Monday, October 29, 2012

ತಪ್ತ ವಿರಹಿಣೀ .....





                                                           
 
 
 
ಕೆನ್ನೆಯ ಮೆಲಿದ್ದ ಕೂದಲು ಸರಿಸಿ
ತಲೆ ನೇವರಿಸಿ
ಮುತ್ತಿನ ಶುಭೋದಯ ತರುತ್ತಿದ್ದ
ಆತನೆಲ್ಲಿ ......?
ಕೃಷ್ಣನಿಗೋ  ಮುಗಿಯದ ರಾಜಕಾರಣ;


ಮುತ್ತಿಗೊಂದು ತುತ್ತಿಡುತ್ತ
ತುತ್ತಿಗೊಂದು ಮುತ್ತಿಡುತ್ತ
ಬರಿದಾಗಿಸುತ್ತಿದ್ದ ತಟ್ಟೆಗೂ ನೆನಪಿದೆ
ಆತನೆಲ್ಲಿ ........?
ಕೃಷ್ಣನಿಗೋ ಸದಾ ಗೋಪಿಕೆಯರ ಜೊತೆ;


ಆಸೆಗಳ ಭಾರಕ್ಕೆ ಮುಚ್ಚಿದ  ರೆಪ್ಪೆಗಳಿಗೆ
ಬಾಗಿ ಚುಂಬಿಸಿ
ಲೋಕವನ್ನೇ ಮರೆಸುತ್ತಿದ್ದ
ಆತನೆಲ್ಲಿ .........?
ಕೃಷ್ಣನಿಗೋ  ಯುದ್ದ ಸಂಬ್ರಮ;


ಪ್ರಳಯವೇ ಸಂಭವಿಸಿದರೂ
  ಸುರಕ್ಷಿತವೆನಿಸುವಂತೆ
ಬಿಗ್ಗಿಬಿಗಿ ಬಾಹುಗಳಲ್ಲಿ  ಬಂಧಿಸುತ್ತಿದ್ದ
ಆತನೆಲ್ಲಿ ........?
ಕೃಷ್ಣನಿಗೋ ಅಪಹರಣಕಾಯದಲ್ಲಿ ತನ್ಮಯ;


ಸ್ವಲ್ಪವೂ ಸುಕ್ಕಾಗದ ಚಾದರ
ನೀರಸ ಬೇಸರದ  
ಕಾಯುವಿಕೆಯ ಕತೆ ಹೇಳುವಾಗ
ಆತನೆಲ್ಲಿ ......?
ಕೃಷ್ಣನಿಗೋ  16 ಸಾವಿರ ಹೆಂಡತಿಯರು ;


ರಾಧೆಗೋ  ಕೃಷ್ಣನೇ  ಆಕೆಯ ಪ್ರಪಂಚ
ಕೃಷ್ಣನಿಗೆ ಆಕೆಯು ಪ್ರಪಂಚದ ಒಂದು ಭಾಗ;


ರಾಧೆಯಂತಿರುವ  ಹೆಣ್ಣುಗಳು 
 ಮೆಚ್ಚೋ... ಹುಚ್ಚೋ ...
ಗೊತ್ತಿಲ್ಲ  ನಮಗೆ
ಗೊತ್ತಿರುವ ಕೃಷ್ಣ  ನಗುತ್ತಿದ್ದಾನೆ ಕಣ್ಣಲ್ಲೇ .


 

Thursday, October 25, 2012

ಬರಿದೆ ಕಾಡುವ ನೆನಪುಗಳಲ್ಲಿ ಏನೂ ಇಲ್ಲ .....!


      
         ಬೇಡವೆಂದರೂ ಬರುವ ನೆನಪುಗಳು ಸುಮ್ಮನಿರಲು ಏನು ಮಾಡಬೇಕು ...?  ಹಾಗಲ್ಲ... ಪ್ರಯತ್ನ ಮಾಡಿದಷ್ಟೂ ಹೆಚ್ಚು ಕಾಡುವ  ನೆನಪುಗಳು  ಥೇಟ್  ರಚ್ಚೆ ಹಿಡಿದ ಮಗುವಿನಂತೆ  ; ಮಾತು ಕೇಳಲು ಸುತರಾಂ ಒಪ್ಪದು !  ಬರಿದೆ  ಕಾಡುವ ನೆನಪುಗಳಲ್ಲಿ  ಏನೂ ಇಲ್ಲ !  ಇವತ್ತಿಗೂ ಗೊತ್ತಾಗುತ್ತಿಲ್ಲ ನಾನು ಮಾಡಿದ್ದು ಸರಿಯ ? ತಪ್ಪಾ ?  ಮರಳು ನನಗೆ!  ತಪ್ಪು ಸರಿಗಳ ಎಲ್ಲೆ  ದಾಟಿ ಬಹಳ ದೂರ  ಬಂದದ್ದಾಗಿದೆ ! ಈಗೇನು ಹುಚ್ಚು ವಿಮರ್ಶೆ ನನ್ನದು !  ಅಪ್ಪ, ಅಮ್ಮ  ಅಣ್ಣ , ಅಜ್ಜಿ , ಮನೆ ಊರು  ಸರ್ವಸ್ವವನ್ನು   ಬಿಟ್ಟು ಬರಲು ನನಗೆ ಪ್ರೇರೇಪಿಸಿದ  ಅಷ್ಟು ದೊಡ್ಡ ಸಂಗತಿಯಾದರೂ ಯಾವುದು ?  ಸೊ ಕಾಲ್ಡ್  ಪ್ರೀತಿ ??


             ಕಾಲೇಜು ಮೆಟ್ಟಿಲು ಹತ್ತಿದ್ದೇ  ಒಂದು ದಿಗ್ವಿಜಯ ನನ್ನ ಪಾಲಿಗೆ !  ಭಟ್ರ ಮಗಳು ಬೇರೆ!  ಅಷ್ಟು ಸಲೀಸಾಗಿ ಕಾಲೆಜಿಗೆ ಹೋಗೋದು ಅಂದ್ರೆ ಏನು ?  ಓದೋದು ಅಂದ್ರೆ ಏನು ? ಓದಿ ಮಾಡಬೆಕಾದ್ದು ಏನು ?  ಅದು ಹೇಗೋ ಅಣ್ಣನ ಕಣ್ಣು ಕಾವಲಿನ ಜೊತೆಗೆ ಕಾಲೇಜಿಗೆ ಹೋಗಿಬಂದದ್ದೂ ಆಯಿತು ! ಅವನ ಕಣ್ತಪ್ಪಿಸಿ  ಲೆಕ್ಟುರನ ಪ್ರೀತಿಯಲ್ಲಿ  ಬಿದ್ದಿದ್ದೂ   ಆಯಿತು !   ಎಷ್ಟು ದಿನ ಕಣ್ತಪ್ಪಿಸಲು ಸಾದ್ಯ ? ಮನೆಯವರಿಗೆ ವಿಷಯ ಗೊತ್ತಾಗಿಬಿಟ್ಟಿತ್ತು !  ಚಿಕ್ಕವಳಿದ್ದಾಗಿನಿಂದ  ರಾಮಾಯಣ ಮಹಾಭಾರತದ ಕತೆಯನ್ನು ಕೇಳಿದ್ದರೂ ಅದರ ಅನುಭವ ಆದದ್ದೂ ಮಾತ್ರ ಅವತ್ತೇ !!  ಅಪ್ಪ, ಅಣ್ಣನ ರುದ್ರವತಾರ! , ಅಮ್ಮನ ಕಣ್ನೀರಿನ  ಕಟ್ಟೆಯೊಡೆದು  ಊರಿಗೆಲ್ಲ ಸಾಕಾಗುವಷ್ಟು  ನೀರು ! ಅವತ್ತು ನಮ್ಮ ಮನೆ ಥೇಟ್  ಯುದ್ದಭೂಮಿ !

