್ನ ಪ್ರೀತಿಯ ಸ್ಕೂಟಿ  ನೋಡಿದಾಗಲೂ  ಮನಸಿನ ಯಾವೊದೋ ಮೂಲೆಯಲ್ಲಿ ಒಂದು  ಖುಷಿಯ ಪಲಕು! ಗಣಪತಿ ಕೆರೆಯ ಬಳಿಯ ಹಾಸ್ಟೆಲ್ನಿಂದ ಸ್ಕೂಟಿ ಹೊರಟರೆ BH  ರೋಡ್ ದಾಟಿ ಇಕ್ಕೇರಿ ರೋಡಲ್ಲಿ ಇರುವ ನನ್ನ ಕಾಲೇಜು     ತಲಪಲು ೧೦ ನಿಮಿಷ !  ವಾವ್  ..! ಸ್ವಲ್ಪ ದಿನ ಸಮಯವೇ ನನ್ನ ಕೈಲಿದ್ದಷ್ಟು ಖುಷಿ ನನಗೆ !

             
                  ಹಾಸ್ಟೆಲ್ ಎದುರಿಗೆ ಇದ್ದ ನೀರಿನ ಟ್ಯಾಂಕ್ ನಲ್ಲಿ ನನ್ ಸ್ಚೂಟಿಗೆ ದಿನ ಬಿಟ್ಟು ದಿನ ಸ್ನಾನ , ಮಿರ ಮಿರ ಮಿಂಚುವಂತೆ ದಿನ ಬಟ್ಟೆಯಿಂದ್ ಒರೆಸುವಷ್ಟು ಉಪಚಾರ !   ಪೆಟ್ರೋಲ್ ಪ್ರೈಸ್   ಒಂದು ಲೀಟರ್ ಗೆ Rs  42 ಇತ್ತು ಅವಾಗ , ಅಪ್ಪ ಅಷ್ಟೊಂದು  ಸ್ಟ್ರಿಕ್ಟ್ ಆಗಿ ಏನೂ  ಹೇಳದ್ದಿದ್ದರೂ ಅದೇನೋ ಗೊತ್ತಿಲ್ಲ ನಂಗೆ ನಾನೇ ಕೆಲವು ನಿಯಮವನ್ನು  ಹಾಕಿಕೊಂಡುಬಿಟ್ಟಿದ್ದೆ , ತಿಂಗಳಿಗೆ ಇಂತಿಷ್ಟೇ ಪೆಟ್ರೋಲ್ ಹಾಕ್ಬೇಕು , ಸುಮ್ಸುಮ್ನೆ ಎಲ್ಲೆಂದರಲ್ಲಿ ಸುತ್ತಬಾರದು , ಅನಾವಶ್ಯಕವಾಗಿ ಸ್ಕೂಟಿ ಹೊಡಿಬಾರದು,  ಸ್ಕೂಟಿ ನ  ತುಂಬಾ ಚೆನ್ನಾಗಿ ಮೈಂಟೈನ್ ಮಾಡ್ಬೇಕು  etc ... etc..ಹಮ್ಮ ..  ಕಾಲೇಜು ಬಿಟ್ಟರೆ ನನ್ನ ಸ್ಕೂಟಿಗೆ ಸಾಗರದಲ್ಲಿರುವ ಪ್ರತಿ ಲೈಬ್ರರಿಯೂ  ಚಿರಪರಿಚಿತ ! ನಾನು ಬಯಸಿದಾಗಲೆಲ್ಲ ಕ್ಷಣ ಮಾತ್ರದಲ್ಲಿ ನನ್ನನ್ನು ಲೈಬ್ರರಿಯ  ಎದುರಿಗೆ ತಂದು ನಿಲ್ಲಿಸುತ್ತಿತ್ತು

