Wednesday, September 12, 2012

ಅಡಿಕೆಗೆ ಸಿಕ್ಕ ಮಾನ




ಮಲೆನಾಡು , ಉತ್ತರ ಕನ್ನಡ , ದಕ್ಷಿಣ ಕನ್ನಡದ ಅಡಿಕೆ ಬೆಳೆಗಾರರ ಮುಖದ ಮೇಲೊಂದು
ಮುಗುಳುನಗು ತಂದ ವಿಷಯವೆಂದರೆ ಈ ಸಲದ ಬೆಳೆಗೆ ಬಂದ ಒಳ್ಳೆಯ ಧಾರಣೆ . ಈ ಸಲ ಅಡಿಕೆ
ಬೆಳೆಗಾರರು ಅಡಿಕೆ ಬೆಳೆಗಾಗಿ ಪಟ್ಟ ಬವಣೆ ಅವರಿಗಷ್ಟೇ ಗೊತ್ತು . ಕೂಲಿಕೆಲಸಗಾರರ
ಅಭಾವ ಆ ಮಟ್ಟಕ್ಕೆ ತಲುಪಿಯಾಗಿದೆ .


ಹಳ್ಳಿಗಳಲ್ಲಿರುವ ಕೂಲಿಕೆಲಸಗಾರರು ಹೋಟೆಲ್ ಮತ್ತು
ಇನ್ನಿತರ ಕೆಲಸ ಅರಸಿಕೊಂಡು ಬೆಂಗಳೂರು ಬಸ್ಸ ಹತ್ತಿಯಾಗಿದೆ ! ಉಳಿದಿರುವ ಕೆಲಸಗಾರರೂ
ತೋಟದ ಕೆಲಸ 'ತಾ ಒಲ್ಲೆ ' ಎಂದು ಪ್ಯಾಂಟು ಏರಿಸಿ ಹತ್ತಿರದ ಚಿಕ್ಕ ಪುಟ್ಟ
ಪಟ್ಟಣಗಳತ್ತ ಮುಖ ಮಾಡುತ್ತಿದ್ದಾರೆ .ಇವರು ತೋಟದ ಕೆಲಸದತ್ತ ಒಲವು ತೋರುವ ಯಾವುದೇ
ಲಕ್ಷಣಗಳು ಕಾಣುತ್ತಿಲ್ಲ . ದೊಡ್ಡ ಮೊತ್ತ ಕೊಟ್ಟೋ.., ಅಥವ ಬೇರೆ ಇನ್ನೆಲ್ಲಿಂದಲೋ
ಕೂಲಿಯಳುಗಳನ್ನು ತಂದು ಕೆಲಸ ಮಾಡಿಸುವುದು ತೋಟದ ಯಜಮಾನನಿಗೊಂದು ಸವಾಲಿನ ಕೆಲಸವೇ
! ಅದೂ ಕೂಡ ಅವರು ಹೇಳಿದ್ದೆ ರೇಟ್! ಬಂದಿದ್ದೆ ಟೈಮ್ ! ಮಾಡಿದಷ್ಟೇ ಕೆಲಸ!!..
ಅಪ್ಪಿತಪ್ಪಿ ' ಏನಪ್ಪಾ ಇದು ಯಾಕಪ್ಪ ಹೀಗೆ ಎಂದು ಕೇಳಿದಿರೋ ..., ಅಷ್ಟೇ ,ಅವನು rite !
ನಾಳೆಗೆ ಅದೂ ಇಲ್ಲ ! ಅಡಿಕೆ ಕೊಯ್ಯಲು ಜನರ ಅಭಾವ ! ಹಗ್ಗ ಹಿಡಿಯಲು ಅಭಾವ ! ಅಡಿಕೆ
ಹೆಕ್ಕುವರಿಲ್ಲ ! ಮನೆಗೆ ಸಾಗಿಸುವರಿಲ್ಲ ! ಅಡಿಕೆ ಸುಲಿಯುವರಿಲ್ಲ ! ಬೇಯಿಸಿ...
ಣಗಿಸಿ .. ಇಲ್ಲ.. ಇಲ್ಲ..ಇಲ್ಲ
ಈ ಸಮಸ್ಯಗಳಿಗೆ ಪ್ರಕ್ರತಿ ಮತ್ತು ಕಾಲವೇ ಉತ್ತರಿಸಬೇಕೆನೋ .., ,
ಆದರೆ ಈ ಸಲ ಅಡಿಕೆ ಬೆಳೆಗಾರನ ಶ್ರಮಕ್ಕೋ ಏನೋ ಎಂಬಂತೆ ಧಾರಣೆಯಲ್ಲಿ ಕೊಂಚ ಏರಿಕೆ
ಕಂಡು ಬರುತ್ತಿದೆ . ಆದ್ರೆ ಮದ್ಯಸ್ಥಿಕೆ , ಸಾಗಣೆ ಮುಂತಾದ ಯಾವುದೇ ಬಾದೆ ಅಡಿಕೆ
ಬೆಳೆಗಾರನಿಗೆ ತಾಕದಿರಲಿ . ಎಲ್ಲ ಸ್ಥಳೀಯ ಹಾಗೂ ಚಿಕ್ಕ ದೊಡ್ಡ ಪ್ರತಿಯೊಬ್ಬ
ಬೆಳೆಗಾರನಿಗೂ ನ್ಯಾಯುತವಾದ ಬೆಲೆ ಸಿಗುವಂತಾಗಲಿ
ಚೈತ್ರ B .G . 

(ಇಕನಸು.ಕಾ o . ನಲ್ಲಿ ಪ್ರಕಟ ) 

No comments:

Post a Comment

----------------------------------