   
               
           ಹೆದರಿಸಿ ಹೇಳಿದ್ದಾಯಿತು , ಹೊಡೆದು ಬಡಿದಿದ್ದೂ ಆಯಿತು , ನೆಂಟರಿಷ್ಟರಿಂದ  ಒಂದು ರೌಂಡ್  ಕೌನ್ಸಲಿಂಗೂ   ಆಯಿತು , ಉಪವಾಸ ಸತ್ಯಾಗ್ರಹ .., ಉಹ್ಹುಂ .., ನನ್ನದು ಒಂದೇ ಹಠ , ನಾನು ಅವನನ್ನೇ ಮದುವೆಯಾಗೋದು ! "ಆಯಿತಮ್ಮ ನಿನ್ನಿಷ್ಟ "  ಅಂದು ಮದುವೆ  ನಡೆಸಿಕೊಡಲು ಅದೇನು ಈಗಿನ ಕಾಲವೇ! ?  ಎಳೆದು ತಂದಾದರೂ ಮದುವೆಯನ್ನು  ಮಾಡಿಬಿಡುತ್ತಿದ್ದ ಕಾಲವದು !  ಗಂಟುಮೂಟೆ ಕಟ್ಟಿಕೊಂಡು  ರಾತ್ರಿ 1 ಗಂಟೆಯ ಸುಮಾರಿಗೆ ಥೆಟ್  ಸಿನಿಮ ಶೈಲಿಯಲ್ಲಿ  ಮನೆ ಬಿಟ್ಟು ಹೊರಟುಬಿಟ್ಟೆ !  ಹಾಗೆ ಬಂದವಳು ಇವತ್ತಿಗೂ ಹಿಂದಿರುಗಿಲ್ಲ !  ಬಂದ ಒಂದೆರಡು ವರುಷಗಳ ನಂತರ ಅಪ್ಪ ಅಮ್ಮನ ನೆನಪಾಗುತ್ತಿತ್ತು .. 8- 10 ವರುಷಗಳ ನಂತರ ಅವರ  ಮರಣದ  ಸುದ್ದಿ ಕೇಳಿ .., ಬೇಸರವಾದರೂ ಊರಿನ ನೆನಪು  ಮಸುಕಾಗಿ ಕ್ರಮೇಣ ಸೆಳೆತ ಕಡಿಮೆಯಾಗಿತ್ತು .

            
               ಎಲ್ಲ ಬಿಟ್ಟು ಕಟ್ಟಿಕೊಂಡು  ಬಂದ ಈತನಾದರೂ ಎಂತವನು ? ಸಭ್ಯ , ಒಳ್ಳೆಯವ , ಸಾಮನ್ಯ ಬುದ್ದಿವಂತಿಕೆ , ಸಾಮಾನ್ಯ  ವಿದ್ಯೆ , ಸಾಮನ್ಯ ವ್ಯಕ್ತಿತ್ವ , ಎಲ್ಲದರಲ್ಲೂ 40 -50 ಮಾರ್ಕ್ಸು ಕೊಡಬಹುದಾದ  ಸಾಮನ್ಯ ಪ್ಯಾಕೆಜಿನಂತಿದ್ದ .
ಸಾಮಾನ್ಯ ಬದುಕು ಸಾಗುತ್ತಿತ್ತು . 'ಚಂದ್ರನನ್ನು ತೋರಿಸು ' ಅಂದರೆ ರೋಮ್ಯಾಂಟಿಕ್  ಆಗಿ ಉತ್ತರಿಸಲು ಬರದಿದ್ದರೂ ' ನಿಂಗೆ ಕಣ್ಣೂ ಕಾಣೋಲ್ಲವ?' ಎನ್ನುವಷ್ಟು ಒರಟನಾಗಿರಲಿಲ್ಲ !    ಅದು ನಾನು ಕಟ್ಟಿಕೊಂಡು ಬಂದ ಪುಣ್ಯ ಎನಿಸುತ್ತದೆ ನಂಗೆ !  ನಂಗೆ ಆತನ ಬಗ್ಗೆ  ಒಂದಷ್ಟೂ ಗೊತ್ತಿರಲ್ಲಿಲ್ಲ !  ಕುಡುಕ ಪಡುಕನೂ , ಕಳ್ಳನೂ, ಸುಳ್ಳನೂ , ಅಷ್ಟೇ ಏಕೆ ಆತನಿಗೆ ಇನ್ನೊಂದು ಮದುವೆಯೇ ಆಗಿದ್ದರೂ ನನಗೆ ತಿಳಿಯುವ ಸಂದರ್ಭ, ಬುದ್ದಿ ಎರಡೂ ಇರಲಿಲ್ಲ ..! ಏನೋ ಪ್ರೀತಿ  ಅಂಥದ್ದೇನೋ  ಅನಿಸಿತ್ತು  , ತುಂಬಾ ಯೋಚಿಸದೆ ಆತನ ಹಿಂದೆ ನಡೆದುಬಂದು ಬಿಟ್ಟಿದ್ದೆ !!