                ಫೈನಲ್ ಸೆಮ್ ನಲ್ಲೆ ಮದುವೆ  ಫಿಕ್ಸ್ , ಹಾಸ್ಟೆಲ್ ನಲ್ಲಿ  ಎಲ್ರೂ ಅಂತಿದ್ರು , " ಚೈತ್ರನಿಗೆ ಹೊಸ ಗಂಡ ಸಿಕ್ಕದ  ಅಂತ ಹಳೆ ಗಂಡನ  ಬಗ್ಗೆ ಅಸ್ಥೆ ಕಡಿಮೆ ಆಯಿತು ",.  ಅದೇನೋ ಮದುವೆಗೆ ಸಮಯ ತುಂಬಾ ಕಡಿಮೆ ಇದ್ದಿದ್ರಿಂದ ಶಾಪಿಂಗ್..  ಸ್ಟಿಚ್ಚಿಂಗು..  ಅದು.. ಇದು.. ಅಂತ ನನ್ನ ಪ್ರೀತಿಯ ಸ್ಕೂಟಿ ಕಡೆ ಗಮನವೇ ಕೊಡೋದಕ್ಕೆ ಆಗ್ತಾ ಇರ್ಲಿಲ್ಲ .., ಪಾಪ ಅದಕ್ಕೆ ಬೇಜಾರಾಗಿತ್ತೋ ಏನೋ  ...





               ಬೆಂಗಳೂರಿಗೆ  ನನ್ನೊಂದಿಗೆ ಬಂದ ನನ್ನ ಸ್ಕೂಟಿ ನಾನೇ ಆಶ್ಚರ್ಯ ಪಡುವಷ್ಟು ಬೇಗನೆ ಇಲ್ಲಿನ ಸಿಗ್ನಲ್ಲು ಟ್ರಾಫಿಕ್  ಗೆ  ಒಗ್ಗಿಕೊಂಡಿತು , ಆದರೆ ಪಾಪ ಬೆಂಗಳೂರಿನ ೨೫ ರೋಡ್ಗಳು ಅದಕ್ಕೆ ಸದಾ ಗೊಂದಲ ! ಯಾವ ಕಡೆ ಹೋಗೋದು ಅಂತ ದಿಕ್ಕೇ ತೋಚದ ಸ್ತಿತಿ , ಒಮ್ಮೆ ನೋಡಿದ ರೋಡು ಮತ್ತೊಮ್ಮೆ ನೋಡುವಾಗ ಚೇಂಜು ! ಪಾಪ ನನ್ನ ಸ್ಕೂಟಿ ಏನು ಮಾಡಲು ಸಾದ್ಯ ? ಈಗ್ಲೂ ಅಷ್ಟೇ ಎರಡು ಮೂರು  ಕವಲುಗಳ  ದಾರಿಯಲ್ಲಿ  ' I Cant '  ಅಂತ ಒಮ್ಮೊಮ್ಮೆ  ಮುಷ್ಕರ ಹೂಡಿಬಿಡುತ್ತದೆ ..!

              ಮಗಳನ್ನು ಸ್ಕೂಲ್ನಿಂದ ಪಿಕ್ ಮಾಡೋದು,    ತರಕಾರಿ ತರೋದು,    ಚಿಕ್ಕ ಪುಟ್ಟ ಶಾಪಿಂಗು  , ಗೆಳತಿಯರೊಡನೆ ಓಡಾಟ,  ಅದು ಇದು ಸಣ್ಣ ಪುಟ್ಟ ಕೆಲಸ ..ಎಲ್ಲವನ್ನೂ ನನ್ನ ಸ್ಕೂಟಿ ಸ್ವಲ್ಪವೂ ಬೇಜಾರಿಲ್ಲದೆ ಮಾಡುತ್ತಿದೆ ..,   ಏನೇ ಆದರೂ 10   ವರುಷದಿಂದ ಇವತ್ತಿನವರೆಗೂ ನನ್ನ ಜೊತೇನೆ ಇತ್ತು , ನನ್ನ  ಜೊತೇನೆ ಇದೆ .,  ಮುಂದೇನೂ ಇ..ರ...ತ್ತೆ ...


       
                 ಇಷ್ಟರ ಮದ್ಯೆ  ಪ್ರೀತಿಯ ಸ್ಕೂಟಿ  ನನ್ನ ತಂಗಿ ನನ್ನ ತಮ್ಮನನ್ನು ಹೊತ್ತುಕೊಂಡು ತಿರುಗಾಡಿತ್ತು .  ಕಾಲೇಜು, ಎಗ್ಸಾಮ್,  ಎಂಗೇಜ್ಮೆಂಟ್ ,  ಮದುವೆ , ಆ ಮನೆ, ಈ ಮನೆ , ಬೆಂಗಳೂರು , ಆ ನಗರ , ಈ ನಗರ , ಮತ್ತೊಂದು  ಮನೆ ,  ಮಗಳು .. ಅವಳ ಸ್ಕೂಲ್ .. ಅಬ್ಬಬ್ಬ ..!!!  ಹತ್ತು ವರುಷದಲ್ಲಿ ಏನೆಲ್ಲಾ ...!! ಇನ್ನೆಷ್ಟು  ಘಟ್ಟ , ಘಟನೆಗಳಿಗೆ ಮೂಕ ಸಾಕ್ಷಿಯಾಗಿ ನಿಲ್ಲುತ್ತೋ ನನ್ನ ಪ್ರೀತಿಯ ಸ್ಕೂಟಿ ಗೊತ್ತಿಲ್ಲ ..!  ಲವ್ ಯು ಸ್ಕೂಟಿ ..!

 

Monday, December 3, 2012

ಬದುಕ ಮನ್ನಿಸು ಮನವೇ

   
ಬದುಕ ಮನ್ನಿಸು ಮನವೇ...

ಸಮಸ್ಯೆಯಾದರೆ  ಪರಿಹರಿಸಿಕೊಳ್ಳಬಹುದು , ದುಃಖವಾದರೆ ಇಂತಿಷ್ಟು ಕಾಲ ಅಂತಿರುತ್ತದೆ, ನಂತರ ಅದರ ತೀವ್ರತೆ ಕಡಿಮೆಯಾಗಿ ಮರೆತುಬಿಡಬಹುದು. ಬದುಕು ಎಂಬ ಇಡೀ ಪ್ಯಾಕೇಜ್ ನಲ್ಲಿ  'ಒಂದು ಸಮಸ್ಯೆಯ'  ಆಯುಷ್ಯ  ತುಂಬಾ ಚಿಕ್ಕದು. ಏನೇ ಆದರೂ ಬದುಕು ಹಾಗೆ ಸಾಗುತ್ತಿರುತ್ತದೆ. ಆದರೆ ಕೆಲವೇ ಕೆಲವು  ಸಂಗತಿಗಳು ಮಾತ್ರ  ಪ್ರತಿಕ್ಷಣದ ಬದುಕನ್ನೂ  ಸವಾಲಿಗೊಡ್ದುವಂತದ್ದು .

               
 ಹೇಳಲು ಹೊರಟಿರುವುದು ಬುದ್ದಿಮಾಂದ್ಯ ಅಂತ ಇರುತ್ತಾರಲ್ಲ ಅಂತ ಮಕ್ಕಳ ಬಗ್ಗೆ, ಅವರ ತಂದೆ ತಾಯಿಯರ ಬಗ್ಗೆ,  ಅಂತವರಿಗೆ ಜೀವನದ ಪ್ರತಿ ಕ್ಷಣವೂ ಹೊರಾಟ, ಪ್ರತಿ ಹೆಜ್ಜೆಯೂ ಸವಾಲು , ಪ್ರತಿ ನಗುವಿನ ಹಿಂದೊಂದು ನೋವಿನ ಸೆಲೆಯನ್ನು ಎದುರಿಗೆ ಬಾರದಂತೆ ತಡೆದು ನಿಲ್ಲಿಸಿಕೊಂಡಿರುತ್ತಾರೆ.  ಅದು ನಮ್ಮ ನಿಮ್ಮ ದುಃಖಗಳ  ಹಾಗೆ ಇವತ್ತಿದ್ದು ನಾಳೆ ಹೊರಟುಬಿಡುವಂತದ್ದಲ್ಲ , ಯಾರೋ ಸಾವಿನಲ್ಲಿ ಆಗಲಿದ ದುಃಖ ಕೂಡ ಒಂದು ಕಾಲದ ಮಿತಿಯಲ್ಲಷ್ಟೇ  ನಮ್ಮನ್ನು ನರಳಿಸಬಹುದು. ಇದು ಹಾಗೂ ಅಲ್ಲ.