             
           ಆತನ ಬಗ್ಗೆ ಒಂದಷ್ಟೂ ಗೊತ್ತಿರಲ್ಲಿಲ್ಲ ಎನ್ನುವುದು ನಿಜ ., ಏನೂ ಯೋಚಿಸದೆ ಬಂದುಬಿಟ್ಟಿದ್ದು ಎಷ್ಟು ನಿಜ ?  ಸಾಕಾಗಿತ್ತು ನಂಗೆ ಆ ಊರು !  ಆ ಬದುಕು ! ಜಾತ್ರೆಯಲ್ಲಿ ಕಂಡ ಬಣ್ಣದ ಲಂಗವನ್ನು ತೆಗೆದುಕೊಳ್ಳಲಾಗದಷ್ಟು ಕಟ್ಟಳೆ,   ಸ್ವತಂತ್ರವಾಗಿ ಓಡಾಡಲಾಗದಷ್ಟು  ಅಣ್ಣನ ಕಾವಲು , ತಂದದ್ದನ್ನೇ ಉಟ್ಟು ತೊಟ್ಟುಕೊಳ್ಳಬೇಕಾಗಿದ್ದ  ಅಭಿರುಚಿಹೀನ  ಬದುಕು . ಎಲ್ಲದಕ್ಕಿಂತ ಹೆಚ್ಚಾಗಿ  ನಾನು ನೋಡಿದ  ನನ್ನ ಅಕ್ಕನ ಬದುಕು .., ಬೆಳೆಗ್ಗೆಯಿಂದ ಸಂಜೆಯ ತನಕ ಸ್ವಲ್ಪವೂ ಬಿಡುವಿಲ್ಲದ ಕತ್ತೆಯ ದುಡಿತ !  ಅವರಿವರ ಮರ್ಜಿಯಲ್ಲೇ ಕಳೆದು ಬಿಟ್ಟ ಜೀವನ ! ಅಂಜಿ ಅಂಜಿ ಆಡುತ್ತಿದ್ದ ಮಾತು , ನಡೆ ! ಎರಡು  ಸುಂಬಳ ಸುರಿಯುವ ಮಕ್ಕಳು , ಅವಕ್ಕೇ ಕೈಗಿದ್ದರೆ ಕಾಲಿಗಿಲ್ಲ ,ಕಾಲಿಗಿದ್ದರೆ ಕೈಗಿಲ್ಲ ! ಮತ್ತೆ  ಮೂರನೆಯದಕ್ಕೆ ತಯಾರಿ !   ನಂಗೂ ಇದಕ್ಕಿಂತ ಹೆಚ್ಚಿನದು ಇನ್ನೇನೂ ಸಿಗಲು ಸಾದ್ಯ ಇರಲಿಲ್ಲ ! 

         
             
             ಮತ್ತೆ ಕಣ್ಣು ಟೀಪಾಯೀಯತ್ತ  ಹೊರಳಿತು ,   ಅಲ್ಲಿದ್ದಿದ್ದು ಅಕ್ಕನ ಮಗಳ ಮದುವೆಯ ಇನ್ವಿಟೇಶನ್ ಕಾರ್ಡ್  . ಲವ್ ಮ್ಯಾರೇಜು !  ಹುಡುಗ ಬೇರೆ  ಜಾತಿಯವನು ,  ಇಬ್ರೂ ಸಾಫ್ಟ್ವೇರ್  ಎನ್ಜನೀರ್ಸ್. ಏನೂ ಗೊತ್ತಿಲ್ಲದೇ ಆಕೆ ಆತನೊಂದಿಗೆ ಬದುಕಿನ ಹೆಜ್ಜೆ ಇಡುವವಳಲ್ಲ;  ಆತ ಸಾಮಾನ್ಯ ಪ್ಯಾಕೆಜೂ ಅಲ್ಲ ... ;  ಮತ್ತು  ಮದುವೆಯನ್ನು  ಮನೆಯಲ್ಲೇ ಮಾಡಿಕೊಡುತ್ತಿದ್ದಾರೆ  ಅದ್ದೂರಿಯಿಂದ!




ಚೈತ್ರ  ಬಿ . ಜಿ . 

          

 

       




            



     
           


Tuesday, October 16, 2012

ವಿಶ್ ಯು ಹ್ಯಾಪಿ ಬರ್ತ್ ಡೇ ...




            ಇನ್ನೊಬ್ಬ ವ್ಯಕ್ತಿಗೆ  ದೈಹಿಕ ನೋವಾದಾಗ  ನಮಗೂ ಅದರ ಅನುಭವವಾಗುತ್ತದ?   ಹಾಗಂತ ಮುಂಚೆ ಯಾರಾದರೂ ಅಂದಿದ್ದರೆ  ನಕ್ಕು ಬಿಡುತ್ತಿದ್ದೆ ..,  ಆದರೆ  ನನ್ನ  ಮಗಳಿಗೆ BCG ಎಂಬ ಮೊದಲ ಚುಚ್ಚು ಮದ್ದು  ಕೊಡುವ  ಕ್ಷಣದಲ್ಲಿ  ನಾನು ಅನುಭವಿಸಿದ  ಯಾತನೆ ನನಗೆ ಮಾತ್ರ  ಗೊತ್ತು ..., ನಂತರ  ದಿನಗಳಲ್ಲಿ  ಪ್ರತಿ ಚ್ಚುಮದ್ದಿನ   ಹಿಂದಿನ  ದಿನದಿಂದಲೇ .ಯಾತನೆಯ ಕ್ಷಣಕ್ಕೆ ಮನಸ್ಸು ಚಿಂತೆಗೀಡಾಗುತ್ತಿತ್ತು .
 







      ಆಕಾಶ ಬೀಳುತ್ತಿದೆ ಎಂದರೂ ..,' ಬೀಳುವತನಕ  ಮಲಗಬಹುದಲ್ಲ ' ಅಂತ ಯೋಚಿಸುವ ಜಾಯಮಾನ  ನನ್ನದು !  ಹಾಗಿರುವಾಗ  ನನಗೆ ನನ್ನ ಮಗಳ  ಕೇವಲ ಒಂದೇ ಒಂದು ಮುಲುಗಾಟಕ್ಕೆ ತಟ್ಟನೆ ಎಚ್ಚರವಾಗಿ ಬಿಡುತ್ತಿದ್ದಿದ್ದು  ಹೇಗೆಂದು  ಇವತ್ತಿಗೂ ವಿಸ್ಮಯವೇ !


                                                            
                                                      


           ಇವತ್ತಿಗೂ   ಸಾಂಬಾರು ಪುಡಿಯನ್ನು ಅಮ್ಮನಿದಲೋ ಅತ್ತೆಯಿಂದಲೋ ತರಿಸಿಕೊಳ್ಳುವ ನಾನು, ಮಗಳಿಗಾಗಿ  "ರಾಗಿ ಮಣ್ಣಿ " ಎಂಬ ಅತಿ  ಕಷ್ಟದ (ನನಗೆ !) ತಿನಿಸನ್ನು ಮಾತ್ರ ' ಭಯಂಕರ ಶ್ರದ್ದೆ , ಇನ್ನಿಲ್ಲದ ಮುತುವರ್ಜಿಯಿಂದ ನಾನೇ ತಯಾರಿಸುತ್ತಿದ್ದೆ .




   
               ನಾನು ನನ್ನ  ಪುಟ್ಟ ಮಗಳನ್ನು ಬೆಂಗಳೂರೆಂಬ ಅಪರಿಚಿತ ನಗರಕ್ಕೆ ಎತ್ತಿಕೊಂಡು ಬಂದಿಳಿದಾಗ ಆಕೆಗೆ ಕೇವಲ 3 ತಿಂಗಳು 8 ದಿನ !  ನಮ್ಮಿಬ್ಬರದೆ  ಒಂದು ಪ್ರಪಂಚವಾಗಿಬಿಟ್ಟಿತ್ತು . ' ನನ್ನ ಮಗಳು ನನ್ನನ್ನು ಬಿಟ್ಟು ಇರಲಾರಳು' ನಿಜ ,   ನಾನು ಆಕೆಯನ್ನು  ಒಂದು ದಿನಕ್ಕೂ ಬಿಟ್ಟಿರಲಾಗದು ಎಂಬುದು ಅದಕ್ಕಿಂತ ಹೆಚ್ಚು ನಿಜ .
         


                                                                 
                    ಇಂಥ ಸಂಗತಿಗಳು   ಹತ್ತು ಹಲಾವರು ..

            ಬಹುಷ  ಇದು ಎಲ್ಲ   ತಾಯಂದಿರ  ಅನುಭವ .., ಪ್ರಕೃತಿಗಿರುವ  ಶಕ್ತಿಯೇ ಅಂತದ್ದು .., ಸಮಯ ಬಂದಾಗ  ತನ್ನನ್ನು ತಾನು ಹೊಂದಿಸಿಕೊಳ್ಳುವುದು ...
             
                                                          


            ಇವತ್ತು ನನ್ನ ಮಗಳ 5ನೆಯ ವರುಷದ ಹುಟ್ಟುಹಬ್ಬ ... ಅಲ್ಲ .. ನನ್ನಲ್ಲಿರುವ ಅಮ್ಮನಿಗೆ ಇವತ್ತಿಗೆ 5 ವರುಷ .....,  ತಾಯಿತನದ ಸಂತೋಷವನ್ನು ಇಷ್ಟೊಂದು ಎಂಜಾಯ್ ಮಾಡಲು  ಅವಕಾಶ ಮಾಡಿಕೊಟ್ಟ ನನ್ನ ಮಗಳಿಗೊಂದು  ದೊಡ್ಡ ಥ್ಯಾಂಕ್ಸ್ ..

    ಹುಟ್ಟುಹಬ್ಬದ ಶುಭಾಶಯಗಳು ನನ್ನ ಮಗಳಿಗೆ !!


     

Thursday, October 11, 2012

ನೀನು ನಕ್ಕ ನಗುವನ್ನು ಹೆಕ್ಕಿ ಜೇಬಲ್ಲಿರಿಸಿಕೊಂಡಿದ್ದೇನೆ ......


                  ಕಾಲೇಜಿನ ಕಾರಿಡಾರಿನ ಕಂಬಕ್ಕೊರಗಿ  ಒಂದು ಕಾಲನ್ನು  ಕಂಬಕ್ಕಾನಿಸಿ ಎದೆಯ ಮೇಲೆ ಕೈ ಕಟ್ಟಿ  ನಿಂತ ನನಗೆ  ನೀನು ಆ ತುದಿಯಿಂದ ಬರುವುದನ್ನು ನೋಡುತ್ತಿದ್ದರೆ ಕಾಲವು ಹಾಗೆ ನಿಂತು ಹೋಗಬಾರದೇ  ಎನಿಸುತ್ತಿದ್ದುದು  ಸುಳ್ಳಲ್ಲ ..,   ಕೆನ್ನೆ ಮೇಲೆ ಆಟವಾಡುತ್ತಿದ್ದ   ಕೂದಲು .., ಕಿವಿಯಲ್ಲಿ ತೂಗುತ್ತಿದ್ದ ಚಿನ್ನದ ರಿಂಗು ನಿನ್ನ ಮಾತಿಗೆ ತಾಳ ಹಾಕುತ್ತಿದ್ದ  ಪರಿ .., ಮಾತಿಗೊಮ್ಮೆ ವಿಸ್ಮಯದಿಂದ ಅಗಲವಾಗುತ್ತಿದ್ದ ಕಡು ಕಪ್ಪು ಕಣ್ಗಳು ...ಮತ್ತು ಅದರೊಳಗೆ   ಜಾರಿ ಬಿದ್ದ ನಾನು  .., ಗಾಳಿಗೆ ಕೊಂಚವೇ ಹಾರುತ್ತಿದ್ದ ನಿನ್ನ ಚೂಡಿದಾರದ  ವೇಲು ..., ಒಮ್ಮೊಮ್ಮೆ ನೀನು ಮುಡುಯುತ್ತಿದ್ದ ಮಲ್ಲಿಗೆ ...ಅದರ ಗಂಧ ನನ್ನಲ್ಲಿ ತರುತ್ತಿದ್ದ ಸಣ್ಣನೆಯ ಕಂಪನ   ... , ಅತಿ ಮೆಲ್ಲಗೆ ಕೇಳಿಸುತ್ತಿದ್ದ ಗೆಜ್ಜೆಯ ಸದ್ದಿಗೆ  ತಪ್ಪುತ್ತಿದ್ದ  ನನ್ನ ಹೃದಯ ಬಡಿತ...,  ಎಲ್ಲಕಿಂತ ಮಿಗಿಲಾಗಿ  ನಿನ್ನ ನಗು.... , ನೀನು ನಕ್ಕ ನಗುವನ್ನು ಹೆಕ್ಕಿ ನನ್ನ ಜೇಬಲ್ಲಿರಿಕೊಂಡಿದ್ದೇನೆ , ನಿನ್ನ ನಗೆಯ ತಂಪು ನನ್ನ ಎದೆಯ ತುಂಬೆಲ್ಲ .....,  ನಿನ್ನಿಂದ ದೃಷ್ಟಿ ಬದಲಾಯಿಸಲು ನನ್ನ ಕಣ್ಣುಗಳು  ನನಗೇ  ಸಹಕರಿಸುತ್ತಿರಲ್ಲಿಲ್ಲ .., ಇದ್ಯಾವುದರ ಅರಿವೂ ನಿನಗಿರಲಿಲ್ಲ  .., ಅಥವ ಇದ್ದಂತೆ ತೋರಿಸಿಕೊಕೊಳ್ಳುತ್ತಿರಲ್ಲಿಲ್ಲ ..., ನೀವು ಹುಡುಗಿಯರು ಸ್ವಲ್ಪ ಹಾಗೆ ತಾನೇ ...!?