ಮೊನ್ನೆ ಯಾವೊದೋ ಕಾರಣಕ್ಕಾಗಿ ಮಣಿಪಾಲ ಆಸ್ಪತ್ರೆಗೆ ಹೋಗಿದ್ದೆ,  ವಿಸಿಟರ್ಸ್ ಸೀಟ್ ನಲ್ಲಿ ಕುಳಿತ 5 ನಿಮಿಷಕ್ಕೆ ನನ್ನ ಎದುರಿಗೆ ಒಬ್ಬ ತಾಯಿ ಮಗಳು ಬಂದು ಕುಳಿತರು. ಮಗಳು ವಿಚಿತ್ರವಾಗಿ ಶಬ್ದ ಹೊರಳಿಸುತ್ತ  ಏನೋ  ಹೇಳಲು ಪ್ರಯತ್ನಿಸುತ್ತಿದ್ದಳು ಆಕೆಗೆ ತನ್ನ ನಾಲಿಗೆ  ತುಟಿ ಅಂಗಾಂಗಗಳ ಮೇಲೆ ಎಚ್ಚರವಿರಲಿಲ್ಲ, ಅವರಮ್ಮ ಆಕೆಯನ್ನು ಸಂಬಾಳಿಸುವುದರಲ್ಲಿ  ಸೋಲುತ್ತಿದ್ದರು.  ಅವರ ಮುಖದಲ್ಲಿದ್ದ ಆ ನೋವು, ಮುಜುಗರ, ಆಳವಾದ ಕಣ್ಣಲ್ಲಿದ್ದ ಅತಿಯಾದ ನೋವು...,  ನನಗೆ ಇಂಥ ದೃಶ್ಯಗಳನ್ನು ನೋಡಲು ಮನಸು ಸಹಕರಿಸದು.., ಗಂಟಲುಬ್ಬಿ ಕಣ್ಣು ತುಂಬಿ ಬಂತು. ಟಿಪಾಯಿ ಮೇಲಿದ್ದ ನ್ಯೂಸ್ ಪೇಪರ್ ಮುಖಕ್ಕೆ ಅಡ್ಡ ಹಿಡಿದೆ. ಸುಮ್ಮನೆ  ಯೋಚಿಸಿದೆ.. ನಮ್ಮ ಚಿಕ್ಕ ಪುಟ್ಟ ಸಮಸ್ಯೆಗಳ ಸುತ್ತವೇ ನಮ್ಮ ಮನಸು ಸುತ್ತುತ್ತಿದ್ದರೆ...., ಅವರ ಮನಸು ಹೇಗಿರಬಹುದು..!  ಸೀರೆ, ಮನೆ ಅದು, ಇದು   ಅಂತ ಯೋಚಿಸುತ್ತಿದ್ದರೆ ಆಕೆಯ ಪ್ರಿಯರಿಟಿ ಏನಿರಬಹುದು ??  ನಮ್ಮ ಮಗ, ಮಗಳು  A ಗ್ರೇಡ್ ಬಂದಿಲ್ಲವಲ್ಲ ಅಂತ ಚಿಂತಿಸುತ್ತಿದ್ದರೆ ಆಕೆ ಏನು ಚಿಂತಿಸುತ್ತಿರಬಹುದು ? ಮತ್ತೂ ಎಂದರೆ ಇಂತ ವಿಷಯಗಳಲ್ಲಿ ತಾಯಿಯನ್ನು ಕಾಡುವ ಮತ್ತೊದು ಯೋಚನೆ... ಮಗು ಹೆಣ್ನಾಗಿದ್ದರೆ ಪ್ರಕೃತಿ ಕೊಡಮಾಡುವ ಅನೇಕ  ಘಟ್ಟಗಳು..!  'ನಾನು ಇರುವ ತನಕ ನೋಡಿಕೊಳ್ಳಬಲ್ಲೆ ಮುಂದೇನು?' ಎನ್ನುವ ವಿಚಾರವೊಂದು ಆಕೆಯ ಸುತ್ತ ಗಿರಾಕಿ ಹೊಡೆಯುತ್ತಿರುತ್ತದೆ.  ಮನಸ್ಸು ಭಾರವಾಗಿತ್ತು. ನಾವು ಯಾವು ಯಾವುದೋ ವಿಷಯಗಳಿಗೆ ದುಃಖಿಸುತ್ತೆವಲ್ಲ ಅಂತ ಆ ಕ್ಷಣಕ್ಕೆ  ಅನಿಸಿಬಿಟ್ಟಿತು ನನಗೆ.