    
         
               ಗೆಳೆಯರು ಕೇಳುತ್ತಿದ್ದರು ' ಏನೋ ಲವ್ವಾ ..?'  ತಲೆಬಗ್ಗಿಸಿ  ಮೆಲುನಗುತ್ತಿದ್ದೆ , ನನಗೆ ಗೊತ್ತಿದ್ದರೆ ತಾನೇ ಹೇಳಲು ..!  ಮಾತಡಸಲ್ವೇನೋ ...?'  ಅನ್ನುತ್ತಿದ್ದರು , ಅದಕ್ಕೂ  ನನ್ನ ನಗುವೇ ಉತ್ತರ .., ಕಾಲೇಜಿನ 3 ವರ್ಷದಲ್ಲಿ ಒಂದು ದಿನಕ್ಕೂ ನಾನು ನಿನ್ನ ಮಾತಾಡಿಸುವ  ಪ್ರಯತ್ನವನ್ನೇ  ಮಾಡಲ್ಲಿಲ್ಲ .., ಎಷ್ಟೋ ಸಲ ನಿಶ್ಯಬ್ದ ರಾತ್ರಿಯ ಒಂಟಿತನದಲ್ಲಿ ಯೋಚಿಸುತ್ತಿದ್ದೆ .., ಬಹುಷ.. ನನಗೆ ಪ್ರ್ರೀತಿ, ಗೀತಿ ಮದುವೆಯೆಂಬ  ಗಂಭೀರತೆಯ ಸುಳಿಯಲ್ಲಿ ಸಿಕ್ಕಲು ಮನಸು ಭಯವಿಡುತ್ತಿತ್ತು ,  ಮನೆಯ ಮೇಲಿದ್ದ ಸಾಲ .. ಅಪ್ಪನ ಬೇಜಾವಬ್ದಾರಿತನ .., ಅಮ್ಮನ ಖಾಯಿಲೆ ..,ಅಕ್ಕನ ಮದುವೆ  ಜವಾಬ್ದಾರಿ ..., ನನ್ನ ಮುಂದಿನ ಓದು.... ನಡೆಯಬೇಕಾದ ದಾರಿ ದೂರವೂ , ಕಷ್ಟವೂ  ಅಸ್ಪಷ್ಟವೂ ಇದ್ದಂತನಿಸಿತು . ಊಹುಂ ... ನಿನ್ನನ್ನು,  ನಿನ್ನ ನಗುವನ್ನು ನನ್ನ ಪರಧಿಯೊಳಕ್ಕೆ ಸೇರಿಸಿಕೊಳ್ಳಲು ಮನಸ್ಸು ಯಾಕೋ ನಿರಾಕರಿಸುತ್ತಿತ್ತು ..., ಮನಸು, ಕಾಲ ಎರಡೂ ಪಕ್ವವಾಗಿಲ್ಲ ಎನಿಸಿತ್ತು . ಅದಕ್ಕೆ ಇರುವಷ್ಟು ಕ್ಷಣ ನಿನ್ನ  ನಗುವಿನ ಪರಧಿಯೊಳಕ್ಕೆ ನಾನಿದ್ದುಬಿಡುತ್ತಿದ್ದೆ .

         " ಪಪ್ಪಾ .. ಲುಕ್ ಅಟ್ ಮೀ ....", ತಲೆ ಎತ್ತಿ ನೋಡಿದೆ , ಚಿಟ್ಟೆಯಂತೆ ಹಾರಿಬಂದ ಮಗಳು ಎದುರಿನ ಸೋಫಾ ಮೇಲೆ ಕುಳಿತ್ತಿದ್ದಳು , ಏನು ದೈರ್ಯ!  ಏನು  ಕಾನ್ಫಿಡೆನ್ಸು! ಸ್ವಲ್ಪವೂ ಸಿಗ್ಗಿಲ್ಲ ಹುಡುಗಿಗೆ !!  ಮೆಚ್ಚುಗೆಯ ನಗು ನನ್ನ ತುಟಿಗಳ ಮೇಲೆ !  ಪಪ್ಪಾ .. ಗೈ  ಇಸ್ ಸೋ ನೈಸ್ .. ಇಟ್ ಸೀಮ್ಸ್ ಹಿ  ಲವ್ಸ್ ಮಿ  ಪಪ್ಪಾ ..  .." 2ನೇ puc  ಓದುತ್ತಿದ್ದ ನನ್ನ ಮಗಳು ಇಷ್ಟೊಂದು ನೇರವಾಗಿ ಹೇಳುತ್ತಿದ್ದರೆ .., ಮೂಕವಾಗಿ ಕೇಳುವ ಸರದಿ ನನ್ನದಾಗಿತ್ತು . ಮಡದಿಯೊಂದಿಗೆ ಅಂದಿದ್ದೆ , ಕಾಲೇಜ್ ಡೇಸ್ ನಲ್ಲಿ  ಒಂದು ಹುಡುಗಿಗೆ ಲೈನ್ ಹಾಕ್ತ ಇದ್ದಿದ್ದೆ  ಕಣೆ... ' , ಅದಕ್ಕವಳು " ಅಯ್ಯೋ ಅವ್ಳಿನ್ನೇ ಮದುವೆಯಾಗೊದಲ್ವೇನ್ರಿ!! " ಅಂತ  ನಗೆಯಾಡಿದ್ದಳು .



         ಇವತ್ತು  ನನ್ನ ಮಗಳಿಗೆ  ಕೇಳಬೇಕಿದೆ , 'ಆತ  ಬದುಕಿನ ಭಾರವನ್ನು ತೆಗೆದುಕೊಳ್ಳಲು ತಯಾರಾಗಿರುವನಾ  ? ಅಥವ ನೀನು ನಕ್ಕ ನಗುವನ್ನು ಜೇಬಲ್ಲಿರಿಸಿಕೊಂಡು ಮುಂದೆ ನಡೆದುಬಿಡುತ್ತನಾ ?   ಕಾಲ , ಮನಸು ಎರಡೂ ಪಕ್ವವಾಗಿಲ್ಲದ ಕತೆಯನ್ನು ಆಕೆಗೆ ಹೇಳಬೇಕಿದೆ ನಾನು ..........


ಚೈತ್ರ  ಬಿ .ಜಿ.



         

Tuesday, October 2, 2012

ಹೇ ರಾಮ್ .....

        



  " ಮಹಾತ್ಮ ಗಾಂಧೀಜಿಯವರು 1869 oct  2 ಗುಜರಾತಿನ ಪೋರಬಂದರಿನಲ್ಲಿ  ಜನಿಸಿದರು , ಇವರು ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ ", ನಾವು ಶಾಲಾದಿನಗಳಲ್ಲಿ   ಈ  ಸಾಲುಗಳನ್ನು  ಓದಿದಷ್ಟು  ಕೇಳಿದಷ್ಟು  ಇನ್ಯಾವ  ಸಾಲುಗಳನ್ನು  ಓದಿರಲಿಕ್ಕಿಲ್ಲ , ಕೇಳಿರಲಿಕ್ಕಿಲ್ಲ . ತಮಾಷೆಯೆಂದರೆ  ನಮಗೆ "ಸ್ವಾತಂತ್ರ್ಯ  ", ಹಾಗಂದರೇನು ಗೊತ್ತಿಲ್ಲ ," ದೇಶ?" ,   ಅದೂ ಗೊತ್ತಿಲ್ಲ , ಬಹುಷಃ ಸ್ವಾತಂತ್ರ್ಯವೆಂದರೆ , ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಬರೆಯಬೇಕಾದ ಒತ್ತಕ್ಷರದ ಕಷ್ಟದ ಒಂದು  "ಪದ ".  ಇನ್ನು ಗಾಂಧಿಜಯಂತಿ , ಸ್ವಾತಂತ್ರ್ಯ ದಿನಚರನಚರೆಯಂದು ನಮ್ಮ ಭಾಷಣ ಬೇರೆ :- " ಮಹಾತ್ಮ ಗಾಂದಿಜಿಯವರು 1969 ..... ರಿಂದ ಹಿಡಿದು ಅವರು ಸ್ವಾತಂತ್ರ್ಯ ತಂದುಕೊಟ್ಟರು" ಎನ್ನುವಲ್ಲಿಗೆ ಒಂದೇ ಉಸಿರಿಗೆ ಉಸುರಿ ಬರುತ್ತಿದ್ದೆವು .

            
              ಹೀಗೆಲ್ಲ ಯೋಚಿಸುತ್ತಿದಾಗ  ಗಾಂಧಿಜಿಯವರ  ತತ್ತ್ವಗಳ ಬಗ್ಗೆ   ನೆನಪಿಸಿಕೊಳ್ಳುವುದಕ್ಕೆ , ಯೋಚಿಸುವುದಕ್ಕೆ ಒಂದು ಅವಕಾಶವಾದಂತೆನಿಸಿತು .  ಅವರು ಪಾಲಿಸಿದ ತತ್ತ್ವಗಳ  ಬಗ್ಗೆ ಸಂಗ್ರಹಿಸಿ ಬರೆದ ಮಾಹಿತಿಗಳು ;
             
    ಸತ್ಯ
    
     "ನಿಜ " ಅಥವಾ" ಸತ್ಯ " ದ ಪರಿಶೋಧನೆಯೆಂಬ ವಿಸ್ತೃತ ಉದ್ದೇಶಕ್ಕಾಗಿ ಗಾಂಧಿಯವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ತಮ್ಮ ತಪ್ಪುಗಳಿಂದಲೇ ಕಲಿತು ಹಾಗೂ ತಮ್ಮ ಮೇಲೆಯೇ ಪ್ರಯೋಗಗಳನ್ನು ಮಾಡಿಕೊಂಡು ಅವರು ಇದನ್ನು ಸಾಧಿಸಲು ಯತ್ನಿಸಿದರು. ತಮ್ಮದೇ ಆದ ಪೈಶಾಚಿಕತೆಗಳನ್ನು, ಅಂಜಿಕೆಗಳನ್ನು ಮತ್ತು ಅಭದ್ರತೆಗಳನ್ನು ನಿವಾರಿಸಿಕೊಂಡದ್ದು ತಾವು ಸೆಣಸಿದ ಅತಿ ಮುಖ್ಯ ಸಮರವಾಗಿತ್ತೆಂದು ಗಾಂಧಿಯವರು ತಿಳಿಸಿದರು. "ದೇವ" ರೇ ಸತ್ಯ ಎಂದು ಹೇಳುವ ಮೂಲಕ ಗಾಂಧಿಯವರು ತಮ್ಮ ನಂಬಿಕೆಗಳ ಸಾರಾಂಶವನ್ನು ಹೇಳಿದರು. ನಂತರ ಅವರು "ಸತ್ಯವೇ ದೇವರು" ಎಂದು ಆ ಹೇಳಿಕೆಯನ್ನು ಬದಲಿಸಿದರು. ಹಾಗಾಗಿ, ಗಾಂಧಿಯವರ ತತ್ವದಲ್ಲಿ, ಸತ್ಯ (ನಿಜ)ವೇ "ದೇವರು."ಮಹಾತ್ಮ ಗಾಂಧಿಯವರು ಅಹಿಂಸೆಯ ತತ್ವದ ಸೃಷ್ಟಿಕರ್ತೃರಲ್ಲದಿದ್ದರೂ, ರಾಜಕೀಯ ಕ್ಷೇತ್ರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಅದನ್ನು ಅಳವಡಿಸುವಲ್ಲಿ ಅವರು ಮೊದಲಿಗರಾಗಿದ್ದರು.


ಅಹಿಂಸಾ

ಭಾರತೀಯ ಧಾರ್ಮಿಕ ಚಿಂತನೆಯಲ್ಲಿ ಅಹಿಂಸೆ  ಮತ್ತು ಪ್ರತಿರೋಧವಿಲ್ಲದಿರುವಿಕೆ ಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಹಾಗಾಗಿ, ಹಿಂದು, ಬೌದ್ಧ, ಜೈನ್‌, ಯಹೂದಿ ಮತ್ತು ಕ್ರಿಶ್ಚಿಯನ್ ಪ್ರಸಂಗಗಳಲ್ಲಿ ಪುನರುಜ್ಜೀವನಗಳನ್ನು ಕಂಡಿವೆ. ಆತ್ಮಚರಿತ್ರೆಯಲ್ಲಿ  ಉಲ್ಲೇಖವಾದ ಅವರದ್ದೇ ಮಾತುಗಳು :-
"ನಾನು ಹತಾಶ ಸ್ಥಿತಿಯಲ್ಲಿದ್ದಾಗ, ಇತಿಹಾಸದುದ್ದಕ್ಕೂ ಸತ್ಯ ಮತ್ತು ಪ್ರೇಮದ ಮಾರ್ಗವೇ ಗೆದ್ದಿದೆ ಎಂಬುದನ್ನು ನಾನು ನೆನಪಿಸಿಕೊಳ್ಳುವೆ. ಪ್ರಜಾಪೀಡಕರು ಮತ್ತು ಕೊಲೆಗಾರರು ಒಮ್ಮೆ ಅಜೇಯರಾಗಿರುವಂತೆ ಕಾಣುತ್ತಾರಾದರೂ, ಅಂತಿಮವಾಗಿ, ಅವರು ಯಾವಾಗಲೂ ಕೆಳಗೆ ಬೀಳುತ್ತಾರೆ; ಯಾವಾಗಲೂ ಈ ಕುರಿತು ಯೋಚಿಸುತ್ತಾರೆ 
"ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತಲೇ ಹೋದರೆ ಇಡೀ ಪ್ರಪಂಚವೇ ನಾಶವಾಗುವುದು."
"ನಾನು ಪ್ರಾಣ ತೆರಲು ಸಿದ್ಧಲಿರಲಿಕ್ಕೆ ಹಲವಾರು ಕಾರಣಗಳಿವೆ, ಆದರೆ ಪ್ರಾಣ ತೆಗೆಯಲು ಸಿದ್ಧನಿರಲಿಕ್ಕೆ ಯಾವ ಕಾರಣವೂ ಇಲ್ಲ."