ಮನೆಗೆ ಬಂದವಳೇ ಗೂಗಲ್ ಒಳಗೆ ಹೋಗಿ ಕುಳಿತುಕೊಂಡೆ ..,  ಈ ತರದ ಮಕ್ಕಳ ಬಗ್ಗೆ ಸಾಕಷ್ಟು ಓದಿದೆ, ಓದುತ್ತಿದ್ದ ಹಾಗೆ ಸ್ವಲ್ಪ ಸಮದಾನವಾದ ಹಾಗಾಯಿತು , ಕೆಲವನ್ನು ಬದಲಾಯಿಸಲು ಸಾಧ್ಯವಿಲ್ಲವಲ್ಲ...?  ಅದರ ಜೊತೆಗೆ ಬದುಕನ್ನು ಅಭ್ಯಸಿಸಿಕೊಳ್ಳಬೇಕು, ಸುಂದರವಾದ ಬದುಕನ್ನು ರೂಪಿಸಿಕೊಳ್ಳಬೇಕು. ಅರುಣಶೌರಿಯವರು ನಿಮಗೆ ಗೊತ್ತಿರಬಹುದು,  ಅವರಿಗೆ ಒಬ್ಬ ಮಗನಿದ್ದಾನೆ.., ಅವನ ಬಗ್ಗೆ ಶೌರಿಯಯವರು ಏನೆನ್ನುತ್ತಾರೆ ಗೊತ್ತಾ..? " ನನಗೆ ನನ್ನ ಮಗ ಕೊಡುವ ಕಾನ್ಫಿಡೆನ್ಸ್ ತುಂಬಾ ದೊಡ್ಡದು, ಏಕೆಂದರೆ ಅವನು ನಾನು  ಎದ್ದಾಗಲೂ  ಬಿದ್ದಾಗಲೂ ನನ್ನನ್ನು ಒಂದೇ ತರಾ ನೋಡುತ್ತಾನೆ ",  ಎನ್ನುತ್ತಾರೆ , ವಿಷಯ ಅಂದರೆ..  ಅವರ ಮಗ   ಮೆಂಟಲಿ ಚಾಲೆಂಜ್ಡ್ ! . ಇನ್ನೊಬ್ಬ ತಂದೆಗೆ 2 ಗಂಡುಮಕ್ಕಳು.., ಒಬ್ಬ ಬುದ್ದಿಮಾಂದ್ಯ , ಇನ್ನೊಬ್ಬ ಅತಿ ಬುದ್ದಿವಂತ , ಅವನೇನು ಅನ್ನುತ್ತಾನೆ ಅಂದರೆ, " ನಂಗೆ  ಇಬ್ಬರೂ ಮಕ್ಕಳು ಸಮಾನರು ಇವನು ಚಿನ್ನದ ಪದಕ ತಂದಾಗ ಆಗುವಷ್ಟೇ ಸಂತೋಷ ಆತ  ತನ್ನ ಶೂ ಲ್ಯೇಸ್ ನ್ನು ತಾನೇ ಕಟ್ಟಿಕೊಂಡಾಗ ಅನುಬವಿಸುತ್ತೇನೆ" ಎನ್ನುತ್ತಾನೆ. ಇಂತಹ ಅನೇಕ ಉದಾಹರಣೆ ಓದಿದಾಗ ಮನಸು ಸ್ವಲ್ಪ ತಹಬದಿಗೆ ಬಂದಿತ್ತು.


ಮೊದಲು  ಸಮಾಜ ಅಂತವರನ್ನು ಯಾವುದೇ ಕಾರಣಕ್ಕೂ ಕರುಣೆಯ ದೃಷ್ಟಿಯಿಂದ ನೋಡಬಾರದು, ಸಹಜತೆ ಇರಬೇಕು ನಡೆ ನುಡಿ  ನೋಟದಲ್ಲಿ , ಇನ್ನೂ ಎಂದರೆ ಪರೀಕ್ಷೆಯಲ್ಲಿ ನಮಗಿಂತ ಜಾಸ್ತಿ ಅಂಕ ತೆಗೆದುಕೊಂಡವರೆಡೆಗೊಂದು  ನಮಗೆ ಗೌರವ ಇರುತ್ತಲ್ಲ ಅಂತದೊಂದು ಗೌರವವಿರಬೇಕು ಅವರ ಪಾಲಕರೆಡೆಗೆ , ಏಕೆಂದರೆ ಬದುಕನ್ನು ಅವರು ನಮಗಿಂತ ತೀವ್ರವಾಗಿ, ಆಳವಾಗಿ ಅನುಭವಿಸುವವರು.  ನಾನೂ ಅಂತವರಿಗೆ ಮುಂದೊಂದು ದಿನ ಏನಾದರೂ ಮಾಡಬೇಕು ಅನಿಸಿದ್ದಂತೂ ನಿಜ.

ಕಡೇ ಪಕ್ಷ.....

  ಸಮಸ್ಯೆಗಳು, ನೋವು,  ದುಃಖ  ಇವುಗಳಿಂದ ಹೊರತಾಗಿರಲಂತೂ ಸಾದ್ಯವಿಲ್ಲದೆ ಇರಬಹುದು....,  ಅಟ್ಲೀಸ್ಟ್ ದುಃಖ  ಪಡುವಷ್ಟು ಆ ದುಃಖ  'ವರ್ತ್' ಆಗಿರಲಿ...,  ಪಟ್ಟ ಪ್ರತಿ ದುಃಖವೂ ಅನುಭವವಾಗಿ ಮನಸ್ಸು ಇನ್ನೂ ಪಕ್ವವಾಗಲಿ...,   ಆಗದ, ಹೋಗದ,  ಇಲ್ಲದ, ಸಲ್ಲದ, ಬೇಡದ  ವಿಷಯಗಳಿಗೆ ಕೊರಗುವುದನ್ನು ದುಃಖಿಸುವುದನ್ನು ನಮ್ಮ  ಮನಸು ಮೊದಲು ನಿಲ್ಲಿಸಲಿ. ದುಃಖ ನೋವುಗಳಲ್ಲಿಯೂ ನಮ್ಮ ಮನಸ್ಸು  ಚೂಸಿಯಾಗಿರಲಿ. ಸದ್ಯಕ್ಕೆ ಇಷ್ಟಾದರೂ ಮಾಡೋಣ ಅನ್ನಿಸಿತು.

ಕೊನೆಯಲ್ಲಿ,

ಭಗವಧ್ಗೀತೆಯಲ್ಲಿ ಹೇಳಿದ ಹಾಗೆ , ' ಬದಲಾಯಿಸಬಲ್ಲದ್ದನ್ನು ಬದಲಾಯಿಸವ ಶಕ್ತಿ ಇರಲಿ, ಬದಲಾಯಿಸಲು ಸಾದ್ಯವಿಲ್ಲದ್ದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿರಲಿ '  ಅಲ್ಲವೇ ...

        
               





               


     
                     .