    ಸಸ್ಯಾಹಾರ ತತ್ವ
   ಬಾಲಕನಾಗಿದ್ದಾಗ ಗಾಂಧಿಯವರು ಪ್ರಾಯೋಗಿಕವಾಗಿ ಮಾಂಸಾಹಾರ ಸೇವಿಸುತ್ತಿದ್ದರು. ಭಾಗಶ: ತಮ್ಮ ಅಂತರ್ಗತ ಕುತೂಹಲ ಮತ್ತು ಅವರ ಸ್ನೇಹಿತ ಮತ್ತು ಪೀರ್ ಶೇಕ್ ಮಹ್ತಾಬ್‌ನ ಒತ್ತಾಯವೇ ಇದಕ್ಕೆ ಕಾರಣ. ಭಾರತದಲ್ಲಿ, ಸಸ್ಶಹಾರ ದ ಕಲ್ಪನೆಯು ಹಿಂದೂ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ ಮತ್ತು ಅವರ ಹುಟ್ಟೂರಿನನಲ್ಲಿ ಬಹುಪಟ್ಟು ಹಿಂದುಗಳು ಸಸ್ಯಾಹಾರಿಗಳಾಗಿದ್ದರು ಮತ್ತು ಬಹುಶ: ಎಲ್ಲಾ ಜೈನರೂ ಸಸ್ಯಾಹಾರಿಗಳಾಗಿದ್ದಾರೆ. ಗಾಂಧಿ ಕುಟುಂಬವೂ ಸಹ ಇದಕ್ಕೆ ಹೊರತಾಗಿರಲಿಲ್ಲ. ಲಂಡನ್‌ನಲ್ಲಿ ವ್ಯಾಸಂಗಕ್ಕೆ ಹೊರಡುವ ಮುಂಚೆ, ತಾವು ಮಾಂಸಾಹಾರ, ಮದ್ಯ ಮತ್ತು ಸ್ವಚ್ಛಂದ ಸಂಭೋಗದಲ್ಲಿ ತೊಡಗುವುದಿಲ್ಲವೆಂದು ಗಾಂಧಿಯವರು ತಮ್ಮ ತಾಯಿ ಪುತಲೀಬಾಯಿ ಮತ್ತು ತಮ್ಮ ಚಿಕ್ಕಪ್ಪ ಬೇಚಾರ್ಜೀ ಸ್ವಾಮಿಯವರಿಗೆ ಮಾತು ಕೊಟ್ಟಿದ್ದರು. ಅವರು ತಮ್ಮ ಮಾತಿಗೆ ಬದ್ಧರಾಗಿದ್ದು ಪಥ್ಯಕ್ಕಿಂತಲೂ ಹೆಚ್ಚಿನ ಲಾಭವನ್ನೇ ಪಡೆದರು: ತಮ್ಮ ಜೀವಾವಧಿಯ ತತ್ವಗಳಿಗೆ ಒಂದು ನೆಲೆಯನ್ನು ಕಂಡುಕೊಂಡರು. ಗಾಂಧಿಯವರು ಪ್ರೌಢಾವಸ್ಥೆಗೆ ಬಂದಾಗ, ಅವರು ಕಟ್ಟುನಿಟ್ಟಾದ . ಸಸ್ಸ್ಯಾಹರಿಯಾದರು ಈ ವಿಷಯದ ಬಗ್ಗೆ ದಿ ಮಾರಲ್ ಬೇಸಿಸ್ ಆಫ್ ವೆಜಿಟೇರಿಯನಿಸಮ್ ಎಂಬ ಪುಸ್ತಕವನ್ನು ಮತ್ತು ಹಲವು ಲೇಖನಗಳನ್ನು ಬರೆದರು, ಇವುಗಳಲ್ಲಿ ಕೆಲವನ್ನು ಲಂಡನ್‌ ಶಾಖಾಹಾರಿಗಳ ಸಂಘದ ಪ್ರಕಟಣೆಯಾದ ದಿ ವೆಜಿಟೇರಿಯನ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಈ ಅವಧಿಯಲ್ಲಿ ಯುವ ಗಾಂಧಿಯವರು ಹಲವು ಮಹಾನ್ ವ್ಯಕ್ತಿಗಳಿಂದ ಪ್ರೇರಿತರಾಗಿ ಲಂಡನ್ ಶಾಖಾಹಾರಿ ಸಂಘದ ಅಧ್ಯಕ್ಷ ಡಾ. ಜೊಸಿಯಾ ಓಲ್ಡ್‌ಫೀಲ್ಡ್‌ ಅವರ ಸ್ನೇಹಿತ
 
 ಬ್ರಹ್ಮಚರ್ಯೆ
   
ಸನ್ಯಾಸದೊಂದಿಗೆ ಹೆಚ್ಚಿನ ಸಂಬಂಧವನ್ನು ಹೊಂದಿರುವ ಆಧ್ಯಾತ್ಮಿಕ ಮತ್ತು ಕಾರ್ಯರೂಪದ ಶುದ್ಧತೆಗಳನ್ನೊಳಗೊಂಡ ಬ್ರಹ್ಮಚರ್ಯೆ ಯ ತತ್ವದಿಂದ ಅವರ ಈ ನಿರ್ಧಾರವು ಆಳವಾಗಿ ಪ್ರಭಾವಿತವಾಗಿತ್ತು. ಬ್ರಹ್ಮಚರ್ಯೆಯೇ ದೇವರ ಸನಿಹಕ್ಕೆ ಹೋಗಲು ಸೂಕ್ತ ಮಾರ್ಗ ಹಾಗೂ ಆತ್ಮಸಾಕ್ಷಾತ್ಕಾರಕ್ಕೆ ಪ್ರಾಥಮಿಕ ಅಡಿಪಾಯ ಎಂದು ಗಾಂಧಿಯವರು ಪರಿಗಣಿಸಿದ್ದರು. ಅವರ ಆತ್ಮಚರಿತ್ರೆಯಲ್ಲಿ ಅವರ ಕಾಮುಕ ಬೇಡಿಕೆಗಳ ವಿರುದ್ಧದ ಸಮರ ಮತ್ತು ಅವರ ಬಾಲ್ಯವಧು ಕಸ್ತು ರಿಬಾ ರೊಂದಿಗಿನ ತೀವ್ರ ಈರ್ಷ್ಯೆಯ ಘಟನೆಗಳನ್ನು ವಿವರಿಸಿದ್ದಾರೆ. ಭೋಗಾಪೇಕ್ಷೆಗಿಂತಲೂ ಹೆಚ್ಚಾಗಿ ಪ್ರೀತಿಸುವುದನ್ನು ಕಲಿಯಲು ಬ್ರಹ್ಮಚಾರಿಯಾಗಿ ಉಳಿಯುವುದು ತಮ್ಮ ವೈಯಕ್ತಿಕ ಹೊಣೆ ಎಂದು ಅವರು ತಿಳಿದಿದ್ದರು. ಗಾಂಧಿಯವರ ಪ್ರಕಾರ ಬ್ರಹ್ಮಚರ್ಯೆಯ ಎಂಬುದು "ಆಲೋಚನೆ, ಮಾತು, ಕೃತಿಗಳ ಮೂಲಕ ನಡೆಸುವ ಇಂದ್ರಿಯಗಳ ನಿಗ್ರಹ"ವಾಗಿತ್ತು.

ಸರಳತೆ

ಸಮಾಜ ಸೇವೆಯಲ್ಲಿ ನಿರತನಾಗಿರುವ ವ್ಯಕ್ತಿಯು ಸರಳ ಜೀವನ  ನಡೆಸತಕ್ಕದ್ದು, ಇದು ಬ್ರಮ್ಮಚರ್ಯೇ ಯತ್ತ ಒಯ್ಯುತ್ತದೆ ಎಂದು ಗಾಂಧಿಯವರು ಮನ:ಪೂರ್ವಕವಾಗಿ ನಂಬಿದ್ದರು. ಅವರು ದಕ್ಷಿಣ ಆಫ್ರಿಕಾದಲ್ಲಿ ಅನುಸರಿಸುತ್ತಿದ್ದ ಪಾಶ್ಚಾತ್ಯ
ಜೀವನಶೈಲಿಯನ್ನು ತ್ಯಜಿಸುವ ಮೂಲಕ ಅವರ ಸರಳತೆಯು ಆರಂಭವಾಯಿತು. ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಿ, ಸರಳ ಜೀವನ ಶೈಲಿಯನ್ನು ರೂಪಿಸಿಕೊಂಡು, ತಮ್ಮ ಉಡುಪುಗಳನ್ನು ತಾವೇ ಒಗೆದುಕೊಳ್ಳುತ್ತಿದ್ದ ಅವರು, ಇದು "ತಮ್ಮನ್ನೇ ಸೊನ್ನೆಗೆ ಕುಗ್ಗಿಸಿಕೊಳ್ಳುವ" ವಿಧಾನ ಎನ್ನುತ್ತಿದ್ದರು. ಸಮುದಾಯಕ್ಕೆ ತಾವು ಸಲ್ಲಿಸಿದ್ದ ನಿಷ್ಥಾವಂತ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿ ತಮ್ಮ ಜನ್ಮಸಂಬಂಧಿಗಳು ನೀಡಿದ್ದ ಉಡುಗೊರೆಗಳನ್ನು ಅವರು ಒಂದು ಸನ್ನಿವೇಶದಲ್ಲಿ ಹಿಂದಿರುಗಿಸಿದರು.
ಗಾಂಧಿಯವರು ಪ್ರತಿ ವಾರದಲ್ಲೂ ಒಂದು ದಿನ ಮೌನ ವ್ರತವನ್ನು ಆಚರಿಸುತ್ತಿದ್ದರು. ಮಾತನಾಡುವಿಕೆಯಿಂದ ದೂರವುಳಿಯುವ ಅಭ್ಯಾಸದಿಂದಾಗಿ ತಮ್ಮಲ್ಲಿ ಆಂತರಿಕ ಶಾಂತಿಯು  ತುಂಬಿಕೊಂಡಿದೆ ಎಂದು ಅವರು ನಂಬಿದ್ದರು. ಹಿಂದೂ ತತ್ವಗಳಾದ ಮೌನ  ಮತ್ತು ಶಾಂತಿ ಗಳಿಂದ ಈ ಪ್ರಭಾವವನ್ನು ಸೆಳೆಯಲಾಗಿತ್ತು. ಅಂತಹ ದಿನಗಳಂದು ಅವರು ಕಾಗದದ ಮೇಲೆ ಬರೆಯುವುದರ ಮೂಲಕ ಇತರರೊಂದಿಗೆ ಸಂವಹನ ಮಾಡುತ್ತಿದ್ದರು. ತಮ್ಮ 37ನೆಯ ವಯಸ್ಸಿನಿಂದ ಮೂರೂವರೆ ವರ್ಷಗಳವರೆಗೆ ಗಾಂಧಿಯವರು ವಾರ್ತಾಪತ್ರಿಕೆಗಳನ್ನು ಓದಲು ನಿರಾಕರಿಸುತ್ತಿದ್ದರು. ಏಕೆಂದರೆ ತಮ್ಮ ಆಂತರಿಕ ಅಶಾಂತಿಗಿಂತ ವಿಶ್ವದ ವಿದ್ಯಮಾನಗಳ ಪ್ರಕ್ಷುಬ್ಧ ಸ್ಥಿತಿಯು ತಮಗೆ ಹೆಚ್ಚು ಗೊಂದಲವನ್ನುಂಟುಮಾಡುತ್ತವೆ ಎಂಬುದು ಅವರ ಸಮರ್ಥನೆಯಾಗಿತ್ತು.
  
ಧರ್ಮಶ್ರದ್ಧೆ

ಹಿಂದೂ ಧರ್ಮದಲ್ಲಿ ಜನಿಸಿದ ಗಾಂಧಿಯವರು, ತಮ್ಮ ತತ್ವಗಳಲ್ಲಿ ಬಹುಪಾಲನ್ನು ಹಿಂದೂ ಧರ್ಮದಿಂದ ಪಡೆದುಕೊಂಡು, ತಮ್ಮ ಜೀವನವುದ್ದಕ್ಕೂ ಹಿಂದೂಧರ್ಮವನ್ನು ಪರಿಪಾಲಿಸಿದರು. ಓರ್ವ ಸಾಮಾನ್ಯ ಹಿಂದುವಾಗಿ, ಅವರು ಎಲ್ಲಾ ಧರ್ಮಗಳನ್ನೂ ಸಮಾನ ದೃಷ್ಟಿಯಲ್ಲಿ ಕಂಡರು, ಬೇರೊಂದು ಧರ್ಮಕ್ಕೆ ತಮ್ಮನ್ನು ಮತಾಂತರಗೊಳಿಸುವ ಎಲ್ಲ ಯತ್ನಗಳನ್ನೂ ಅವರು ತಳ್ಳಿಹಾಕಿದರು. ಅವರು ಅತ್ಯಾಸಕ್ತ ದೇವತಾಶಾಸ್ತ್ರಜ್ಞರಾಗಿದ್ದು ಎಲ್ಲಾ ಪ್ರಮುಖ ಧರ್ಮಗಳ ಬಗ್ಗೆಯೂ ವಿಸ್ತೃತವಾಗಿ ಓದಿದ್ದರು. 

ಚೈತ್ರ  ಬಿ .ಜಿ .